ಆಲ್ಜಿಬ್ರ ಸೂತ್ರಕ್ಕೆ ಸಂಗೀತ ಶಾಸ್ತ್ರ

ಶ್ರುತಿಭೇದದ ಕಲ್ಪನೆ ಸಂಗೀತದ ವಿಸ್ಮಯಗಳಲ್ಲೊಂದು. ಇದನ್ನು ಬಣ್ಣದ ಕಾಗದದ ಚೂರುಗಳು ಮತ್ತು ಕನ್ನಡಿಗಳಿಂದ ಮಾಡಿದ ಕೆಲೈಡೊಸ್ಕೋಪ್ಗೆ ಹೋಲಿಸಬಹುದು. ಭಾರತೀಯ ಸಂಗೀತ 22 ಶ್ರುತಿಗಳನ್ನು ಗುರುತಿಸುತ್ತದೆ. ರಾಗಗಳ ಆಧಾರ ಶಬ್ದವನ್ನು ಬದಲಿಸಿ ಅದೇ ಸ್ವರಗಳನ್ನು ಕೇಳಿದಾಗ ಅದರ ಸ್ವರೂಪವೇ ಬೇರೆಯಾಗಿರುತ್ತೆ. ಉದಾಹರಣೆಗೆ, ನೀವು ಮೋಹನ ರಾಗವನ್ನು ಹಾಡುತ್ತಿರುವಾಗ ತಂಬೂರಿಯ ಶ್ರುತಿಯನ್ನು ಒಂದು ಮನೆಯಷ್ಟು ಹೆಚ್ಚಿಸಿದರೆ, ನೀವು ಮಧ್ಯಮಾವತಿ ರಾಗವನ್ನು ಹಾಡುತ್ತಿರುವಂತೆ ಭಾಸವಾಗುತ್ತದೆ. ಹೀಗೆ ರಾಗಗಳನ್ನು ವರದರಂಗನ್ ಪಟ್ಟಿಮಾಡಿ ಅವುಗಳ ಅಂತರವನ್ನು ಆಲ್ಜೀಬ್ರಾದ ಸೂತ್ರಗಳಿಂದ ನಿಗದಿ ಪಡಿಸಿದ್ದಾರೆ.
ವರದರಂಗನ್ರ ಶ್ರುತಿ ಲಕ್ಷಣ ಪ್ರಕಾಶಿನಿ ಸಾಮಾನ್ಯ ಓದುಗರಿಗೆ ಖಂಡಿತಾ ಅಲ್ಲ. ಸುಮ್ಮನೆ ಸಂಗೀತ ಕೇಳುವವರಿಗೂ ಅಲ್ಲ. ಇದು ಸಂಗೀತದ ಸಂಶೋಧಕರಿಗೆ ಅಮೂಲ್ಯವೆನಿಸುವ ಪುಸ್ತಕ. ಇಂತಹ ಪುಸ್ತಕ ಕನ್ನಡದಲ್ಲೇ ಮೊದಲು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ. ವರದರಂಗನ್ ಮೈಕ್ರೋವೇವ್ ಆಂಟೆನಾಗಳ ಬಗ್ಗೆ ಚೆನ್ನೈನ ಐಐಟಿಯಲ್ಲಿ ಡಾಕ್ಟರೇಟ್ ಪಡೆದು ಈಗ ಬೆಂಗಳೂರಿನ ಅರಿತಾ ನೆಟ್ವರ್ಕ್ಸ್ ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆರು ತಿಂಗಳು ರಾತ್ರಿಯಿಡೀ ಕೂತು ಬರೆದ ಈ ಪುಸ್ತಕವನ್ನು ಈಗ ಇಂಗ್ಲಿಷ್ನಲ್ಲಿಯೂ ಪ್ರಕಟಿಸುವ ಯೋಚನೆಯಲ್ಲಿದ್ದಾರೆ. ಈ ಪುಸ್ತಕವನ್ನು ಬರೆಯಲು ಹೊರಟಾಗ, ಅವರಿಗೆ ಎದುರಾದ ಗಣಿತದ ತೊಡಕುಗಳನ್ನು ದಾಟಲು ವರದರಂಗನ್ ಒಂದು ಪ್ರೋಗ್ರಾಮ್ ಬರೆದಿದ್ದಾರೆ. ಸಂಶೋಧಕರಿಗೆ ಉಚಿತವಾಗಿ ಕೊಡುತ್ತೇನೆ ಎನ್ನುತ್ತಾರೆ.
ವರದ ರಂಗನ್ ಅವರ ಮನೆಯಲ್ಲಿ ಸಂಗೀತ, ಸಾಹಿತ್ಯ ವಿಫುಲವಾಗಿ ಇದ್ದುದು ಅವರಿಗೆ ಸಹಾಯವಾಯಿತಂತೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಮ್ಮ ಸಂಬಂಧ. ಅವರ ಮನೆಗೆ ಹೋದಾಗ ಅವರು ಏನಾದರೂ ಓದುತ್ತಲೋ, ಬರೆಯುತ್ತಲೋ ಇರುತ್ತಿದ್ದರು. ಪು.ತಿ.ನ ಅವರು ಸಂಗೀತ ನಾಟಕಗಳನ್ನು ಬರೆದು ಪ್ರಸಿದ್ಧ ಎಂದು ಕನ್ನಡದ ಹಿರಿಯ ಬರಹಗಾರರೂ, ತಮ್ಮ ಬಳಗದವರೂ ಆದವರನ್ನು ವರದರಂಗನ್ ಸ್ಮರಿಸುತ್ತಾರೆ. ವರದರಂಗನ್ ಅವರು ಆಕಾಶವಾಣಿಯಲ್ಲಿ ಆಗಾಗ ಹಾಡುತ್ತಿರುತ್ತಾರೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications