ಗುಬ್ಬಿ ಬಳಿ ಹಳಿತಪ್ಪಿ ಚಲಿಸಿದ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು
ತುಮಕೂರು : ಬೆಂಗಳೂರಿನಿಂದ ಮೀರಜ್ಗೆ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ನ ನಾಲ್ಕು ಬೋಗಿಗಳು ಗುಬ್ಬಿ ಬಳಿ ಹಳಿತಪ್ಪಿ ಚಲಿಸಿದ್ದು , ಬೋಗಿಗಳಲ್ಲಿದ್ದ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಬ್ಬಿ ರೈಲು ನಿಲ್ದಾಣದಿಂದ ಹೊರಟ ರೈಲು ನಿಲ್ದಾಣದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ರಾತ್ರಿ 10.30ರ ಸುಮಾರಿಗೆ ನೇರ ಹಳಿಯಲ್ಲಿ ಚಲಿಸುವ ಬದಲು ಮುಂಜಾಗೃತಾ ಹಳಿಯಲ್ಲಿ (ಡೆಡ್ಲೈನ್ ಹಳಿ )ಯಲ್ಲಿ ಚಲಿಸಿದ್ದು , 16 ಬೋಗಿಗಳಲ್ಲಿ 4 ಬೋಗಿಗಳು ಹಳಿ ತಪ್ಪಿ ಚಲಿಸಿ ಮರಳಿನಲ್ಲಿ ಹೂತು ಹೋಗಿದ್ದವು. ರೈ-ಲಿ-ನ-ಲ್ಲಿ ಸಾವಿ-ರ ಪ್ರಯಾ-ಣಿ-ಕ-ರಿ-ದ್ದು, ಯಾವು-ದೇ ಅಪಾ-ಯ ಸಂಭ-ವಿ-ಸಿ-ಲ್ಲ .
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಮಾಸ್ಟರ್ ನಾಗಣ್ಣ, ಕ್ಯಾಬಿನ್ಮನ್ ಕಾಳೇಗೌಡ, ಚಾಲಕ ಶಿವಲಿಂಗಂ ಮತ್ತು ಸಹಾಯಕ ಚಾಲಕ ರಾಜಯ್ಯ ಹಾಗೂ ರಾತ್ರಿ ಪಾಳಿ-ಯಲ್ಲಿದ್ದ ಇತರ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ರೈಲು ನಿಲ್ದಾಣದ ಮುಂದಿನ ಸಿಗ್ನಲ್ ಸರಿಯಾಗಿ ಕೆಲಸ ನಿರ್ವಹಿಸುತ್ತಿ-ರು-ವು-ದು ಹಾಗೂ ರೂಟ್ ಪಾಯಿಂಟ್ ಸರಿಯಾಗಿ ಸೆಟ್ ಮಾಡದೇ ಇರುವು-ದು ಅನಾಹುತಕ್ಕೆ ಕಾರಣ ಎಂದು ರೈಲ್ವೇ ತಂತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.