ಹಿಂದೂಗಳ ಮೇಲೆ ಬಿದ್ದಿರುವುದು ಬೆಂಕಿಯಲ್ಲ ಎಂಜಲೆಲೆ

ವ್ಯಾಲಂಟೈನ್ಸ್ ಡೇಯನ್ನ ವಿಕೃತಿ ಅನ್ನುವವರಿಗೆ ಇದು ವಿಕೃತಿ ಅನ್ನಿಸುವುದಿಲ್ಲ ಅನ್ನುವುದು ಧೃತರಾಷ್ಟ್ರ ಪ್ರೇಮವಲ್ಲದೇ ಇನ್ನೇನು? ಜನರನ್ನ ಮಡೆ ಸ್ನಾನ ಮಾಡದಂತೆ ತಡೆಯಲಾಗದವರಿಗೆ ಮತಾಂತರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೆ? ಈಗಾಗಲೇ ಹಿಂದೂ ಧರ್ಮದ ಜಾತಿ ಪದ್ಧತಿ ಶೋಷಣೆಯ ಹಳೆ ರಾಗವನ್ನೇ ಹಾಡಿ ಹಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಮಿಷನರಿಗಳ ಬಾಯಿಗೆ ಈ ಮಡೆ ಸ್ನಾನ ಅನ್ನುವುದು ಬ್ರಹ್ಮಾಸ್ತ್ರದಂತೆ ಅನ್ನಿಸುವುದಿಲ್ಲವೇ? ಹಾಗೇ ಈ ವಿಷಯದಲ್ಲಿ ಕೇವಲ ಪೇಜಾವರ ಶ್ರೀಗಳಿಗೆ ಮಾತ್ರ ಯಾಕೆ ಪ್ರಶ್ನೆ ಕೇಳಬೇಕು? ಕರ್ನಾಟಕದ ಮೂಲೆ ಮೂಲೆಯ ಜಾತಿ-ಉಪಜಾತಿಗಳಿಗೆಲ್ಲ ಇರುವ ಸ್ವಾಮೀಜಿಗಳು ಉತ್ತರದಾಯಿಗಳೇ ಅಲ್ಲವೇ? ನೀವುಗಳ್ಯಾಕೆ ದೊಡ್ಡ ಮಟ್ಟದಲ್ಲಿ ಇದರ ವಿರುದ್ಧ ದನಿಯೆತ್ತುತ್ತಿಲ್ಲ?
ಪದ್ದತಿಯ ಹೆಸರಿನಲ್ಲಿ ನಡೆಯುವ ವಿಕೃತಿಗಳಿಗೆ ಸರ್ಕಾರವೇ ಬ್ರೇಕ್ ಹಾಕಬೇಕಿದೆ. ಧಾರ್ಮಿಕ/ಆಧ್ಯಾತ್ಮಿಕ ಕೇಂದ್ರಗಳಾಗಬೇಕಾದ ದೇವಾಲಯಗಳ ಗರ್ಭದಲ್ಲೇ ಅಸ್ಪೃಷ್ಯತೆ ಬೇರು ಬಿಡುವುದು ಯಾವುದೇ ಧರ್ಮಕ್ಕಾದರೂ ಅಪಾಯಕರವೇ. ಅದಕ್ಕೊಂದು ಪುಟ್ಟ ಉದಾಹರಣೆಯೆಂದರೆ ಈಗಲೂ ಬಹಳಷ್ಟು ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆಂದೇ ಇರುವ ಪ್ರತ್ಯೇಕ ಊಟದ ವ್ಯವಸ್ಥೆ! ಮನುಷ್ಯರ ಜೊತೆಗೆ ಕೂತು ಊಟ ಮಾಡಲಾಗದವ್ರು ಜೊತೆಗೆ ಬಾಳ್ವೆ ಮಾಡಲಾದೀತೆ? ಇಂತ ಕೆಟ್ಟ ನಡೆಯನ್ನು ಸಂಪ್ರದಾಯದ ಹೆಸರೇಳಿ ಮುಂದುವರೆಸುವವರಿಗೆ ಜಾತಿ ನಿರ್ಮೂಲನೆ ಬಗ್ಗೆ ಮಾತನಾಡಲು ಬಾಯಿಯಾದರು ಎಲ್ಲಿಂದ ಬರುತ್ತದೆ?
ಸಾವಿರ ಕವಲೊಡೆದು ನಿಂತಿರುವ ಹಿಂದೂ ಅನ್ನುವ ಜೀವನ ಪದ್ಧತಿ ಒಂದಾಗಬೇಕು ಅನ್ನುವವರು "ಹಿಂದೂ" ಅಂತ ತನ್ನನ್ನು ತಾನು ಕರೆದುಕೊಳ್ಳುವ ಮೊದಲು "ಮಾನವ" ಅಂತ ತಿಳಿದುಕೊಳ್ಳಲೇ ಬೇಕು. ಅಷ್ಟೆಲ್ಲ ಸುಲಭವಾಗಿ ಬದಲಾಗುವ ಮಂದಿ ನಾವಲ್ಲ (ಹಿಂದೂಗಳು) ಬಿಡಿ. ಬದಲಾಗುವುದಿದ್ದರೆ ಉಡುಪಿಯ ಕೃಷ್ಣ ಕನಕದಾಸರೆಡೆಗೆ ತಿರುಗಿ ನಿಂತಾಗಲೇ ನಮ್ಮ ಜಾತಿ ಅನ್ನುವ ಕರ್ಮಕಾಂಡಕ್ಕೆ ಬೆಂಕಿ ಬೀಳಬೇಕಿತ್ತು. ಆದರೆ, ಬಿದ್ದಿರುವುದು ಬೆಂಕಿಯಲ್ಲ ಎಂಜಲೆಲೆ! ಮತ್ತದರ ಮೇಲೆಯೆ ನಾವು-ನಮ್ಮ ಮನೆ, ಮನಸ್ಸು ನಮ್ಮ ಧರ್ಮ ಬಿದ್ದು ಹೊರಳಾಡುತ್ತಿದೆ ಮತ್ತೆ ಧರ್ಮ ರಕ್ಷಕರ ಬಾಯಿಗಳು ಬಿದ್ದು ಹೋಗಿವೆ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications