ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಚ್ಚಾವಸ್ತು ಪೂರೈಸಿ, ಕೆಲಸ ಕೊಡಿ-ದ.ಕ. ಬೀಡಿ ಕಾರ್ಮಿಕರು
ಮಂಗಳೂರು : ಸಾಕಷ್ಟು ಕಚ್ಛಾ ವಸ್ತುಗಳನ್ನು ಪೂರೈಸದಿರುವ ಹಿನ್ನೆಲೆಯಲ್ಲಿ ಟ್ರೇಡ್ ಯೂನಿಯನ್ಗಳು ಮತ್ತು ಮಾಲಿಕರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕೆಂದು ದಕ್ಷಿಣ ಕನ್ನಡ ಬೀಡಿ ಕಾರ್ಮಿಕರ ಸಂಘ ಶುಕ್ರವಾರ ಆಗ್ರಹಿಸಿದೆ.
ಸಾವಿರಾರು ಮಂದಿ ಬೀಡಿ ಕಾರ್ಮಿಕರು ನಗರದಲ್ಲಿ ಮೆರವಣಿಗೆ ಹೊರಟು, ಟ್ರೇಡ್ ಯೂನಿಯನ್ ಮತ್ತು ಮಾಲಿಕರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ದಿನಸಿ ಸಾಮಾಗ್ರಿಗಳ ಬೆಲೆಯೇರುತ್ತಿರುವ ಸಂದರ್ಭದಲ್ಲಿ ಕಾರ್ಮಿಕರಿಗೆ ಸಾಕಷ್ಟು ವೇತನ ನೀಡುತ್ತಿಲ್ಲ, ಅಲ್ಲದೆ ಸಾಕಷ್ಟು ಕಚ್ಚಾ ಸಾಮಗ್ರಿಗಳನ್ನು ಪೂರೈಸುವಲ್ಲಿ ಬೀಡಿ ಕಂಪೆನಿಗಳು ಸೋತಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
Story first published: Saturday, August 12, 2000, 0:00 [IST]