ಆಲ್ಜಿಬ್ರ ಸೂತ್ರಕ್ಕೆ ಸಂಗೀತ ಶಾಸ್ತ್ರ

ಶ್ರುತಿಭೇದದ ಕಲ್ಪನೆ ಸಂಗೀತದ ವಿಸ್ಮಯಗಳಲ್ಲೊಂದು. ಇದನ್ನು ಬಣ್ಣದ ಕಾಗದದ ಚೂರುಗಳು ಮತ್ತು ಕನ್ನಡಿಗಳಿಂದ ಮಾಡಿದ ಕೆಲೈಡೊಸ್ಕೋಪ್ಗೆ ಹೋಲಿಸಬಹುದು. ಭಾರತೀಯ ಸಂಗೀತ 22 ಶ್ರುತಿಗಳನ್ನು ಗುರುತಿಸುತ್ತದೆ. ರಾಗಗಳ ಆಧಾರ ಶಬ್ದವನ್ನು ಬದಲಿಸಿ ಅದೇ ಸ್ವರಗಳನ್ನು ಕೇಳಿದಾಗ ಅದರ ಸ್ವರೂಪವೇ ಬೇರೆಯಾಗಿರುತ್ತೆ. ಉದಾಹರಣೆಗೆ, ನೀವು ಮೋಹನ ರಾಗವನ್ನು ಹಾಡುತ್ತಿರುವಾಗ ತಂಬೂರಿಯ ಶ್ರುತಿಯನ್ನು ಒಂದು ಮನೆಯಷ್ಟು ಹೆಚ್ಚಿಸಿದರೆ, ನೀವು ಮಧ್ಯಮಾವತಿ ರಾಗವನ್ನು ಹಾಡುತ್ತಿರುವಂತೆ ಭಾಸವಾಗುತ್ತದೆ. ಹೀಗೆ ರಾಗಗಳನ್ನು ವರದರಂಗನ್ ಪಟ್ಟಿಮಾಡಿ ಅವುಗಳ ಅಂತರವನ್ನು ಆಲ್ಜೀಬ್ರಾದ ಸೂತ್ರಗಳಿಂದ ನಿಗದಿ ಪಡಿಸಿದ್ದಾರೆ.
ವರದರಂಗನ್ರ ಶ್ರುತಿ ಲಕ್ಷಣ ಪ್ರಕಾಶಿನಿ ಸಾಮಾನ್ಯ ಓದುಗರಿಗೆ ಖಂಡಿತಾ ಅಲ್ಲ. ಸುಮ್ಮನೆ ಸಂಗೀತ ಕೇಳುವವರಿಗೂ ಅಲ್ಲ. ಇದು ಸಂಗೀತದ ಸಂಶೋಧಕರಿಗೆ ಅಮೂಲ್ಯವೆನಿಸುವ ಪುಸ್ತಕ. ಇಂತಹ ಪುಸ್ತಕ ಕನ್ನಡದಲ್ಲೇ ಮೊದಲು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ. ವರದರಂಗನ್ ಮೈಕ್ರೋವೇವ್ ಆಂಟೆನಾಗಳ ಬಗ್ಗೆ ಚೆನ್ನೈನ ಐಐಟಿಯಲ್ಲಿ ಡಾಕ್ಟರೇಟ್ ಪಡೆದು ಈಗ ಬೆಂಗಳೂರಿನ ಅರಿತಾ ನೆಟ್ವರ್ಕ್ಸ್ ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆರು ತಿಂಗಳು ರಾತ್ರಿಯಿಡೀ ಕೂತು ಬರೆದ ಈ ಪುಸ್ತಕವನ್ನು ಈಗ ಇಂಗ್ಲಿಷ್ನಲ್ಲಿಯೂ ಪ್ರಕಟಿಸುವ ಯೋಚನೆಯಲ್ಲಿದ್ದಾರೆ. ಈ ಪುಸ್ತಕವನ್ನು ಬರೆಯಲು ಹೊರಟಾಗ, ಅವರಿಗೆ ಎದುರಾದ ಗಣಿತದ ತೊಡಕುಗಳನ್ನು ದಾಟಲು ವರದರಂಗನ್ ಒಂದು ಪ್ರೋಗ್ರಾಮ್ ಬರೆದಿದ್ದಾರೆ. ಸಂಶೋಧಕರಿಗೆ ಉಚಿತವಾಗಿ ಕೊಡುತ್ತೇನೆ ಎನ್ನುತ್ತಾರೆ.
ವರದ ರಂಗನ್ ಅವರ ಮನೆಯಲ್ಲಿ ಸಂಗೀತ, ಸಾಹಿತ್ಯ ವಿಫುಲವಾಗಿ ಇದ್ದುದು ಅವರಿಗೆ ಸಹಾಯವಾಯಿತಂತೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಮ್ಮ ಸಂಬಂಧ. ಅವರ ಮನೆಗೆ ಹೋದಾಗ ಅವರು ಏನಾದರೂ ಓದುತ್ತಲೋ, ಬರೆಯುತ್ತಲೋ ಇರುತ್ತಿದ್ದರು. ಪು.ತಿ.ನ ಅವರು ಸಂಗೀತ ನಾಟಕಗಳನ್ನು ಬರೆದು ಪ್ರಸಿದ್ಧ ಎಂದು ಕನ್ನಡದ ಹಿರಿಯ ಬರಹಗಾರರೂ, ತಮ್ಮ ಬಳಗದವರೂ ಆದವರನ್ನು ವರದರಂಗನ್ ಸ್ಮರಿಸುತ್ತಾರೆ. ವರದರಂಗನ್ ಅವರು ಆಕಾಶವಾಣಿಯಲ್ಲಿ ಆಗಾಗ ಹಾಡುತ್ತಿರುತ್ತಾರೆ.
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ












Click it and Unblock the Notifications