ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

51ಟಾಡಾ ಬಂಧಿ-ಗ-ಳಲ್ಲಿ 26 ಜನರ ವಿರುದ್ಧದ ಪ್ರಕರಣಗಳ ವಜಾ

By Staff
|
Google Oneindia Kannada News

ಬೆಂಗಳೂರು: - ಮೈಸೂರಿನ ಕೇಂದ್ರ ಕಾರಾ-ಗೃ-ಹ-ದ-ಲ್ಲಿ-ರು-ವ 51 ಟಾಡಾ ಬಂಧಿ-ಗ-ಳ-ಲ್ಲಿ ಕೇವಲ 26 ಮಂದಿಯ ವಿರುದ್ಧದ ಟಾಡಾ ಪ್ರಕರಣಗಳನ್ನು ಮಾತ್ರ ನ್ಯಾಯಾಲಯ ಸೋಮವಾರ ಕೈಬಿಟ್ಟಿದೆ.

ಟಾಡಾ ಮೊಕದ್ದಮೆಯನ್ನು ಕೈಬಿಡಲಾದವರ ಜಾಮೀ-ನು ಅರ್ಜಿ-ಗ-ಳ-ನ್ನು ಅಂಗೀ-ಕ-ರಿ-ಸಿ-ರುವ ಸೆಷ-ನ್ಸ್‌ ನ್ಯಾಯಾ-ಲ-ಯ-ದ ನ್ಯಾಯ-ಮೂ-ರ್ತಿ -ರಾ-ಜೇಂ-ದ್ರ ಪ್ರಸಾ-ದ್‌, ವಿಚಾ-ರ-ಣೆ-ಯ-ನ್ನು ಆಗ-ಸ್ಟ್‌ 24 ಕ್ಕೆ ಮುಂದೂ-ಡಿ-ದ್ದಾ-ರೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಆರೋಪಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಂದಕ್ಕೊಂದು ಸಂಬಂಧ ಇರುವುದರಿಂದ ಒಂದೇ ಪೀಠ ವಾದಗಳನ್ನು ಆಲಿಸಬೇಕಾಗಿದೆ. ಹಾಗಾಗಿ ಸೋಮವಾರವೇ 51 ಆರೋಪಿಗಳ ಪ್ರಕರಣಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದ್ದಾರೆ.

ರಾಜ್ಯ ಸರಕಾರ ಈಗಾಗಲೇ ಸ್ಪಷ್ಟಪಡಿಸಿರುವಂತೆ ಆರೋಪಿಗಳ ಮೇಲಿನ ಜಾಮೀನು ಅರ್ಜಿಗಳನ್ನು ಸರಕಾರ ವಿರೋಧಿಸುವುದಿಲ್ಲ. ಮುಖ್ಯಮಂತ್ರಿಗಳ ನೇತೃತ್ವದ ಉನ್ನತ ಮಟ್ಟದ ಬಿಕ್ಕಟ್ಟು ನಿವಾರಣಾ ಸಮಿತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸಂಧಾನಕ್ಕಾಗಿ ಎರಡನೇ ಬಾರಿಗೆ ಕಾಡಿಗೆ ಹೋಗಿರುವ ಸಂಧಾನಕಾರ ಗೋಪಾಲ್‌ ಅವರಿಂದ ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ಆರೋಪಿಗಳ ವಿರುದ್ಧದ ಟಾಡಾ ಪ್ರಕರಣಗಳನ್ನು ಕೈಬಿಡಬಾರದೆಂದು ಸೆಷನ್ಸ್‌ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ , ಅಬ್ದುಲ್‌ ಕರೀಂ ಅವರು ಮೇಲ್ಮನವಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈಗಾಗಲೇ ಕೇವಿಯಟ್‌ ಅರ್ಜಿ ಸಲ್ಲಿಸಿದೆ ಎಂದು ಖರ್ಗೆ ತಿಳಿಸಿದ್ದಾರೆ.

(ಯುಎ-ನ್‌-ಐ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X