ಕವನ : ನಾ ಕನ್ನಡಮ್ಮನ ಬಿಟ್ಟು ಹೋಗುವುದಿಲ್ಲ!
ಮೇ 7ರಂದು ಗುರುದೇವ ರವೀಂದ್ರನಾಥ ಟಾಗೋರರ ಜಯಂತಿ. ಅವರ ಕವಿತೆಗಳ ಇಂಗ್ಲಿಷ್ ಅನುವಾದ ಓದುತ್ತಿದ್ದೆ. ಅವರ ಕವಿತೆ 'Clouds and Waves' ಗಮನ ಸೆಳೆಯಿತು. ಕನ್ನಡದ ಶಿಕ್ಷಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎಷ್ಟು ಚೆನ್ನಾಗಿದೆ ಎಂದೆನಿಸಿತು. ಭಾವ ಅನುವಾದ ಪ್ರಯತ್ನಿಸಿದ್ದೇನೆ. ಓದಿ ನೋಡಿ.
ಯಾವ ಇಂಗ್ಲಿಷ್-ನ ಆಕರ್ಷಕ ಮೋಡಗಳು ಬಂದು ಕರೆದರೂ, ಹಿಂದಿ, ತಮಿಳ್, ತೆಲುಗು ಅಲೆಗಳು ಪ್ರಲೋಭನೆ ಒಡ್ಡಿದರು ನಾ ಕನ್ನಡಮ್ಮನ ಬಿಟ್ಟು ಹೋಗುವುದಿಲ್ಲ ಎನ್ನುವ ಕನ್ನಡದ ಈ ಕಂದ. ಅಂದ ಹಾಗೆ, ಮೇ 11ರಂದು 'ಅಮ್ಮನ ದಿನಾಚರಣೆ'.

ಮೋಡಗಳು ಮತ್ತು ಅಲೆಗಳು (ಅಥವಾ ಕನ್ನಡಮ್ಮ ಮತ್ತು ಕಂದ)
ಅಮ್ಮ, ಆ ಮೊಡದಲ್ಲಿರುವ ಜನ ನನ್ನ ಕರೆದು ಹೇಳಿದರು
'ಪುಟ್ಟಾ, ನಾವು ಎದ್ದಾಗಿನಿಂದ ಮಲಗುವವರೆಗೆ ಆಡುತ್ತೇವೆ
ಸೂರ್ಯನ ಚಿನ್ನದ ರಥದೊಂದಿಗೆ, ಬೆಳ್ಳಿ ಚಂದಿರನೊಂದಿಗೆ'
ನಾನು ಕೇಳಿದೆ 'ಅದೆಲ್ಲಾ ಸರಿ, ನಿಮ್ಮಲ್ಲಿಗೆ ನಾ ಹೇಗೆ ಬರಲಿ?'
ಅವರೆಂದರು 'ಜಗತ್ತಿನ ತುಟ್ಟತುದಿಗೆ ಬಾ,
ಕೈ ಮೇಲೆ ಎತ್ತು, ಮೇಲೆಕ್ಕೆ ಎಳೆದ್ ಕೊಳ್ತಿವಿ ನಾವು!'
ನಾನೆಂದೆ 'ಅಯ್ಯೋ! ಅಮ್ಮ ಮನೆಯಲ್ಲಿ ಕಾಯ್ತಿರ್ತಾಳೆ
ಹೇಗಯ್ಯಾ ಬಿಟ್ಟು ಬರಲಿ ಅವಳ?'
ಅದಕ್ಕವರು ನಕ್ಕು ಹಾಗೆ ತೇಲಿ ಹೋದರು
'ಆದರೆ, ಅಮ್ಮ ಅವರಿಗಿಂತ ಒಳ್ಳೆ ಆಟ ಗೊತ್ತು ನಂಗೆ
ನಾನೊಂದು ಪುಟಾಣಿ ಮೋಡ, ನೀ ಎನ್ನ ಚಂದಿರ
ನಾ ನಿನ್ನ ತಬ್ಬಿ ಮರೆ ಮಾಡ್ತೀನಿ,
ಮತ್ತೆ, ನಮ್ಮ ಮನೆ ಸೂರೆ ನೀಲಿ ಆಕಾಶ'
ಅಲೆಗಳಲಿ ಜೀವಿಸೋ ಜನ ನನ್ನ ಕರೆದ್ಹೇಳಿದರು
'ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಾಡ್ತಿವಿ ನಾವು
ಎಲ್ಲು ನಿಲ್ಲದೆ ಎಲ್ಲೆಲ್ಲಿಗೋ ಹೋಗ್ತಿರ್ತಿವಿ ನಾವು'
ನಾನೆಂದೆ 'ಅಯ್ಯೋ... ನಿಮ್ಮ ಜೊತೆ ಹೇಗ್ ಸೇರಲಿ ನಾನು?'
ಅವರಂದ್ರು 'ಸಮುದ್ರ ದಂಡೆಯ ಅಂಚಿಗೆ ಬಾ,
ಗಟ್ಟಿಯಾಗಿ ಕಣ್ಮುಚ್ಚಿ ನಿಂತುಕೋ
ನಿನ್ನ ಅಲೆಗಳ ಮೇಲೆ ಹೊತ್ತುಕೊಂಡು ಹೋಗ್ತಿವಿ'
ನಾನೆಂದೆ 'ಅಯ್ಯೋ! ಇಲ್ಲ ಮಾರ್ರಾಯ್ರ ಅಮ್ಮನ ಬಿಟ್ಟು ಎಲ್ಲೂ ಬರಲ್ಲ
ಅಮ್ಮಂಗೆ ನಾ ಯಾವಾಗ್ಲೂ ಮನೆಯಲ್ಲಿ ಇರೋದೆ ಇಷ್ಟ'
ಅವರು ನಕ್ಕು, ಕುಣಿಕುಣಿತಾ ಹೊರಟುಹೊದ್ರು...
ಆದರೆ ಅಮ್ಮ ಅವರಿಗಿಂತ ಒಳ್ಳೆ ಆಟ ಗೊತ್ತು ನಂಗೆ
ನಾನೊಂದು ಪುಟಾಣಿ ಅಲೆಯಾಗ್ತಿನಿ
ನೀನೊಂದು ಅಪರಿಚಿತ ಸುಮುದ್ರ ತೀರ
ನಾ ಉರುಳುರುಳಿ ಬಂದು ನಿನ್ನ ಮಡಿಲಿಗೆ ಬಿಳ್ತೀನಿ
ಹೊಟ್ಟೆ ಹುಣ್ಣಾಗುವ ಹಾಗೆ ಕಿಲಕಿಲ ನಗ್ತೀನಿ
ಜಗತ್ತಿಗೆ ನಾವಿಬ್ರೂ ಸಿಗದ ಹಾಗೆ ಮರೆಯಾಗೋಣ ಬಾಮ್ಮ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications