ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಸೈಕ್ಲೋನ್‌ ಇಫೆಕ್ಟೇ ಇರಬೇಕು

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಕಾಡುಗೊಂಡನ ಹಳ್ಳಿಯಲ್ಲಿ ಜಿರ್ರೋ ಎಂದು ಸುರಿಯುತ್ತಿದ್ದ ಮಳೆಗೆ ತೊಯಿಸಿಕೊಳ್ಳುತ್ತಾ , ಯಾರದೋ ಕೈಸನ್ನೆಗಾಗಿ ಕಾಯುತ್ತಾ ಸಾಲಾಗಿ ನಿಂತಿದ್ದ 12 ಆಟೋ ರಿಕ್ಷಾಗಳ ಮೇಲೆ, ಸಂಟ್ಸ್‌ಗಟ್ಟಲೆ ಹರಡಿ ನಿಂತಿದ್ದ ಮರ ಲಟ ಲಟಾರನೆ ಮುರಿದು ಬಿದ್ದು ಅಪ್ಪಚ್ಚಿ ಮಾಡಿ ಬಿಟ್ಟಿದೆ.

ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಟಿಪಿಕಲ್‌ ಮಳೆಗಾಲ. ಶ್ರಾವಣದ ಮೋಡ. ಇದು ಸೈಕ್ಲೋನ್‌ ಮಳೆಯೇ ಸರಿ ಎಂದುಕೊಂಡು ತಿಂಗಳುಗಟ್ಟಲೆ ಮುದುರಿ ಮಲಗಿದ ಕೊಡೆಯ ಕಡ್ಡಿಗಳನ್ನು ಸರಿಪಡಿಸಿಕೊಂಡು ಮಂದಿ ನಿನ್ನೆ ಮನೆಯಿಂದ ಹೊರಗೆ ಅಡಿಯಿಟ್ಟರು. ಬೆಂಗಳೂರಿಗೆ ನ್ಯಾಚುರಲ್‌ ಮಳೆ ಯಾವ ಕಾಲದಲ್ಲಿ ಬರುವುದೋ ಗೊತ್ತಿಲ್ಲಾ... ನಿನ್ನೆಯಂತೂ ರಸ್ತೆ ಬದಿಯಲ್ಲಿ ಹರಿಯುವ ನೀರು, ಕೊಚ್ಚೆ ಕೆಸರು, ಜೊತೆಗೆ ಬೀಸುವ ಗಾಳಿಗೆ ಸ್ವೆಟರನ್ನೂ ಬೇಧಿಸಿಕೊಂಡು ಬಂದು ಕಾಡುವ ಚಳಿ ಬೆಂಗಳೂರಿಗರಿಗೆಲ್ಲಾ ಸಕ್ಕತ್ತಾಗಿ ಕಿರಿಕಿರಿ ಮಾಡಿತು.

ಮೂಡಿಗೆರೆ ಮಂದಿಯಾಂದಿಗೆ ಮಳೆ ಸಹಕರಿಸುತ್ತಿದೆ. ನಾಟಿ, ಉಳುಮೆ ಅಂತ ಅವರು ಹೊಲಗದ್ದೆಗಳಲ್ಲಿ ಓಡಾಡುವ ಅನುಕೂಲ ಅಲ್ಲಿದೆ. ಚಿತ್ರದುರ್ಗದ ಮಂದಿ ಕೆರೆ ಕಟ್ಟೆಯಾಡೆದು ತಮ್ಮ ಸೂರು, ಜಂಕ್ತಿ , ನೆಲವೆಲ್ಲಾ ನೀರು ಪಾಲಾದ ನೋವು ಮರೆಯಲೆತ್ನಿಸುತ್ತಿದ್ದಾರೆ. ಕಾಡಿಸಿ, ಬೇಡಿಸಿ ಬಂದ ಮಳೆ ಧಸಕ್ಕೆಂದು ಬದುಕಿಗೇ ಏಟು ಕೊಡಬಂದಿರುವುದರಿಂದ ಅವರು ಕಷ್ಟ ಪಟ್ಟು ಚೇತರಿಸಿಕೊಳ್ಳುತ್ತಿದ್ದಾರೆ.

ಸೋಮವಾರ ನಾಗಮಂಗಲ, ಕೆಜಿಎಫ್‌ಗಳಲ್ಲಿ ತಲಾ ಎರಡು ಸೆಂಟಿ ಮೀಟರ್‌ ಮಳೆ ಸುರಿದಿದೆ. ಮುನ್ಸೂಚನೆ ವಿಶೇಷ ಭವಿಷ್ಯವನ್ನೇನೂ ನುಡಿದಿಲ್ಲ. ಮಳೆಗಾಲವಾದ್ದರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಬಹುದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X