ಸಂತೆಬೆನ್ನೂರಿನಲ್ಲಿ ಪರ್ಜನ್ಯಜಪ
ಬೆಂಗಳೂರು : ಎನಿತು ವರ್ಣಿಸಲಿ ಈ ಮಳೆರಾಯನ. ಎಂದು, ಯಾವಾಗ ಆತ ವ್ಯಗ್ರನಾಗುತ್ತಾನೋ. ಎಂದು ಶಾಂತನಾಗುತ್ತಾನೋ... ಯಾರ ಮೇಲೆ ಮುನಿಯುತ್ತಾನೋ... ಯಾರಿಗೆ ಒಲಿಯುತ್ತಾನೋ...
ಈಗ ಆಗಿರುವುದೂ ಅದೆ. ಸಂತೆ ಬೆನ್ನೂರಿನಲ್ಲಿ ಮಳೆಯಾಗಿಲ್ಲ. ಪರ್ಜನ್ಯ ಜಪ ಮಾಡಿ, ಹಾಡನು ಹಾಡಿ ಮಳೆತರಿಸಲು ಪ್ರಯತ್ನಿಸಿ ಇಲ್ಲಿ ನ ಜನ ಸೋತಿದ್ದಾರೆ. ಕೊನೆಗೆ ಜೀವಂತವಿರುವ ಯುವಕನೊಬ್ಬನನ್ನು ಚಟ್ಟದ ಮೇಲೆ ಮಲಗಿಸಿ, ಅಣಕು ಶವಯಾತ್ರೆ ಮಾಡಿ ವರುಣನಿಗೆ ಮಳೆಗಾಗಿ ಅಪೀಲು ಹಾಕಿಕೊಂಡಿದ್ದಾರೆ.
ಕತ್ತೆಯ ಮೆರವಣಿಗೆ ಮಾಡಿದರೆ, ಮೋಜಿನ ಸುಳ್ಳು ಮದುವೆ ಮಾಡಿದರೆ, ಅಣಕು ಶವಯಾತ್ರೆ ಕೈಗೊಂಡರೆ ಮಳೆರಾಯ ಒಲಿಯುತ್ತಾನೆ ಎಂಬ ಒಂದು ನಂಬಿಕೆ ಜನರಲ್ಲಿದೆ. ಇಷ್ಟೆಲ್ಲ ಮಾಡಿದರೂ ಕೆಲವೆಡೆ ಮಳೆಯೇ ಆಗುವುದಿಲ್ಲ. ಇನ್ನು ಕೆಲವೆಡೆ ಬೇಡ ಬೇಡವೆಂದರೂ ಮಳೆ ಬೀಳುತ್ತದೆ.
ಬೆಂಗಳೂರಿನಲ್ಲಿ ಮೊನ್ನೆ ರಾತ್ರಿ ಆದದ್ದೂ ಅದೆ. ರಾತ್ರಿ 10 ಗಂಟೆಯ ಸಮಯ. ಇದ್ದಕ್ಕಿದಂತೆ ಕಾರ್ಮೋಡ ಕವಿಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಎಡೆಬಿಡದೆ ಮಳೆ ಸುರಿಯಿತು. ಅದೂ ಒಂಬತ್ತು ಸೆಂಟಿ ಮೀಟರ್. ಒಳಚರಂಡಿ ವ್ಯವಸ್ಥೆ ಹದಗೆಟ್ಟ ಬೆಂಗಳೂರಲ್ಲಿ ರಸ್ತೆಗಳೆಲ್ಲಾ ಕೆರೆಗಳಾದವು. ಮ್ಯಾನ್ಹೋಲ್ಗಳ ಮುಚ್ಚಳ ಕಿತ್ತು, ಹೊಲಸು ನೀರು ಹೊರಚಿಮ್ಮಿತು, ರಸ್ತೆಗಳಲ್ಲಿ ಸುಮಾರು ನಾಲ್ಕು ಅಡಿಯಷ್ಟು ನೀರು ಹರಿಯ ತೊಡಗಿತು. ತಗ್ಗು ಪ್ರದೇಶದ ಮನೆಗಳೆಲ್ಲ ಜಲಾವೃತವಾದವು. ತಳಪಾಯ ಭದ್ರ ಇಲ್ಲದ ಮನೆಗಳು ನೆಲಕಚ್ಚಿದವು.
ಸಂತೆ ಬೆನ್ನೂರಿನಲ್ಲಿ ಅಣಕು ಶವಯಾತ್ರೆ ನಡೆದರೆ, ಬೆಂಗಳೂರಿನ ಮಳೆಗೆ ಮಹಿಳೆಯಾಬ್ಬರು ಶವವೇ ಆದರು. ಮಳೆಯಿಂದ ಕುಸಿದ ಮನೆ ಮಹಿಳೆಯಾಬ್ಬರನ್ನು ಬಲಿ ತೆಗೆದುಕೊಂಡಿತು. ಮೊನ್ನೆ ಮುನ್ಸೂಚನೆ ನೀಡದೆ, ರಾತ್ರಿಯೆಲ್ಲ ಸುರಿದ ಮಳೆ ಶಾಂತವಾಯಿತು. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮುಂಗಾರು ದುರ್ಬಲವಾಯಿತು. ರಾಮನಗರದಲ್ಲಿ ಒಂದು ಸೆಂಟಿಮೀಟರ್ ಮಳೆ ಆಗಿದೆ ಎಂಬುದನ್ನು ಬಿಟ್ಟರೆ, ಉಳಿದಂತೆ ಹೆಚ್ಚಿನ ಮಳೆ ಎಲ್ಲೂ ಆಗಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆ, ನಾಲ್ಕಾರು ಹನಿ ಬಿದ್ದಿದೆ. ಕರಾವಳಿಯಲ್ಲಿ ಮಳೆ ನಿಂತು ಒಣಹವೆ ಮೂಡಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರೂ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವೆಡೆ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಆಗುವ ನಿರೀಕ್ಷೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications