ಪದ್ಮರಾಜ ದಂಡಾವತಿ ಅನುವಾದಿತ ಕೃತಿ 'ಸೀತಾ' ಶೀಘ್ರ ಮಾರುಕಟ್ಟೆಗೆ
ಬೆಂಗಳೂರು, ಮೇ 15: ಹಿರಿಯ ಪತ್ರಕರ್ತರು- ಲೇಖಕರಾದ ಪದ್ಮರಾಜ ದಂಡಾವತಿ ದೇವದತ್ತ್ ಪಟ್ಟನಾಯಕ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೀತಾ- ರಾಮಾಯಣದ ಸಚಿತ್ರ ಮರುಕಥನ ಎಂದು ಈ ಕೃತಿಗೆ ಹೆಸರಿಡಲಾಗಿದೆ. ಮನೋಹರ ಗ್ರಂಥ ಮಾಲೆಯಿಂದ ಈ ಪುಸ್ತಕವನ್ನು ಮುದ್ರಣ ಮಾಡಲಾಗಿದ್ದು, 374 ಪುಟಗಳಿರುವ ಈ ಪುಸ್ತಕದಲ್ಲಿ 200 ರೇಖಾಚಿತ್ರಗಳಿವೆ.
Recommended Video
ಶೀಘ್ರದಲ್ಲೇ ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. 700 ರುಪಾಯಿ ಬೆಲೆಯ ಪುಸ್ತಕ ಸದ್ಯಕ್ಕೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ. 490 ರುಪಾಯಿ ಹಾಗೂ ಜತೆಗೆ ಅಂಚೆ ವೆಚ್ಚವನ್ನು ಪಾವತಿಸಿದರೆ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸಲಾಗುತ್ತದೆ. ಅದಕ್ಕಾಗಿ ಸಮೀರ ಜೋಶಿ- ಮೊ. 9845447002ಗೆ ವಾಟ್ಸಾಪ್ ಕಳುಹಿಸಬೇಕು.

ಇನ್ನು ಆನ್ ಲೈನ್ ನಲ್ಲಿ ಖರೀದಿ ಮಾಡುವುದಕ್ಕೆ www.granthamala.com ವೆಬ್ ಸೈಟ್ ಗೆ ಭೇಟಿ ನೀಡಬಹುದು. ಇನ್ನು ಈ ಕೃತಿಯ ಬಗ್ಗೆ ಖ್ಯಾತ ವಿಮರ್ಶಕರಾದ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾರೆ. "ಒಂದು ಪ್ರಸಿದ್ಧ, ವಿವಾದಾಸ್ಪದ ಹಾಗೂ ರೋಚಕ ರಾಮಾಯಣ ಮರುಕಥನವನ್ನು ತುಂಬಾ ಎಚ್ಚರಿಕೆಯಿಂದ ಹಾಗೂ ಅಸಾಧ್ಯ ಶ್ರಮದಿಂದ ಕನ್ನಡಕ್ಕೆ ಅನುವಾದಿಸಿರುವ ಪದ್ಮರಾಜ ದಂಡಾವತಿಯವರಿಗೆ ಹಾರ್ದಿಕ ಅಭಿನಂದನೆಗಳು".











Click it and Unblock the Notifications