ಇದು ಸೈಕ್ಲೋನ್ ಇಫೆಕ್ಟೇ ಇರಬೇಕು
ಬೆಂಗಳೂರು : ಬೆಂಗಳೂರಿನ ಕಾಡುಗೊಂಡನ ಹಳ್ಳಿಯಲ್ಲಿ ಜಿರ್ರೋ ಎಂದು ಸುರಿಯುತ್ತಿದ್ದ ಮಳೆಗೆ ತೊಯಿಸಿಕೊಳ್ಳುತ್ತಾ , ಯಾರದೋ ಕೈಸನ್ನೆಗಾಗಿ ಕಾಯುತ್ತಾ ಸಾಲಾಗಿ ನಿಂತಿದ್ದ 12 ಆಟೋ ರಿಕ್ಷಾಗಳ ಮೇಲೆ, ಸಂಟ್ಸ್ಗಟ್ಟಲೆ ಹರಡಿ ನಿಂತಿದ್ದ ಮರ ಲಟ ಲಟಾರನೆ ಮುರಿದು ಬಿದ್ದು ಅಪ್ಪಚ್ಚಿ ಮಾಡಿ ಬಿಟ್ಟಿದೆ.
ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಟಿಪಿಕಲ್ ಮಳೆಗಾಲ. ಶ್ರಾವಣದ ಮೋಡ. ಇದು ಸೈಕ್ಲೋನ್ ಮಳೆಯೇ ಸರಿ ಎಂದುಕೊಂಡು ತಿಂಗಳುಗಟ್ಟಲೆ ಮುದುರಿ ಮಲಗಿದ ಕೊಡೆಯ ಕಡ್ಡಿಗಳನ್ನು ಸರಿಪಡಿಸಿಕೊಂಡು ಮಂದಿ ನಿನ್ನೆ ಮನೆಯಿಂದ ಹೊರಗೆ ಅಡಿಯಿಟ್ಟರು. ಬೆಂಗಳೂರಿಗೆ ನ್ಯಾಚುರಲ್ ಮಳೆ ಯಾವ ಕಾಲದಲ್ಲಿ ಬರುವುದೋ ಗೊತ್ತಿಲ್ಲಾ... ನಿನ್ನೆಯಂತೂ ರಸ್ತೆ ಬದಿಯಲ್ಲಿ ಹರಿಯುವ ನೀರು, ಕೊಚ್ಚೆ ಕೆಸರು, ಜೊತೆಗೆ ಬೀಸುವ ಗಾಳಿಗೆ ಸ್ವೆಟರನ್ನೂ ಬೇಧಿಸಿಕೊಂಡು ಬಂದು ಕಾಡುವ ಚಳಿ ಬೆಂಗಳೂರಿಗರಿಗೆಲ್ಲಾ ಸಕ್ಕತ್ತಾಗಿ ಕಿರಿಕಿರಿ ಮಾಡಿತು.
ಮೂಡಿಗೆರೆ ಮಂದಿಯಾಂದಿಗೆ ಮಳೆ ಸಹಕರಿಸುತ್ತಿದೆ. ನಾಟಿ, ಉಳುಮೆ ಅಂತ ಅವರು ಹೊಲಗದ್ದೆಗಳಲ್ಲಿ ಓಡಾಡುವ ಅನುಕೂಲ ಅಲ್ಲಿದೆ. ಚಿತ್ರದುರ್ಗದ ಮಂದಿ ಕೆರೆ ಕಟ್ಟೆಯಾಡೆದು ತಮ್ಮ ಸೂರು, ಜಂಕ್ತಿ , ನೆಲವೆಲ್ಲಾ ನೀರು ಪಾಲಾದ ನೋವು ಮರೆಯಲೆತ್ನಿಸುತ್ತಿದ್ದಾರೆ. ಕಾಡಿಸಿ, ಬೇಡಿಸಿ ಬಂದ ಮಳೆ ಧಸಕ್ಕೆಂದು ಬದುಕಿಗೇ ಏಟು ಕೊಡಬಂದಿರುವುದರಿಂದ ಅವರು ಕಷ್ಟ ಪಟ್ಟು ಚೇತರಿಸಿಕೊಳ್ಳುತ್ತಿದ್ದಾರೆ.
ಸೋಮವಾರ ನಾಗಮಂಗಲ, ಕೆಜಿಎಫ್ಗಳಲ್ಲಿ ತಲಾ ಎರಡು ಸೆಂಟಿ ಮೀಟರ್ ಮಳೆ ಸುರಿದಿದೆ. ಮುನ್ಸೂಚನೆ ವಿಶೇಷ ಭವಿಷ್ಯವನ್ನೇನೂ ನುಡಿದಿಲ್ಲ. ಮಳೆಗಾಲವಾದ್ದರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಬಹುದಂತೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications