ಇಂದು ಶುಕ್ರವಾರ, ನಾಳೆ ಷಷ್ಟಿ ಆಮೇಲೆ ಅಣ್ಣ ನಿಲ್ಲುವನೆ ಅಲ್ಲಿ......?
ಬೆಂಗಳೂರು : ವರನಟ ರಾಜ್ಕುಮಾರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ವೀರಪ್ಪನ್ ಮುಂದಿಡುವ ಬೇಡಿಕೆಗಳನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುವ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೀಡಿದ್ದಾರೆ. ಎಲ್ಲವೂ ನಾವಂದುಕೊಂಡಂತೆ ನಡೆದರೆ ಇನ್ನೆರಡು ದಿನದಲ್ಲಿ ರಾಜ್ ನಮ್ಮೊಂದಿಗಿರುತ್ತಾರೆ ಎಂದರು.
'ರಾಜ್ ಕುಮಾರ್ ಹಾಗೂ ಇತರ ಮೂವರ ಮೇಲೆ ವೀರಪ್ಪನ್ ಯಾವುದೇ ರೀತಿಯ ಹಿಂಸಾ ಪ್ರಯೋಗ ಮಾಡಿಲ್ಲ. ನಾಡಿನ ಜನರಿಗೆ ಶಾಂತಿಯಿಂದ ಇರುವಂತೆ ಸ್ವತಃ ರಾಜ್ಕುಮಾರ್ ಅವರೇ ಕ್ಯಾಸೆಟ್ ಮೂಲಕ ನಿವೇದಿಸಿಕೊಂಡಿದ್ದಾರೆ. ರಾಜ್ ಅವರು ಅಲ್ಲಿ ಕ್ಷೇಮವಾಗಿದ್ದಾರೆ, ಅವರು ಖಂಡಿತಾ ಸುರಕ್ಷಿತವಾಗಿ ಹಿಂತಿರುಗಿ ಬರುತ್ತಾರೆ. ಅಲ್ಲಿಯವರೆಗೆ ರಾಜ್ ಅವರ ಕೋರಿಕೆಯಂತೆ ನಾವೆಲ್ಲ ತಾಳ್ಮೆ, ಸಹನೆ ಹಾಗೂ ಸಂಯಮದಿಂದ ವರ್ತಿಸಬೇಕು" ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು.
ಜನತೆ ಯಾವುದೇ ಪ್ರಚೋದನೆಗೆ ಒಳಗಾಗದೇ ದಿನನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಡಾ. ರಾಜ್ ಅವರ ಅಭಿಲಾಷೆಯಾಗಿದೆ. ಸರಕಾರ ವೀರಪ್ಪನ್ ವಿರುದ್ಧದ ಎಲ್ಲ ಕಾರ್ಯಾಚರಣೆಗಳನ್ನೂ ಕೈಬಿಟ್ಟಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ರಾಜ್ ಅಪಹರಣವಾಗಿ 6 ಇರುಳುಗಳು ಸಮೀಪಿಸುತ್ತಿದ್ದು, ಶುಕ್ರವಾರ ಶುಭ ಸಂದೇಶ ಬಂದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಶುಭಶುಕ್ರವಾರವೇ ಆದಂತಾಗಿದೆ. ಪರಿಸ್ಥಿತಿ ತಹಬಂದಿಗೆ ಬಂದಿದೆ. ರಾಜ್ಯದಲ್ಲಿ ಶಾಂತಿ ನಿಧಾನವಾಗಿ ನೆಲಸುತ್ತಿದೆ. ರಾಜ್ ಅವರ ಬಿಡುಗಡೆಗಾಗಿ ಜಪ, ತಪ, ಹೋಮ - ಹವನಗಳು ನಡೆಯುತ್ತಿವೆ. ರಾಜ್ ಅವರ ಮನೆಯಲ್ಲಿ ಸಹ ಶನಿ ಶಾಂತಿ ನಡೆಸಲಾಗಿದೆ. ಚಿತ್ರನಟ -ನಟಿಯರು ಉರುಳು ಸೇವೆ ಸಹ ಮಾಡಿದ್ದಾರೆ. ನಾನಾ ಧರ್ಮೀಯರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.
ಸೋಮವಾರದ ವರೆಗೆ ಶಾಲೆಗೆ ರಜೆ: ಪರಿಸ್ಥಿತಿ ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಕೂಡ, ಸೋಮವಾರದ ವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಏತನ್ಮಧ್ಯೆ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು ಬೆಂಗಳೂರಿನ ಡಾ. ರಾಜ್ ಅವರ ನಿವಾಸಕ್ಕೆ ತೆರಳಿ, ಅವರ ಕುಟುಂಬವರ್ಗದವರಿಗೆ ಧೈರ್ಯ ಹೇಳಿದರು.
ಹುಬ್ಬಳ್ಳಿ ವರದಿ : ಕನ್ನಡದ ವರ ನಟ ರಾಜ್ಕುಮಾರ್ ಅವರ ಅಪಹರಣವನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ಶುಕ್ರವಾರ ಸಾಹಿತಿ ಕಲಾವಿದರು ಮೆರವಣಿಗೆ ನಡೆಸಿದರು. ಖ್ಯಾತ ಸಾಹಿತಿ, ಕಣವಿಯವರೂ ಸೇರಿದಂತೆ ನೂರಾರು ಸಾಹಿತಿ - ಕಲಾವಿದರು, ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಡಾ. ರಾಜ್ ಕುಮಾರ್ ಅವರ ಬಿಡುಗಡೆಗೆ ತಮಿಳುನಾಡು ಹಾಗೂ ಕರ್ನಾಟಕ ಸರಕಾರಗಳು ಸಕಲ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು. ಸರಕಾರದ ಪ್ರಯತ್ನ ಫಲಕಾರಿಯಾಗಲಿ ಎಂದು ಹಾರೈಸಿದರು.
ನೂರಾರು ಸಂಖ್ಯೆಯಲ್ಲಿದ್ದ ಸಾಹಿತಿ ಕಲಾವಿದರ ಬಳಗದಲ್ಲಿ ವಿಶ್ವೇಶ್ವರಿ ಹೆಗಡೆ, ಜಿ.ಎಂ. ಹೆಗಡೆ, ಸಂಗಮೇಶ್ವರ ಮುಂತಾದವರು ಪಾಲ್ಗೊಂಡಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications