ಜರ್ಮನಿಯಲ್ಲಿ, ಅಮೆರಿಕದಲ್ಲಿ.. ಬಿಜಾಪುರದಲ್ಲಿ ಮಂಜು

ಜರ್ಮನಿ ಮತ್ತು ಅಮೆರಿಕದ ಬಯಲುಗಳಲ್ಲಿನ ಆ ಮಂಜಿನ ಮಂಜುಲ ಮಂಜೂಷಗಳನ್ನು ಕಂಡಾಗ ನನಗೆ ಬಹು ಹಿಂದೆ ನಾನು ಬರೆದಿದ್ದ 'ಬಿಜಾಪುರದಲ್ಲಿ ಮಂಜು' ಎಂಬ ಕವನದ ನೆನಪಾಯಿತು. ಹೌದು; ಬಿಜಾಪುರದಲ್ಲೂ ಚಳಿಗಾಲದಲ್ಲಿ ಕೆಲವು ದಿನ ಮಂಜು ಮುಸುಕುತ್ತದೆ! ಅಲ್ಲಿ ವಾಸವಿದ್ದ ನಾನು ಕಣ್ಣಾರೆ ಕಂಡ ಆ ಮಂಜಿನ 'ಮಹಾತ್ಮೆ'ಯನ್ನು ಕವನದಲ್ಲಿ ಹಿಡಿದಿಡುವ ಯತ್ನ ಮಾಡಿದ್ದೇನೆ. ಬಿಜಾಪುರದಲ್ಲಿ ನಾನು ಕಂಡ ಆ ಮಂಜಿನಮೇಲೆ ನೀವೂ ಒಮ್ಮೆ ಕಣ್ಣುಹಾಯಿಸಿ.
ಬಿಜಾಪುರದಲ್ಲಿ ಮಂಜು
ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಲ್ಲಿ ಮಂಜು ಭಾರೀ ವಿಶೇಷ
ಅದಿಲ್ಶಾಹಿ ಇಮಾರತ್ಗಳಿಗೆಲ್ಲ ಬಿಳೀ ಘೋಷಾ!
ಗಾಂಧೀಚೌಕ ಮಂಜುಮಂಜು; ತಾತನ
ಧೋತ್ರಾನೂ ಮಂಜು, ಚಾಳೀಸೂ ಮಂಜು.
ಬಸವೇಶ್ವರಚೌಕದ ಬಸವಣ್ಣ
ಕಾಣಲೇವಲ್ಲ!
ಎತ್ತ ಹೊತಗೊಂಡುಹೋತೋ ಕುದರಿ
ಯಾಂ ಬಲ್ಲ?
ಅತಾತ ನಡದ್ಹಾಂಗ ಗೋಲ್ಗುಂಬಜ್ಜು
ಕಾಣಿಸಬೇಕಿತ್ತಲ್ಲ! 'ಎಲ್ಲೋತೋ ಮುತ್ಯಾ?!'
'ಸನೇವು ಓಗಿ ನೋಡೋ ತಮ್ಮಾ,
ಮಂಜು ಮುಸುಕೇತಿ
ದೂರದಿಂದ ಏನು ಕಂಡಾತು ಸತ್ಯ?'
* * *
ಊರುಬಿಟ್ಟು ಹಾಗೇ
ಹೊರಗೆ ನಡೆದಹಾಗೆ
ಮೊದಲೇ ಬೋಳು ಬಯಲು
ಈಗ ಪೂರಾ ಮುಗಿಲು
ಎಲ್ಲದಾನಪಾ ಸೂರ್ಯ?
ತಲಾಷ್ ಮಾಡೂದೇ ಇವತ್ತಿನ
ಮುಂಜಾನಿ ಕಾರ್ಯ.
'ಮುಂಜಾನಲ್ಲೋ ತಮ್ಮಾ, ಗಂಟಿ ಎಂಟಾತು.'
'ಹೌದೇನ್ರಿ? ಎಂಟಾತೇನ್ರಿ? ಮತ್ತ... ಗೌಡ ಇನ್ನೂ
ಹಾಸಿಗಿ ಬಿಟ್ಟು ಏಳವಲ್ಲ ನೋಡ್ರಿ!'
'ಏನು ಮಾಡಾದು, ಮಂಜಿನ ಮಾತ್ಮೆ!
ಲೈಟುಕಂಬದ ಮ್ಯಾಗ ಶಟಗೊಂಡು ಕುಂತ
ಗಿಣಿ ಸುದ್ದ ಅಳ್ಳಾಡ್ವಲ್ದು!
ಗಿಣಿ ಬಾಯಾಗ ಹೊಗಿ
ಮುಕಳ್ಯಾಗ ಹೊಗಿ
ರಸ್ತೀಮ್ಯಾಗ ಹೊಗಿ
ಬೆಳದುನಿಂತ ಹೊಲದಮ್ಯಾಗ ಹೊಗಿ
ಹಿಂಗಾದ್ರ ಬೆಳಿ ಕೈಗ್ಹತ್ತ್ವಲ್ದು ತೆಗಿ
ಆ ಮಂಜಿನ ಮುಖ್ಖ್ಕಿಸ್ಟು ಕ್ಯಾಕರ್ಸಿ ಉಗಿ!'
* * *
ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಲ್ಲಿ ಮಂಜು ಭಾರೀ ವಿಶೇಷ
ಸುರೇಪಾನ, ತೊಗರಿ, ದಾಳಿಂಬ್ರ, ದ್ರಾಕ್ಷಿ,....
ನಿಃಶೇಷ!
(ಯಾಂ=ಯಾವನು/ಯಾರು; ಅತಾತ=ಅತ್ತತ್ತ; ಮುತ್ಯಾ=ಮುದುಕ/ಅಜ್ಜ; ಸನೇವು=ಸನಿಹ; ಸುರೇಪಾನ=ಸೂರ್ಯಕಾಂತಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications