ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೀತದಾಳುಗಳಂತಿದ್ದ ಬಾಲಕಾರ್ಮಿಕರ ಬಿಡುಗಡೆ
ದಾವಣಗೆರೆ : ಜಿಲ್ಲೆಯ ಪೊಲೀಸರು ಇಲ್ಲಿನ ಮಿಠಾಯಿ ಅಂಗಡಿ ಮಾಲಿಕರ ಮನೆಗಳಿಗೆ ಧಾಳಿ ಮಾಡಿ ಜೀತದಾಳುಗಳಂತೆ ದುಡಿಯುತ್ತಿದ್ದ 7ರಿಂದ 12 ವರ್ಷದೊಳಗಿನ 15ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ಬಿಡುಗಡೆ ಮಾಡಿದ್ದಾರೆ.
ತಮಿಳುನಾಡಿನಿಂದ ಈ ಬಾಲಕಾರ್ಮಿಕರನ್ನು ದಾವಣಗೆರೆಗೆ ಕರೆತಂದು, ಮಿಠಾಯಿ ಅಂಗಡಿ ಮಾಲಿಕರು
ಅವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ವಿಷಯವನ್ನು ತಮಿಳುನಾಡಿನ ತೂತುಕಡೆಯ ಬಾಲಕಾರ್ಮಿಕರ ಕ್ಷೇಮಾಭಿವೃದ್ಧಿ ಅಧಿಕಾರಿ ಡೇವಿಡ್ ದಾವಣಗೆರೆ ಪೊಲೀಸರಿಗೆ ತಿಳಿಸಿ-ದ್ದಾ-ರೆ. ಆ ಪ್ರಕಾರ ದಾವಣಗೆರೆಯ ಬಸವರಾಜಪೇಟೆ, ಶಿವಾಜಿ ನಗರ, ಅಹ್ಮದ ನಗರಗಳಲ್ಲಿನ ಮಿಠಾಯಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಬಿಡುಗಡೆ ಮಾಡಿದ್ದಾರೆ.
Comments
Story first published: Monday, August 21, 2000, 0:00 [IST]