ಅನಕೊಂಡ ದೋಷವನ್ನೂ ಮೆಟ್ಟಿನಿಲ್ಲಬಹುದು

ಇದಕ್ಕೆ ಕಾರಣ ನಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಡಗಿರುವ ದೈವಿಕ ಭಾವ, ಸಾಂಸ್ಕೃತಿಕ ಹಿತ, ಹಿತೈಷಿಗಳೊಂದಿಗಿನ ಒಡನಾಟ. ಇವಿಷ್ಟಿದ್ದರೆ ಕಠಿಣವಾದ ಯಾವುದೇ ಕೆಲಸವನ್ನು ಆನಂದದಿಂದ ಮಾಡಬಹುದು ಎನಿಸಿತು. ಕಾಳಸರ್ಪ ಅಲ್ಲ, ಅನಕೊಂಡ ದೋಷವನ್ನೂ ಮೆಟ್ಟಿನಿಲ್ಲಬಹುದು.
ಇವತ್ತು ಬುಧವಾರವಾದರೂ ಕಚೇರಿಗೆ ಹೋಗೋಣ ಎಂದು ಮನಸ್ಸಿನಲ್ಲೇ ಮಂಡಿಗೆ ಮಾಡಿದ್ದೆ. ಕಚೇರಿಯಲ್ಲಿ ಡೊಮೇನ್ ಟ್ರಾನ್ಸ್ ಫರ್ ಪ್ರಾಜೆಕ್ಟ್ ಕಂಪ್ಲೀಷನ್ ಇದೆ. ಆದರೆ ದಟ್ಸ್ ಕನ್ನಡ ವರದಿಗಾರರು ನಿಮ್ಮ ಅನುಭವಗಳನ್ನು ಇವತ್ತೇ ಬರೆದುಕೊಡಿ ಎಂದು ದುಂಬಾಲು ಬಿದ್ದರು.
ಇವತ್ತೇ ಯಾಕೆ ಬರೆಯಬೇಕೆಂದರೆ, ಇಂದು ಬುಧವಾರ ಸುಬ್ರಮಣ್ಯ ಷಷ್ಠಿ (ಚಂಪಾ ಷಷ್ಠಿ), ಒಳ್ಳೇ ದಿನ.












Click it and Unblock the Notifications