ಭಾನುವಾರ ರಾಜೀವ್ ತಾರಾನಾಥ್ ಪುಸ್ತಕ ಬಿಡುಗಡೆ
ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ರಾಜೀವ್ ತಾರಾನಾಥ್ ಅವರ ಪುಸ್ತಕವನ್ನು ಸುಮಂಗಲಾ ಅವರು ನಿರೂಪಿಸಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಎಂಪಿ ಪ್ರಕಾಶ್ ಅವರು ಬಿಡುಗಡೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಕೊಲ್ಕತಾದಲ್ಲಿ ಅಲಿ ಅಕ್ಬರ್ ಖಾನ್ ಅವರ ಗರಡಿಯಲ್ಲಿ ಪಳಗಿದ ರಾಜೀವ್ ತಾರಾನಾಥ್ ಅವರ ಕುರಿತು ಹಿಂದೂಸ್ತಾನಿ ಗಾಯಕರಾದ ಪಂಡಿತ್ ಪರಮೇಶ್ವರ ಹೆಗಡೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.
ರಾಜೀವ್ ತಾರಾನಾಥ್ ಅವರ ಉಪಸ್ಥಿತಿಯಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರೊ. ಬಿಕೆ ಚಂದ್ರಶೇಖರ್ ಮತ್ತು ವೀಣಾವಾದಕ ವಿದ್ವಾನ್ ಡಿ. ಬಾಲಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ವಹಿಸುತ್ತಿದ್ದಾರೆ.
ಕಾರ್ಯಕ್ರಮದ ವಿವರ
ಪುಸ್ತಕ
ಬಿಡುಗಡೆ
ಮತ್ತು
ಅಭಿನಂದನಾ
ಸಮಾರಂಭ
ಭಾನುವಾರ,
ಜುಲೈ
25ರಂದು,
ಸಂಜೆ
5
ಗಂಟೆಗೆ
ನಯನ
ಸಭಾಂಗಣ,
ಕನ್ನಡ
ಭವನ,
ಜೆಸಿ
ರಸ್ತೆ,
ಬೆಂಗಳೂರು
-
560
002.