ಜಿಜ್ಞಾಸಾಗಂಗಾ
ರವಿ ಕೃಷ್ಣಾ ರೆಡ್ಡಿ, ಕುಪರ್ಟಿನೊ, ಕ್ಯಾಲಿಫೊರ್ನಿಯ.
ಹೀಗಾಗಬಾರದಿತ್ತು , ಹಾಗೇ ಆಗಬೇಕಿತ್ತು !
ನಡೆದುಹೋದದ್ದರ ಶವಪರೀಕ್ಷೆ ಎಂದೂ ಅಪೂರ್ಣ
ಮುಂದೇನುಂಟೆಂದು ತಿಳಿಯದ ಮೌಢ್ಯ ಕುತೂಹಲದಲಿ
ಇಂದು ಮಾಡುವುದು ನಾಳೆಗೆ ತರವೆ ?
ನೆನ್ನೆಯ ಜ್ಞಾನ ಇಂದಿನ ಅಜ್ಞಾನವಾಗಲಿಲ್ಲವೇನು ಬಹು ಬಾರಿ?
ಆ ಅಜ್ಞಾನವೇ ಇಂದಿನ ವಿಜ್ಞಾನಕ್ಕಾಗಲಿಲ್ಲವೇನು ದಾರಿ?
ಸಾವಿರದಲ್ಲೊಂದಷ್ಟು ಕಲ್ಲು ಹಣ್ಣಿಗೆ ಬಿದ್ದರೆ
ಆದೆಯೇನು ನೀ ಬಲಶಾಲಿ, ಕಾಲಜ್ಞಾನಿ ?
ಹೊಡೆದ ಕಲ್ಲಿಗೆಲ್ಲಾ ಹಣ್ಣುದುರಿಸಿಕೊಂಡವರುಂಟೇನು?
ಉಂಟೇನು ಭವಿಷ್ಯ ಹೀಗೇ ಉಂಟು ಎಂಬವ ?
ತಿಳಿದೂ ಬದಲಿಸಲಾರೆ ಬಹಳೊಮ್ಮೆ ಮಾತು ಕೃತಿ ತಂತ್ರ
ಗೆಲುವು ಕಟ್ಟಿಟ್ಟದ್ದದ್ದೆಂದಾಕ್ಷಣ ಕಾಯಬಲ್ಲನೆ ದುಷ್ಟ ?
ಕಾದಿದ್ದರೂ ದುರಂತ ಕೊಲ್ಲಬಲ್ಲನೆ ಶಿಷ್ಟ ?
ಇದೇ ಸತ್ಯವೆ ? ಇಲ್ಲವೇನಿದಕೇನೂ ಅಪವಾದಗಳು?
ಪಕ್ಕಕ್ಕಿಟ್ಟರೆ ಪಾವಿತ್ರ್ಯ ಕಾಣವೇನು ವಿವಿಧ ಬೆತ್ತಲೆ ಕೋನಗಳು ?
ಸ್ವಾರ್ಥಕ್ಕಾಗಿ ಕೊಲ್ಲಲಿಲ್ಲವೆ ರಾಮ ಮರದ ಮರೆಯಿಂದ ?
ಸುಗ್ರೀವನೊಬ್ಬನೇನು ಆಗಿನ ಅನ್ಯಾಯಕ್ಕೊಳಗಾದ ದಲಿತ ?
ಅಂದರೂ ಪಂಡಿತನು ಸುಗ್ರೀವನಿಗೆ ರಾಮನ್ಯಾಯವೆಂದು
ಸೀತೆಗಾಗಿ ರಾಮ ಪಡೆದ ಸುಗ್ರೀವ ಪಡೆಯ ಕಪ್ಪವಲ್ಲದೇನು ?
ಜೀವನದ ಸಾಧ್ಯತೆಗಳು ಅಗಾಧ, ಮೊಗೆದಷ್ಟೂ
ಉಕ್ಕುವುದು ಜಿಜ್ಞಾಸೆಯ ಅಮೃತ ಜೀವಗಂಗಾ!
ಕುಡಿದೆಯಾದರೆ ಒಮ್ಮೆ, ನಿಲ್ಲದದು ತನು ಮರಣಿಸುವ ತನಕ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications