ಮಂಗಳ, ಶುಕ್ರವಾರದಂದು ಏಕೆ ಈ ಕೆಲಸಗಳನ್ನು ಮಾಡಬಾರದು?
Recommended Video
"ನಾಳೆ ಮಂಗಳವಾರ, ಮಾರನೆಯ ದಿನ ನವಮಿ ಆಮೇಲೆ ನಾನಿಲ್ಲಿ ನಿಲ್ಲುವೆನೆ?" -ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನವೊಂದರ ಸಾಲಿದು. ಅಂದರೆ ಕವಿತೆಯಲ್ಲಿ ಹೆಣ್ಣುಮಗಳು ತನ್ನ ಪತಿಗೆ ಹೇಳುವ ಮಾತಿದು. ಏಕೆಂದರೆ, ಮಂಗಳವಾರ ಹಾಗೂ ನವಮಿಯಂದು ಪ್ರಯಾಣ ಮಾಡಕೂಡದು ಎಂಬುದು ನಂಬಿಕೆ.
ಮಂಗಳವಾರ ಒಂದೇ ಅಲ್ಲ, ಶುಕ್ರವಾರ ಕೂಡ ಕೆಲವು ಕೆಲಸಗಳನ್ನು ಮಾಡುವುದಿಲ್ಲ. ಮಲೆನಾಡಿನ ಭಾಗದಲ್ಲಿ ಇರುವ ನಂಬಿಕೆ ಏನೆಂದರೆ, ತವರಿಗೆ ಬಂದ ಮಗಳನ್ನು ಮಂಗಳವಾರ ವಾಪಸ್ ಕಳಿಸುವುದಿಲ್ಲ. ಸೊಸೆಯನ್ನು ಶುಕ್ರವಾರ ಆಕೆಯ ತವರಿಗೆ ಕಳಿಸುವುದಿಲ್ಲ. ಅದೇ ರೀತಿ ಅತಿಥಿಯನ್ನು ಮನೆಗೆ ಬಂದ ಏಳನೇ ದಿನ ವಾಪಸ್ ಕಳಿಸುವುದಿಲ್ಲ.
ಮಿಥುನ ರಾಶಿಯ ಸ್ತ್ರೀ ಅಂಗೈಲಿ ಆ ಕ್ಷಣಗಳ ಉತ್ಕಟತೆ
ಇವೆಲ್ಲವೂ ನಂಬಿಕೆ ಭಾಗವೇ. ಇದನ್ನು ನಂಬದವರು ಬೇರೆ ವಾದವನ್ನೇ ಹೂಡಬಹುದು. ಮಗಳನ್ನು ಮನೆಯಿಂದ ವಾಪಸ್ ಕಳುಹಿಸಲು ಇಷ್ಟವಿಲ್ಲದವರು, ಸೊಸೆಯನ್ನು ತವರಿಗೆ ಕಳುಹಿಸಿಕೊಡಲು ನೆಪ ಹುಡುಕಿದಂಥವರು ಈ ರೀತಿಯ ಮಾತುಗಳನ್ನು ಜಾರಿಗೆ ತಂದಿರಬಹುದು ಎನ್ನುವ ಮಾತನಾಡಬಹುದು.
ತುಟಿ ಬಿಟ್ಟುಕೊಡುವ ಗುಟ್ಟು, ಇದು ಹೆಣ್ಣುಮಕ್ಕಳ ಆಂತರ್ಯ
ಅದೇ ರೀತಿ ಮನೆಗೆ ಬಂದ ನೆಂಟರನ್ನು ಏಳನೇ ದಿವಸದವರೆಗೆ ಗೌರವಯುತವಾಗಿ ನೋಡುವವರು ಸಹ ಉಂಟೇ ಎಂದು ಹುಬ್ಬೇರಿಸಬಹುದು! ಇರಲಿ ಈ ಲೇಖನದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಯಾವ ಕಾರಣಕ್ಕೂ ಮಾಡಬಾರದ ಈ ಕೆಲಸದ ಬಗ್ಗೆ ತಿಳಿದುಕೊಳ್ಳೋಣ.
ಮಂಗಳವಾರ ಕುಜನ ದಿನ
ಮಂಗಳವಾರ ಕುಜನ ಆಧಿಪತ್ಯ ಇರುವ ದಿನ. ಆ ದಿನ ಯಾರಿಗಾದರೂ ಹಣ ಕೊಟ್ಟರೆ ಕಲಹ ಕಟ್ಟಿಟ್ಟ ಬುತ್ತಿ ಎಂಬುದು ನಂಬಿಕೆ. ಆದ್ದರಿಂದ ಮಂಗಳವಾರದಂದು ಹಣ ಕೊಡುವುದನ್ನೋ ತರುವುದನ್ನೋ ನಮ್ಮ ಹಿಂದಿನವರು ಸಹ ಮಾಡುತ್ತಿರಲಿಲ್ಲ. ಇಂದಿಗೂ ಆ ನಂಬಿಕೆ ಮುಂದುವರಿದುಕೊಂಡು ಬಂದಿದೆ.
ಹಣ ಬಂದರೆ ಬೇಡ ಅನ್ನುವುದಿಲ್ಲ
ಇನ್ನು ಶುಕ್ರವಾರದಂದು ಸಹ ಹಣಕಾಸಿನ ವಿಚಾರವಾಗಿ ಮನೆಯೊಳಗೆ ದುಡ್ಡು ಬಂದರೆ ಯಾರೂ ಬೇಡ ಅನ್ನುವುದಿಲ್ಲ. ಆದರೆ ಕೊಡಬೇಕು ಅಂದರೆ ಖಂಡಿತಾ ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಆ ದಿನ ಮುಸ್ಸಂಜೆಯಲ್ಲಂತೂ ಹಾಲು, ಮೊಸರು, ತುಪ್ಪ, ಸಕ್ಕರೆ ಹೀಗೆ ಮಹಾಲಕ್ಷ್ಮಿ ಸ್ವರೂಪವಾದ ಏನನ್ನೂ ಮನೆಯಿಂದ ಆಚೆ ಕೊಡುವುದಿಲ್ಲ.
ಲಕ್ಶ್ಮಿ ಚಂಚಲೆ
ಶುಕ್ರವಾರದಂದು ಲಕ್ಷ್ಮಿ ದಿನ ಎಂಬುದು ಸಾರ್ವತ್ರಿಕ ನಂಬಿಕೆ. ಲಕ್ಶ್ಮಿ ಮೊದಲೇ ಚಂಚಲೆ. ಆಕೆಯನ್ನು ಗೌರವಿಸದಿದ್ದರೆ, ಆದರಿಸದಿದ್ದರೆ ಮನೆ ಬಿಟ್ಟು ಹೊರಟು ಹೋಗುತ್ತಾಳೆ ಅನ್ನೋದು ಸಹ ನಂಬಿಕೆಯ ಭಾಗ. ಆದ್ದರಿಂದಲೇ ಹಣಕಾಸು, ಬೆಳ್ಳಿ-ಬಂಗಾರವನ್ನು ಆ ದಿನ ಮನೆಯಿಂದ ಆಚೆಗೆ, ಕೊನೆಗೆ ಬ್ಯಾಂಕ್ ಲಾಕರ್ ನಲ್ಲಿ ಇಡುತ್ತೇವೆ ಅಂದರೂ ಕೆಲವರು ಒಪ್ಪಲ್ಲ.
ಕ್ಷೌರ ಮಾಡಿಸಿದರೆ ಆಯುಷ್ಯ ಕ್ಷೀಣ
ಮಂಗಳವಾರದಂದು ಕ್ಷೌರ- ಯಾವುದೇ ಖರೀದಿ ಸೇರಿದಂತೆ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇನ್ನು ಕ್ಷೌರ ಅಂದರೆ ಆಯುಷ್ಕರ್ಮ ಎಂದು ಸಹ ಕರೆಯುವುದುಂಟು. ಅಂದರೆ ನಮ್ಮ ಆಯುಷ್ಯ ಹಾಗೂ ಆರೋಗ್ಯಕ್ಕೂ ಕ್ಷೌರ ಮಾಡಿಸಿಕೊಳ್ಳುವುದಕ್ಕೂ ಸಂಬಂಧವಿದೆ. ಮಂಗಳವಾರದಂದು ಆಯುಷ್ಕರ್ಮ ಮಾಡಿಸಿದರೆ ಆಯುಷ್ಯ ಕ್ಷೀಣಿಸುತ್ತದೆ. ಆದ್ದರಿಂದ ಆ ದಿನ ಕ್ಷೌರ ಮಾಡಿಸಿಕೊಳ್ಳಬಾರದು.