ಜನಪ್ರಿಯ ಸಾಹಿತ್ಯ ವಿಮರ್ಶಕರು ತಿರಸ್ಕರಿಸುವುದು ಏಕೆ?
ಡಾ. ಸಿ.ಎನ್.ರಾಮಚಂದ್ರನ್ ಅವರು ವಿಮರ್ಶೆಗೆ ಇಂದು ತೆರೆದುಕೊಳ್ಳುವ ಮನಃಸ್ಥಿತಿಯೇ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಜನಪ್ರಿಯ ಸಾಹಿತ್ಯವನ್ನು ವಿಮರ್ಶಕರು ತಿರಸ್ಕರಿಸುವುದು ಏಕೆ? ಎನ್ನುವುದನ್ನು ವಿವರಿಸಿದರು. ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ಸೋದಾರಣವಾಗಿ ವಿವರಿಸಿದರು. ಅಲ್ಲದೇ ಕೊನೆಯಲ್ಲಿ ಯು.ಆರ್.ಎ. ಅವರ 'ಸಂಸ್ಕಾರ' ಕಾದಂಬರಿಯನ್ನಿಟ್ಟುಕೊಂಡು ಈ ಎಲ್ಲಾ ಆಯಾಮಗಳನ್ನು ಚರ್ಚಿಸಿದರು. ಯಾವ್ಯಾವ ರೀತಿ ಒಂದು ಬರಹವನ್ನು ವಿಮರ್ಶಿಸಬೇಕು ಎನ್ನುವುದನ್ನು ಕಾದಂಬರಿಯ ಮೂಲಕ ಹೇಳಿ ಕೊಟ್ಟರು.
ವಿವರಣೆ : ಜನಪ್ರಿಯ ಕೃತಿ ಹಿತಾನುಭವವನ್ನು ಕೊಡುವಂಥದ್ದಾಗಿರುತ್ತದೆ. ಓದುಗರಿಗೆ ಸಮಾಧಾನವನ್ನು ಕೊಡುತ್ತದೆ. ಕೃತಿಯಲ್ಲಿ ಪ್ರತಿಪಾದಿಸಿದ ವಿಷಯಗಳ ಜೊತೆ ಓದುಗ ಸಮೀಕರಿಸಿಕೊಂಡಾಗ, ತನ್ನ ಅನುಭವ, ನಂಬಿಕೆಗಳು ಸರಿ ಇವೆ.. ಅವೆಲ್ಲಾ ಇಲ್ಲೂ ಇವೆ. ಈ ಸಮಾಜ ಬಹು ಒಳ್ಳೆಯದಾಗಿದೆ ಎಂಬುದನ್ನು ನಂಬುವಂತೇ ಮಾಡುತ್ತವೆ ಜನಪ್ರಿಯ ಸಾಹಿತ್ಯಗಳು. ಯಾರಾದರೂ ಓದುಗನ ಕಲ್ಪನೆಗಿಂತ ಭಿನ್ನವಾದ ಸಮಾಜವನ್ನು ತೋರಿದಾಗ ಆತನಿಗೆ ಕಸಿವಿಸಿಯಾಗುತ್ತದೆ. ಹಾಗಾಗಿ ಅದನ್ನಾತ ಓದಲು ಹೋಗುವುದೇ ಇಲ್ಲಾ. ವಸ್ತು ನಿಷ್ಠ ವಿಮರ್ಶಕನ ಕರ್ತವ್ಯವೇನೆಂದರೆ - ಓದುಗನಲ್ಲಿರುವಂಥ ಎಲ್ಲಾ ನಂಬಿಕೆ, ಆಚರಣೆಗಳನ್ನು ಸ್ವವಿಮರ್ಶಿಸಿಕೊಳ್ಳುವಂತೆ ಮಾಡುವುದು. ಅಂತಹ ಕೃತಿಯನ್ನೇ ಆಯ್ದುಕೊಳ್ಳುವುದು. ಅಂದರೆ ಓದುಗನ ಮನಸನ್ನು ತಿವಿಯುವಂಥ, ಅಲ್ಲೋಲಕಲ್ಲೋಲ ಮಾಡುವಂಥ ಕೃತಿಯನ್ನಾಯ್ದುಕೊಳ್ಳುವುದು.

ಸಾಹಿತ್ಯ ವಿಮರ್ಶೆಯ ಆಯಾಮಗಳು : ಕ್ರಿಟಿಕ್ ಅನ್ನೋ ಪದಕ್ಕೆ ವಿವಿಧ ಆಯಾಮಗಳಿವೆ. ಮೇಧಾವಿಗಳು, ಸಾಮಾಜಿಕ ಚಿಂತಕರು, ರಾಜಕೀಯ ಚಿಂತಕರು ಇವರೆಲ್ಲರೂ ವಿಮರ್ಶಕರೇ. ಶ್ರೇಷ್ಠ ವಿಮರ್ಶೆ ಅನ್ನೋದು ಈ ಎಲ್ಲಾ ಅಂಶಗಳನ್ನೂ ಒಳಗೊಂಡಿರುವಂಥದ್ದಾಗಿರುತ್ತದೆ. ಆಯಾಮಗಳು ಸಾಹಿತ್ಯ ಕೃತಿಯ 4 ಪರಿಮಾಣಗಳನ್ನು ಆಧರಿಸಿರುತ್ತವೆ. ಅವು ಹೀಗಿವೆ. 1) ಲೇಖಕ 2) ಕೃತಿ 3) ಸ್ಪಂದಿಸುವ ಓದುಗ 4) ಇವನ್ನೆಲ್ಲಾ ಒಟ್ಟುಗೂಡಿದ ಸಾಮಾಜಿಕ ವ್ಯವಸ್ಥೆ.
ವಿಮರ್ಶೆ ಆಯಾ ಕಾಲದಲ್ಲಿ ಯಾವುದಾದರೂ ಒಂದೇ ಪರಿಮಾಣದ ಮೇಲೂ ಅವಲಂಬಿತವಾಗಿರುತ್ತದೆ/ಕೇಂದ್ರಿತವಾಗಿರುತ್ತದೆ. ಹೇಗೆಂದರೆ..
1) ಲೇಖಕನ ಮೇಲೆ ಕೇಂದ್ರಿತ ವಿಮರ್ಶೆ (Biological criticism)
2)ಕೃತಿ ಕೇಂದ್ರಿತ ವಿಮರ್ಶೆ : ಇದರಲ್ಲೂ ವಿಶ್ಲೇಷಿಸುವ ಬಗೆ ಬೇರೆ ಬೇರೆಯದ್ದಾಗಿರುತ್ತದೆ. ಪ್ರಬೇಧ ಆಧಾರಿತ, ನವ್ಯ, ಕಥನ ಶಾಸ್ತ್ರ, ತೌಲನಿಕ. ವಿಮರ್ಶೆ ಹೀಗೆ ವಿಂಗಡಿಸಬಹುದು. ಭಾರತೀಯ ಕಾವ್ಯ ಮೀಮಾಂಸೆಯೂ ಒಂದು ಕೃತಿ ಕೇಂದ್ರಿತವೇ ಆಗಿದೆ.
3) ಓದುಗನ ಕೇಂದ್ರಿತ ವಿಮರ್ಶೆ : ಇದಕೆ ವಾಚಕ ಸ್ಪಂದನ ವಿಮರ್ಶಾ ಪರಿಮಾಣ ಎಂದೂ ಹೇಳುತ್ತಾರೆ.
ಶ್ರೇಷ್ಠ ವಿಮರ್ಶೆ ಎನ್ನುವುದು ಈ ಎಲ್ಲಾ ಪರಿಮಾಣಗಳನ್ನೂ ಒಳಗೊಂಡಿರುತ್ತದೆ. ವಿಮರ್ಶೆಗೆ ಸಾಕ್ಷ್ಯವೆಂದರೆ ಅಲ್ಲಿ ಬರುವ ಪಾತ್ರಗಳೇ. ಕೃತಿಯೊಳಗಿನ ವಿವರಗಳು ಮತ್ತು ತನ್ನ ವೈಚಾರಿಕ ಸಂಹಿತೆಯನ್ನಾಧಾರಿಸಿ ತೀರ್ಪಿಗೆ ಬರುತ್ತಾನೆ. ಆತ ಕೊಡುವ ತೀರ್ಮಾನ ಏನೇ ಇದ್ದಿರಲಿ.. ಆತ ಕೃತಿಯನ್ನು ತಿರಸ್ಕರಿಸಿರಲು ಅಥವಾ ಸ್ವೀಕರಿಸಿರಲಿ, ಅವನ ತೀರ್ಪು ಕೃತಿಯ ವಿವರಗಳನ್ನಾಧರಿಸಿಯೇ ಬರಬೇಕಾಗುತ್ತದೆ. ಆಗ ಮಾತ್ರ ಅಂಥ ವಿಮರ್ಶೆ ಸ್ವೀಕಾರ್ಯವಾಗುತ್ತದೆ. ಸಾಹಿತ್ಯ ಕೃತಿಯಲ್ಲಿ ವೈಜ್ಞಾನಿಕ ಬರಹಗಳಂತೆ ಇದು ಸರಿ, ಅದು ತಪ್ಪು ಎಂಬ ಇದಮಿತ್ಥಂ ಇಲ್ಲ. ಇಲ್ಲಿ ಮಿಶ್ರ ತೀರ್ಮಾನಗಳಿರುತ್ತವೆ.
ಚರ್ಚೆ, ಸಂವಾದಗಳು ಸಾಹಿತ್ಯದಲ್ಲಿ ಮಾತ್ರ ಸಾಧ್ಯ. ಇಲ್ಲಿ ಬರುವ ಸಂಸ್ಕೃತಿಗಳಲ್ಲಿ ಯಾವುದೇ ಮೇಲು ಕೀಳು ಎಂಬ ಭಾವವಿಲ್ಲ. ಓದುಗನಾಗಿ ಸುಲಭ ತೀರ್ಮಾನಕ್ಕೆ ಬರಬೇಡಿ ಎನ್ನುವ ಪ್ರಬುದ್ಧ ಓದುಗನೇ ವಿಮರ್ಶಕ. ವಿಮರ್ಶಕನೂ ಓರ್ವ ಓದುಗ. ಆದರೆ ಸಾಮಾನ್ಯ ಓದುಗರು ಓದಿಕೊಂಡಿರುವುದಕ್ಕಿಂತ ಹೆಚ್ಚು ಓದಿ ಗ್ರಹಿಸುತ್ತಾನೆ. ವಸ್ತುನಿಷ್ಠ ವಿಮರ್ಶಕನಾಗಲ್ಲು ಹೆಚ್ಚು ಹೆಚ್ಚು ಓದಬೇಕು. ಈ ರೀತಿ ಓರ್ವ ವಿಮರ್ಶಕ ಒಂದು ಕೃತಿಯನ್ನು ತೆಗೆದುಕೊಂಡಾಗ ಹೇಗೆ ಮುಂದುವರಿಯುತ್ತಾನೆ? ಮುಂದುವರಿಯ ಬೇಕು ಎಂಬುದನ್ನು ವಿವರಿಸಿದರು.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ











Click it and Unblock the Notifications