ಜಿಜ್ಞಾಸಾಗಂಗಾ
ರವಿ ಕೃಷ್ಣಾ ರೆಡ್ಡಿ, ಕುಪರ್ಟಿನೊ, ಕ್ಯಾಲಿಫೊರ್ನಿಯ.
ಹೀಗಾಗಬಾರದಿತ್ತು
,
ಹಾಗೇ
ಆಗಬೇಕಿತ್ತು
!
ನಡೆದುಹೋದದ್ದರ
ಶವಪರೀಕ್ಷೆ
ಎಂದೂ
ಅಪೂರ್ಣ
ಮುಂದೇನುಂಟೆಂದು
ತಿಳಿಯದ
ಮೌಢ್ಯ
ಕುತೂಹಲದಲಿ
ಇಂದು
ಮಾಡುವುದು
ನಾಳೆಗೆ
ತರವೆ
?
ನೆನ್ನೆಯ
ಜ್ಞಾನ
ಇಂದಿನ
ಅಜ್ಞಾನವಾಗಲಿಲ್ಲವೇನು
ಬಹು
ಬಾರಿ?
ಆ
ಅಜ್ಞಾನವೇ
ಇಂದಿನ
ವಿಜ್ಞಾನಕ್ಕಾಗಲಿಲ್ಲವೇನು
ದಾರಿ?
ಸಾವಿರದಲ್ಲೊಂದಷ್ಟು
ಕಲ್ಲು
ಹಣ್ಣಿಗೆ
ಬಿದ್ದರೆ
ಆದೆಯೇನು
ನೀ
ಬಲಶಾಲಿ,
ಕಾಲಜ್ಞಾನಿ
?
ಹೊಡೆದ
ಕಲ್ಲಿಗೆಲ್ಲಾ
ಹಣ್ಣುದುರಿಸಿಕೊಂಡವರುಂಟೇನು?
ಉಂಟೇನು
ಭವಿಷ್ಯ
ಹೀಗೇ
ಉಂಟು
ಎಂಬವ
?
ತಿಳಿದೂ
ಬದಲಿಸಲಾರೆ
ಬಹಳೊಮ್ಮೆ
ಮಾತು
ಕೃತಿ
ತಂತ್ರ
ಗೆಲುವು
ಕಟ್ಟಿಟ್ಟದ್ದದ್ದೆಂದಾಕ್ಷಣ
ಕಾಯಬಲ್ಲನೆ
ದುಷ್ಟ
?
ಕಾದಿದ್ದರೂ
ದುರಂತ
ಕೊಲ್ಲಬಲ್ಲನೆ
ಶಿಷ್ಟ
?
ಇದೇ
ಸತ್ಯವೆ
?
ಇಲ್ಲವೇನಿದಕೇನೂ
ಅಪವಾದಗಳು?
ಪಕ್ಕಕ್ಕಿಟ್ಟರೆ
ಪಾವಿತ್ರ್ಯ
ಕಾಣವೇನು
ವಿವಿಧ
ಬೆತ್ತಲೆ
ಕೋನಗಳು
?
ಸ್ವಾರ್ಥಕ್ಕಾಗಿ
ಕೊಲ್ಲಲಿಲ್ಲವೆ
ರಾಮ
ಮರದ
ಮರೆಯಿಂದ
?
ಸುಗ್ರೀವನೊಬ್ಬನೇನು
ಆಗಿನ
ಅನ್ಯಾಯಕ್ಕೊಳಗಾದ
ದಲಿತ
?
ಅಂದರೂ
ಪಂಡಿತನು
ಸುಗ್ರೀವನಿಗೆ
ರಾಮನ್ಯಾಯವೆಂದು
ಸೀತೆಗಾಗಿ
ರಾಮ
ಪಡೆದ
ಸುಗ್ರೀವ
ಪಡೆಯ
ಕಪ್ಪವಲ್ಲದೇನು
?
ಜೀವನದ
ಸಾಧ್ಯತೆಗಳು
ಅಗಾಧ,
ಮೊಗೆದಷ್ಟೂ
ಉಕ್ಕುವುದು
ಜಿಜ್ಞಾಸೆಯ
ಅಮೃತ
ಜೀವಗಂಗಾ!
ಕುಡಿದೆಯಾದರೆ ಒಮ್ಮೆ, ನಿಲ್ಲದದು ತನು ಮರಣಿಸುವ ತನಕ