ನನ್ನ ಮಗನ ಜಾತಕದಲ್ಲಿ ನಾಗದೋಷ ಇದೆ

ಆದರೆ ಕಾಲಕಾಲಕ್ಕೆ ಏನೇನು ಆಗಬೇಕೋ ಅದೆಲ್ಲ ಆಗತ್ತೆ. ಆಗಬೇಕು, ಅದನ್ನು ದಾಟಿ ನಾವು ಮುಂದೆ ಹೋಗುತ್ತಿರಬೇಕು ಎಂಬ ನಂಬಿಕೆಯುಳ್ಳವನು ನಾನು. ಮಗುವಿಗೆ ವಿಪರೀತ ಕಾಯಿಲೆ ಬಂದು ಅವನು ಬದುಕಿ ಉಳಿದದ್ದು ಒಂದು ಪವಾಡ ಎಂದೆನಿಸಿತು. ನಮ್ಮ ಮಗನ ಜಾತಕ ನೋಡಿದ ಮನೆ ಪುರೋಹಿತರು ಹೇಳಿದರು:
"ನಿಮ್ಮ ಮಗುವಿನ ಜಾತಕದಲ್ಲಿ ನಾಗದೋಷ ಇದೆ. ಇದು ನಿವಾರಣೆ ಆಗತಕ್ಕದ್ದು. ಅದಕ್ಕೆ ಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ನೀವು ಸಿದ್ದರಾಗಿ" ಎಂದು ಹಿತವಚನ ನುಡಿದರು. ಅದರಂತೆ ಭಾನುವಾರ 29 ನವೆಂಬರ್ ಬನಶಂಕರಿ ಮೊದಲನೇ ಹಂತ ಸೀತಾ ಸರ್ಕಲ್ ಸಮೀಪದ ವಿಜಯ ಧಾರ್ಮಿಕ ಸಭಾಂಗಣದಲ್ಲಿ ಆಶ್ಲೇಷ ಬಲಿ ಪೂಜೆ ಮಾಡಿದೆವು.
ಜಾತಕ ದೋಷ ರೀತ್ಯ ನನ್ನ ಮಗನಿಗೆ 10 ವರ್ಷ ಆಶ್ಲೇಷ ಬಲಿ ಪೂಜೆ ಸಲ್ಲಿಸಬೇಕು. ಮೊದಲ ಬಾರಿಗೆ ಬೆಂಗಳೂರಿನಲ್ಲೇ ಮಾಡಲಾಯಿತು. ಬರುವ ವರ್ಷಗಳಲ್ಲಿ ಇದನ್ನು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇಗುಳ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದಲ್ಲಿರುವ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಮಾಡಬಹುದೆಂದು ಪುರೋಹಿತ ಮೋಹನ್ ಉಪಾಧ್ಯಾಯ ನಮಗೆ ತಿಳಿಸಿದರು.
ಮಗು ಹುಟ್ಟಿದ ತಿಂಗಳಲ್ಲಿ ಬರುವ ಆಶ್ಲೇಷ ನಕ್ಷತ್ರ ಯಾವುದೇ ದಿನ ಈ ಕೈಂಕರ್ಯ ಕೈಗೊಳ್ಳಬಹುದು. ಕುಕ್ಕೆ ಸುಬ್ರಮಣ್ಯದಲ್ಲಿ ಪ್ರತಿದಿನ ಸಾಮೂಹಿಕ ಆಶ್ಲೇಷ ಬಲಿ ಪೂಜೆಗೆ ವ್ಯವಸ್ಥೆ ಇರತ್ತೆ. ಏಕಾದಶಿ ಮತ್ತು ಅಮಾವಾಸ್ಯೆ ದಿನ ಇರುವುದಿಲ್ಲ.
ಅಂತೂ ನಮ್ಮ ಮೊದಲ ಆಶ್ಲೇಷ ಬಲಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಂಡೆವು ಎಂದು ನನಗೆ ನಾನೇ ಹೇಳಿಕೊಳ್ಳಬೇಕು. ಮನೆಗೆ ಮತ್ತು ಮನಕ್ಕೆ ಹತ್ತಿರವಾಗಿರುವ ನೆಂಟರಿಷ್ಟರ ಸಾಮೀಪ್ಯದಲ್ಲಿ ಮತ್ತು ಗುರುಹಿರಿಯರ ಆಶೀರ್ವಾದದಿಂದ ಇದು ಸಾಂಗವಾಯಿತು. ಪೂಜೆ ಮತ್ತು ಪ್ರಸಾದ ಮುಗಿದ ನಂತರ ನಮ್ಮ ತಂದೆಯವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು. ನನಗೆ ಅರ್ಥವಾಯಿತು. [ಮುಂದೆ : ನೆಮ್ಮದಿ ತಂದ ಪೂಜೆ]
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications