ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿ

ಮಾಧ್ಯಮ ಸ್ವಾತಂತ್ರವನ್ನು ದೇಶದ ಅಂತರಿಕ ಭದ್ರತೆಗೆ, ದೇಶದ ಸಾರ್ವಭೌಮತ್ವಕ್ಕೆ ಮತ್ತು ಐಕ್ಯತೆ ಧಕ್ಕೆ ತರುವಂಥ ಸಂದರ್ಭ ಒದಗಿದಾಗ ನಿಷೇಧಿಸಬಹುದಾಗಿದೆ. 1975ರಲ್ಲಿ ಭಾರತ ಸರ್ಕಾರ ಎಮರ್ಜೆನ್ಸಿ ಘೋಷಣೆ ಮಾಡಿದಾಗ ಈ ಸ್ವಾತಂತ್ರವನ್ನು ಕಸಿದುಕೊಂಡಿತ್ತು. ಸರ್ಕಾರದ ವಿರುದ್ಧ ಯಾವ ಮಾಧ್ಯಮವು ಬರೆಯುವ ಹಾಗೆ ಇರಲಿಲ್ಲ. ಎಲ್ಲವನ್ನು ಸೆನ್ಸಾರ್ ಮಾಡಲಾಗಿತ್ತು. ಆದರೆ ಅದೇ ಮಾಧ್ಯಮದಿಂದ ಈ ಸಮಾಜಕ್ಕೆ ಏನಾದರು ದುಷ್ಪರಿಣಾಮವಾದರೆ? ಮಾಧ್ಯಮಕ್ಕೆ ಬೌಂಡರಿ ಇಲ್ಲವಾದರೂ ಅದು ತನ್ನದೇ ಆದ ಜವಾಬ್ದಾರಿಯನ್ನು ಹೊಂದಿದೆ. ಅದು ಒಂದು ಸಮಸ್ಯೆಯನ್ನು ಸಮಾಜಕ್ಕೆ ಹೇಳಬಹುದು ಆದರೆ ಅದೇ ಸಮಸ್ಯೆಯನ್ನು ತೋರಿಸಿ ಇನೊಂದು ಸಮಸ್ಯೆಗೆ ದಾರಿ ಮಾಡಿಕೊಡಬಾರದು.
ಕೆಲವೊಮ್ಮೆ ಸುದ್ದಿಯನ್ನು ತಿಳಿಸುವ ಬದಲು ಆ ಸುದ್ದಿಯನ್ನು ರಾರಾಜಿಸಿ ಪ್ರಚೋದನೆ ಮಾಡುವ ಮಟ್ಟಕ್ಕೆ ಮಾಧ್ಯಮಗಳು ಪ್ರಚಾರ ಮಾಡುತ್ತವೆ. ಹಿಂದೆಯೆಲ್ಲ ಕೋಮುಗಲಭೆಗೆ ಜಾಸ್ತಿ ಒತ್ತು ಕೊಡದೆ ಅದನ್ನು ಅಷ್ಟಕ್ಕೆ ಬಿಡುತ್ತಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ breaking news ಕೊಡುವ ತವಕದಲ್ಲಿ ಸುದ್ದಿವಾಹಿನಿಗಳು ಕೋಮುಗಲಭೆಯನ್ನು ಅತಿರಂಜಿತವಾಗಿ ತೋರಿಸಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಉದಾಹರಣೆಗೆ: ಹಿಂದೂ-ಮುಸ್ಲಿಂ ಸಮಸ್ಯೆಯನ್ನು ರಸವತ್ತಾಗಿ ತೋರಿಸಿದರೆ ಎಲ್ಲಡೆ ಇದರ ದುಷ್ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಎಷ್ಟೋ ಊರುಗಳಲ್ಲಿ ಕಾರಣವಿಲ್ಲದೆಯೇ ಗಲಭೆ ಸಂಭವಿಸುತ್ತದೆ.
ಇತ್ತೀಚೆಗೆ ಉಡುಪಿ ಶಾಸಕರ ಪತ್ನಿ ಯಾರೊಡನೆಯೋ ಊರುಬಿಟ್ಟು ಹೋದರು, ಅದಕ್ಕೆ ಮಾಧ್ಯಮದವರು ದೇಶಾದ್ಯಂತ ಪ್ರಚಾರ ಕೊಟ್ಟರು, ಶಾಸಕರಪತ್ನಿ ಕೊನೆಗೆ ನೇಣಿಗೆ ಶರಣಾದರು. ನಾನು ಈ ಸುದ್ದಿಯನ್ನು ಬಿತ್ತರಿಸಿದ್ದು ತಪ್ಪೆಂದು ಹೇಳುತ್ತಿಲ್ಲ ಆದರೆ ಅದನ್ನು ಅಷ್ಟು ಪ್ರಚಾರ ಕೊಟ್ಟು ತೋರಿಸುವ ಅವಶ್ಯಕತೆ ಇರಲಿಲ್ಲ ಎಂದು ಭಾವಿಸುತ್ತೇನೆ. ಇದರ ಮಧ್ಯೆ ನಮ್ಮ ಗೃಹ ಸಚಿವರು ವಿಎಸ್ ಆಚಾರ್ಯ ಅವರು ಮಾಧ್ಯಮಗಳಿಗೆ Ombudsman ಜಾರಿಗೆ ತರುವುದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡರು.
ಮೊನ್ನೆ ಮೈಸೂರಿನಲ್ಲಿ ನಡೆದ ಮತೀಯ ಗಲಭೆ ಈ ಲೇಖನ ಬರೆಯುವುದಕ್ಕೆ ಪ್ರಮುಖ ಪ್ರೇರಣೆ. ಈ ಗಲಭೆಯನ್ನು ಮಾಧ್ಯಮಗಳು ವಿನಾಕಾರಣ ಸುದ್ದಿಯನ್ನು ರಂಜಿಸದೆ ಕೋಮುಗಲಭೆ ಎಂದು ತೋರಿಸಿದರು. ಈ ಸುದ್ದಿ ಎಷ್ಟೋ ಜನಕೆ ಅರಿವಿಲ್ಲದಿರುವುದು ಸುದ್ದಿ ಹರಡದಿರಲು ಸಹಕಾರಿಯಾಯಿತು. ಮೈಸೂರು ದಾಟಿ ಈ ಸಮಸ್ಯೆ ಎಲ್ಲೂ ಪರಿಣಾಮ ಬೀರಲಿಲ್ಲ. ಎಲ್ಲ ಪ್ರಮುಖ ಸುದ್ದಿವಾಹಿನಿಗಳು TV9, ಸುವರ್ಣ, ನ್ಯಾಷನಲ್ ನ್ಯೂಸ್ ಚಾನೆಲ್ ಗಳಾದ Times Now ಕೂಡ ಕೋಮುಗಲಭೆ ಎಂದು ತೋರಿಸಿದರೆ CNN ಮಾತ್ರ "ಮಂದಿರ-ಮಸೀದಿ ಸಮಸ್ಯೆ ಮತ್ತೆ ಶುರು" ಎಂದು ಬಿತ್ತರಿಸಿತು. ಅದೃಷ್ಟವಶಾತ್ ಈ ಸಮಸ್ಯೆ ಅಲ್ಲಿಗೆ ಮುಗಿಯಿತು. ಹೀಗೆಯೇ ಮಾಧ್ಯಮದವರು ತಮ್ಮ ಜವಾಬ್ದಾರಿಯನ್ನು ಅರಿತು ಸುದ್ದಿ ಅರುಹಿದರೆ ಎಷ್ಟೋ ಸಮಸ್ಯೆಗಳು ಹುಟ್ಟುವಲ್ಲಿಯೇ ಸತ್ತುಹೋಗುತ್ತವೆ. ಅಲ್ಲವೆ?
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications