Saturday Worship Hanuman: ಶನಿವಾರದಂದು ಹನುಮನ್ನನ್ನು ಹೀಗೆ ಪೂಜಿಸಿ.. ಹಣದ ಸಮಸ್ಯೆ ದೂರವಾಗುತ್ತೆ..
ರಾಮನ ಕಟ್ಟಾ ಭಕ್ತ ಮತ್ತು ಅಂಜನಿ ಪುತ್ರನಾದ ಹನುಮಂತನನ್ನು ಪ್ರತೀ ಶನಿವಾರ ಪೂಜಿಸಲಾಗುತ್ತದೆ. ಹನುಮಂತ ತುಂಬಾ ಧೈರ್ಯಶಾಲಿ ಮತ್ತು ಬುದ್ಧಿವಂತ. ಹನುಮಂತನ ಕೃಪೆ ಇದ್ದರೆ ಎಂತಹ ಪರಿಸ್ಥಿತಿಯನ್ನಾದರೂ ಧೈರ್ಯದಿಂದ ಎದುರಿಸಿ ಜಾಣ್ಮೆಯಿಂದ ಗೆಲ್ಲುವ ಶಕ್ತಿ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ.
ಹೀಗಾಗಿ ಅನೇಕ ಜನರು ಶನಿವಾರ ಉಪವಾಸ ಮಾಡುತ್ತಾರೆ. ಪೂಜೆ ಪ್ರಾರ್ಥನೆ ಮೂಲಕ ಹನುಮಂತನ ಆಶೀರ್ವಾದವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಶನಿವಾರದಂದು ಮನೆಯಲ್ಲಿನ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮತ್ತು ಅದೃಷ್ಟವನ್ನು ಹೆಚ್ಚಿಸಲು ಕೆಲವು ಪರಿಹಾರಗಳನ್ನು ಮಾಡುತ್ತಾರೆ. ಹಾಗಾದರೆ ಶನಿವಾರ ಯಾವ ಕೆಲಸಗಳು ಮಾಡುವುದರಿಂದ ಹನುಮನ ಆಶೀರ್ವಾದ ಪಡೆಯಬಹುದು.

ಹಣದ ಸಮಸ್ಯೆಯಿಂದ ಮುಕ್ತಿ...
ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದರೆ, ಶನಿವಾರದಂದು 11 ಆಲದ ಎಲೆಗಳಿಗೆ ಕೆಂಪು ಚಂದನವನ್ನು ಲೇಪಿಸಿ, ಶ್ರೀರಾಮನಿಗೆ ಅರ್ಪಿಸಿ. ಅದನ್ನು ಮಾಲೆಯಾಗಿ ತಯಾರಿಸಿ ಹನುಮಂತನಿಗೆ ಹಾಕಿ. ಹೀಗೆ ಮಾಡುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಆರೋಗ್ಯದ ತೊಂದರೆಗಳನ್ನು ಕಡಿಮೆ ಮಾಡಲು...
ನಿಮ್ಮ ಮನೆಯಲ್ಲಿರುವವರು ಪದೇ ಪದೇ ಯಾವುದಾದರೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಹನುಮಂತನನ್ನು ಪೂಜಿಸುವ ಮುನ್ನ ರೋಗಿಯ ಹಣೆಗೆ ಕೇಸರಿ ಕುಂಕುಮವನ್ನು ಹಚ್ಚಬೇಕು. ಇದನ್ನು ಹಚ್ಚುವುದರಿಂದ ಪದೇ ಪದೇ ಬರುವ ಕಾಯಿಲೆಗಳು ದೂರವಾಗುತ್ತವೆ ಎನ್ನುತ್ತಾರೆ. ಮಾತ್ರವಲ್ಲದೆ ಇದು ಕಣ್ಣಿನ ಆಯಾಸವನ್ನು ಸಹ ತೆಗೆದುಹಾಕಲಾಗುತ್ತದೆ ಎಂದು ನಂಬಲಾಗುತ್ತದೆ.
ವೃತ್ತಿಯಲ್ಲಿ ಪ್ರಗತಿ ಕಾಣಲು...
ಎಷ್ಟೇ ಕಷ್ಟಪಟ್ಟರೂ ಫಲ ಸಿಗದೆ ಕಷ್ಟಪಡುತ್ತಿದ್ದೀರಾ? ಹಾಗಾದರೆ ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣಲು ಶನಿವಾರದಂದು ಹನುಮಂತನ ಮುಂದೆ ದೀಪವನ್ನು ಹಚ್ಚಿ 'ಓಂ ಹನುಮದೇ ನಮೋ ನಮ:' ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಮನೆಯಲ್ಲಿ ರುದ್ರಾಕ್ಷ ಮಾಲೆ ಇದ್ದರೆ ಅದರೊಂದಿಗೆ ಹೇಳಬಹುದು. ಹೀಗೆ ಮಾಡುವುದರಿಂದ ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.

ಮಕ್ಕಳ ಸಮಸ್ಯೆಗಳಿಂದ ಮುಕ್ತಿ..
ಸಂತಾನ ಸಮಸ್ಯೆ ಇರುವವರು ಶನಿವಾರ ಮನೆಯಲ್ಲಿ ಹನುಮಾನ್ ಚಾಲೀಸ್ ಪಠಿಸಿ, ಬಡವರಿಗೆ ಮೋಚಿಚೂರು ಲಡ್ಡುವನ್ನು ಪ್ರಸಾದವಾಗಿ ಅರ್ಪಿಸಿ, ದಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಶತ್ರುಗಳನ್ನು ತೊಲಗಿಸಿ..
ನಿಮ್ಮ ಶತ್ರುಗಳು ನಿಮ್ಮ ಕೆಲಸದಲ್ಲಿ ಬಹಳಷ್ಟು ಹಸ್ತಕ್ಷೇಪ ಮಾಡುತ್ತಾರೆ ಮತ್ತು ಕೆಲಸವನ್ನು ಪೂರ್ಣಗೊಳಿಸದಂತೆ ನಿಮ್ಮನ್ನು ತಡೆಯುತ್ತಾರೆಯೇ? ಹಾಗಾದರೆ ಶನಿವಾರ ಹನುಮಂತನಿಗೆ ವೀಳ್ಯದೆಲೆ, ಹಸಿರು ಕರ್ಪೂರ ಮತ್ತು ಲವಂಗವನ್ನು ಮಾಲೆ ಹಾಕಿ ಆರತಿಯನ್ನು ಸಲ್ಲಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ.
ನಕಾರಾತ್ಮಕ ಶಕ್ತಿಯಿಂದ ದೂರವಿರಲು...
ನಿಮ್ಮ ಮನೆ ತುಂಬಾ ನಕಾರಾತ್ಮಕ ಶಕ್ತಿಯಿಂದ ತುಂಬಿದೆ ಎಂದು ನೀವು ಅನಿಸಿದರೆ ಮನೆಯ ಮುಂದೆ ಕೆಂಪು ಬಟ್ಟೆಯನ್ನು ಕಟ್ಟಿ. ಹೀಗೆ ಮಾಡುವುದರಿಂದ ಹನುಮಂತನು ನಿಮ್ಮ ಮನೆಗೆ ಉತ್ತಮ ಕಾವಲು ದೇವತೆಯಾಗುತ್ತಾನೆ ಎಂದು ಹೇಳಲಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications