ಸಂಪನ್ನಗೊಂಡ ಅಗಡಿ ಶತಮಾನೋತ್ಸವ

ಪವಿತ್ರವನದಲ್ಲಿ ನಡೆದ ಧಾರ್ಮಿಕ ಕಲಾಪಗಳಲ್ಲಿ ಚತುರ್ವೇದ ಸಣಹಿತಾ ಪಾರಾಯಣ ಯಾಗ, ಅತಿರುದ್ರ ಹವನ, ಸಹಸ್ರ ಚಂಡಿ ಹವನ , ಭಾಗವತ , ರಾಮಾಯಣ ಸುಂದರ ಕಾಂಡ, ವಿಷ್ಣು ಸಹಸ್ರನಾಮ, ಚದಂಬರ ವರದ ಅಭಂಗ, ಶೇಷಾಚಲ ಚರಿತ್ರೆ , ಗುರು ಚರಿತ್ರೆ, ಮೊದಲಾದ ಪಾರಾಯಣಗಳು ವೇದ ಸಂಸ್ಕ್ರತಿಯ ಪುನರುತ್ಥಾನಕ್ಕೆ ನಡೆದ ಪ್ರಯತ್ನ .ಸಂಹಿತಾ ಪಾರಾಯಣದಲ್ಲಿ ತಮಿಳುನಾಡಿನಿಂದ ಬಂದ 93 ವರ್ಷದ ಪರಷುರಾಮ ಘನಪಾಠಿಗಳೂ ಸೇರಿದಂತೆ,ಶೇಷಾಚಲ ಸಂಸ್ಕ್ರತ ವೇದ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ ಸುಮಾರು 50 ವೇದ ಪಂಡಿತರು ಸೇರಿದ್ದಾರೆ.
ಅತಿರುದ್ರ ಸ್ವಾಹಾಕಾರ 40 ಹೋಮ ಕುಂಡಗಳಲ್ಲಿ ನಡೆದ ಮಹಾಯಾಗವಾಗಿದ್ದು ಸುಮಾರು 400 ವೈದಿಕರು ಇದರಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಶೇಷಾಚಲ ವೇದ ವಿದ್ಯಾಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಹೆಚ್ಚಿದ್ದರು.ಸಹಸ್ರ ಚಂಡಿಯಾಗದಲ್ಲಿ 10 ಹೋಮ ಕುಂಡಗಳಲ್ಲಿ 60 ಋತ್ವಿಜರು ಭಾಗವಹಿಸಿದ್ದಾರೆ. ಈ ಹೋಮದ ಜೊತೆ ಸಪ್ತಪತಿ ಪಾರಾಯಣವೂ ಜರುಗಿತು. ಸರ್ವ ವಿಘ್ನ ಪರಿಹಾರಕ ಮಹಾಗಣಪತಿಯ ಪ್ರೀತ್ಯರ್ಥವಾಗಿ ಆನಂದವನದಲ್ಲಿ ಲಕ್ಷಮೋದಕ ಹವನ ಜರುಗಿದ್ದು 40 ಋತ್ವಿಜರು ಈ ಹೋಮ ನೇರವೇರವೇರಿಸಿದ್ದಾರೆ.ಭಕ್ತಿ ಸಮರ್ಪಣೆಯ ಸರಳ ಯಾಗ ಇದಾಗಿದ್ದು ಇದರಲ್ಲಿ ಹೆಚ್ಚಿನ ವಿಪ್ರವಟುಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಉಡುಪಿಯ ಸುಬ್ರಮಣ್ಯ ಮಧ್ಯಸ್ಥ ಹಾಗೂ ನಾಲ್ಕೂರು ಕೃಷ್ಣಪ್ರಸಾದ ಬಳಗದವರಿಂದ ನಾಗಮಂಡಲ ಸೇವೆ ನಡೆಯಿತು. ಇದು ಉತ್ತರ ಕರ್ನಾಟಕದ ಭಕ್ತರಿಗೆ ವಿಶೇಷವಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕ್ರತಿಕ ಕಂಪು ಹರಡಿತ್ತು.ವಿಶೇಷವಾಗಿ ಶಹನಾಯಿ ,ಸಿತಾರ್, ಹದಿನೆಂಟು ವಿಧದ ಸಂಯೋಜಿತ ವಾದ್ಯ ಗೋಷ್ಠಿ, ಹೆಸರಾಂತ ಸಂಗೀತ ವಿದುಷಿಯರಿಂದ ಗಾನ ಸುಧೆ ಹರಿಯಿತು. ಸಿಡಿ ಮದ್ದಿನ ಪ್ರದರ್ಶನವು ಆಯೋಜನೆ ಗೊಂಡಿತ್ತು.
ವೈಚಾರಿಕತೆ ಪ್ರೇರಿಪಿಸಿದ ವೇದಿಕೆ : ಶತಮಾನೋತ್ಸವ ಕಾರ್ಯಕ್ರಮದ ವೇದಿಕೆ ಹಲವು ವಿಚಾರ ಬಿತ್ತನೆಯ ಆವರಣವಾಯಿತು.ಶತಮಾನಕಂಡ ಋಷಿ ಸಂಸ್ಕೃತಿ ಬಿಂಬಿಸುವ ಸಂಸ್ಕೃತ ವೇದಪಾಠ ಶಾಲೆ,ಅದ್ಯಾತ್ಮಿಕ ಜ್ಞಾನ ಬಿತ್ತರಿಸಿದ ಸದ್ಭೋದ ಚಂದ್ರಿಕೆ ಮಾಸಪತ್ರಿಕೆ ಕುರಿತು ,ಹಾಗೂ ಎಪ್ಪತ್ತು ಸಂವತ್ಸರಕಂಡ ಅಧ್ಯಾತ್ಮಿಕ ಜೀವಿ ಚಿದಂಬರ ಚಕ್ರವರ್ತಿಗಳ ಸಮಾಜಮುಖಿ ಚಿಂತನೆಕುರಿತು ಶ್ರೀ ರಾಮಾಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು,ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು,ಪೇಜಾವರ ಶ್ರೀ ವಿಶ್ವೇಶ ತೀರ್ಥರು ಕೊಲ್ಲಾಪುರದ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು,ತಡಸದ ವಲ್ಲಭ ಚೈತನ್ಯರು,ಹಂಪಿ ವಿದ್ಯಾರಣ್ಯ ಮಹಾಸ್ವಾಮಿಗಳು,ಶುಭ ನುಡಿದರು.
ಮಾಜಿ ಸಚಿವ ಸಿ ಎಂ ಉದಾಸಿ,ಪುಣೆ ವಿಶ್ವ ವಿದ್ಯಾಲಯದ ಪಿ.ಡಿ ಪಾಟೀಲ್,ಮಾಜಿ ಶಾಸಕ ಶಿವರಾಜ ಸಜ್ಜನ,ಶಿವಣ್ಣ ತಿಳುವಳ್ಳಿ,ನೆಹರು ಓಲೇಕಾರ ಮೊದಲಾದವರು ಅಗಡಿ ಆನಂದ ವನದ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಆನಂದವನದ ಒಟ್ಟು ಸಭಾಕಾರ್ಯಕ್ರಮದಲ್ಲಿ ಗೋ ಸಮ್ಮೇಳನ ಮಹತ್ವದಾಗಿದ್ದು ರಾಮಚಂದ್ರಾಪುರ ಮಠ ಕೈಗೊಂಡಿರುವ ಗೋಸಂರಕ್ಷಣೆಯ ಅಭಿಯಾನದಲ್ಲಿ ಉತ್ತರ ಕರ್ನಾಟಕದ ಸಮ್ಮೀಲನಕ್ಕೆ ಮಾರ್ಗ ರೂಪಿಸಿದೆ.ಅಗಡಿ ಆನಂದವನದಲ್ಲಿ ಗೋಶಾಲೆ ಪ್ರಾರಂಭಕ್ಕೆ ಶ್ರೀಮಠದಿಂದ ಎಪ್ಪತ್ತು ಗೋವುಗಳ ಪ್ರಾರಂಭಿಕ ಕೊಡುಗೆ ನೀಡಿದ್ದಾರೆ.
ಕೊನೆಯ ದಿನ ನಡೆದ ಚಿದಂಬರ ಮೂರ್ತಿ ಚಕ್ರವರ್ತಿಗಳು ಭೀಮರಥ ಶಾಂತಿ ಕಾರ್ಯಕ್ರಮದಲ್ಲಿ ಶ್ರೀರಾಘವೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನಿರಾಕಾರ ನಿರ್ಲೀಪ್ತತೆ ಇದ್ದಲ್ಲಿ ಜೀವನ ಸಾರ್ಥಕವಾಗಿ ಸಮಾಜಕ್ಕೆ ಮಹೋನ್ನತ ಕೋಡುಗೆ ಲಭಿಸುತ್ತದೆ. ಸಂತ ಶ್ರೇಷ್ಟರ ಅಂತರಂಗದ ಮೌಲ್ಯವನ್ನು ಅರಿಯುವುದು ಕಷ್ಟ,ಅವರ ಜೀವನವನ್ನು ಪ್ರೇಮಭಾವದಿಂದ ತೂಗಬೇಕು ತ್ಯಾಗದ ತೂಕ ,ಭೋಗದ ತೂಕಕ್ಕಿಂತ ಹೆಚ್ಚಿರುತ್ತದೆ ಎಂದರು. ಶಾಂತಿ ಕಾರ್ಯಕ್ರಮದ ನಿಮಿತ್ತ ಶ್ರೀ ಚಿದಂಬರರಿಗೆ ಮಂಗಲ ದ್ರವ್ಯಗಳಿಂದ ತೂಲಾಭಾರ ಮತ್ತು ನಾಗರಾಜ ಅಂಡೋಜಿ ಅವರಿಂದ ಬೆಳ್ಳಿಯ ಕೀರಿಟ ಸಮರ್ಪಣೆ ನಡೆಯಿತು. ಸಹಸಗ್ರಾರು ಭಕ್ತರು ಈ ಸಂದರ್ಭದಲ್ಲಿ ಸೇರಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications