ಸೇನೆಗಾಗಿ ಎಚ್ಎಎಲ್ನಿಂದ ಲ್ಯಾನ್ಸರ್ ಹೆಲಿಕಾಪ್ಟರ್
ಬೆಂಗಳೂರು : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತೀಯ ಸೇನೆಗಾಗಿ ನಾಲ್ಕು ಹೆಲಿಕಾಪ್ಟರ್ (ಲ್ಯಾನ್ಸರ್)ಗಳನ್ನು ಸಿದ್ಧಪಡಿಸಲಿದೆ ಎಂದು ಎಚ್ಎಎಲ್ನ ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕರಾಗಿರುವ ಸಿ.ಜಿ.ಕೆ. ಕೃಷ್ಣದಾಸ್ ಹೇಳಿದ್ದಾರೆ.
ಅವರು ಸೋಮವಾರ ಎಚ್ಎಎಲ್ನ ಕೈಗಾರಿಕಾ ಮತ್ತು ಮೆರೈನ್ ಗ್ಯಾಸ್ ಟರ್ಬೈನ್ ವಿಭಾಗದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಲ್ಯಾನ್ಸರ್ ಹೆಲಿಕಾಫ್ಟರ್ನಿಂದ ಸೇನೆಗೆ ಬಹುಮುಖ ಉಪಯೋಗವಿದ್ದು ರಾಕೆಟ್ ಉಡಾವಣಾ ಉಪಕರಣ ಮತ್ತು ಮೆಷಿನ್ಗನ್ಗಳನ್ನು ಅಳವಡಿಸಿಕೊಳ್ಳುವ ಸೌಲಭ್ಯ ಈ ಹೆಲಿಕಾಫ್ಟರ್ನಲ್ಲಿದೆ ಎಂದು ಕೃಷ್ಣ ದಾಸ್ ಹೇಳಿದ್ದಾರೆ. ಲ್ಯಾನ್ಸರ್ನ್ನು ಎಚ್ಎಎಲ್ ಗ್ರೂಪ್ ಸಿದ್ಧ ಪಡಿಸಿದ್ದು, ರಕ್ಷಣಾ ದಳ ಈಗಾಗಲೇ 20 ಕೋಟಿ ರೂಪಾಯಿ ವೆಚ್ಚದ ಲ್ಯಾನ್ಸರ್ ಹೆಲಿಕಾಪ್ಟರ್ಗಳಿಗೆ ಆರ್ಡರ್ ನೀಡಿದೆ.
ಎಚ್ಎಎಲ್ನ ಇತ್ತೀಚಿನ ಉತ್ಪಾದನೆಯಾದ ಏರ್ ಅಂಬ್ಯುಲೆನ್ಸ್ನ್ನು ಬರುವ ವರ್ಷ ನಗರದಲ್ಲಿ ನಡೆಯುವ ಏರ್ ಷೋದಲ್ಲಿ ಪ್ರದರ್ಶಿಸಲಾಗುವುದು. ಇದೂ ಸೇನೆಯಲ್ಲಿ ಗಾಯಗೊಂಡವರನ್ನು ಬೇಗನೆ ಆಸ್ಪತ್ರೆಗೆ ತಲುಪಿಸುವಲ್ಲಿ ಸಹಕರಿಸುತ್ತದೆ ಎಂದು ಅವರು ಹೇಳಿದರು. ಈ ಸಾಲಿನಲ್ಲಿ ಎಚ್ಎಎಲ್ನ ಆದಾಯ ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ಮಿರಿದ್ದು, ಇನ್ನೈದು ವರ್ಷಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಕಂಪನಿಯ ಮುಂದಿದೆ ಎಂದು ಅವರು ಹೇಳಿದರು. ಕಂಪನಿಯು ನೌಕಾದಳಕ್ಕೂ ಇಂಜಿನ್ಗಳನ್ನು ಸರಬರಾಜು ಮಾಡಲು ಒಪ್ಪಿಕೊಂಡಿದ್ದು ಬರುವ ಮಾರ್ಚ್ ತಿಂಗಳೊಳಗೆ ಮೊದಲ ಇಂಜಿನ್ ಅನ್ನು ಭಾರತೀಯ ನೌಕಾದಳಕ್ಕೆ ಕಳುಹಿಸಿಕೊಡಲಾಗುವುದು ಎಂದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications