Monsoon Health: ಮಳೆಗಾಲದಲ್ಲಿ ಅಲರ್ಜಿ ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ಏನು ತಿನ್ನಬೇಕು?
ಮುಂಗಾರು ಮಳೆ ಆರಂಭವಗಿದ್ದು ದೇಶದೆಲ್ಲೆಡೆ ವರುಣನನ ಅಬ್ಬರ ಮುಂದುವರೆಯುತ್ತಿದೆ. ಮಳೆ ಆಹ್ಲಾದಕರ ವಾತಾವರಣ ನೀಡುತ್ತದೆ. ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಮತ್ತಷ್ಟು ಮನಸ್ಸಿಗೆ ನಾಟುವಂತೆ ಮಾಡುತ್ತಿದೆ. ಇದರೊಂದಿಗೆ ಹಲವು ರೋಗಗಳನ್ನು ಕೂಡ ತನ್ನ ಜೊತೆಗೆ ತರುತ್ತದೆ.
ಮಾನ್ಸೂನ್ ಸಮಯದಲ್ಲಿ ಅಲರ್ಜಿಗಳು ಮತ್ತು ಸೋಂಕುಗಳ ಅಪಾಯ ಹೆಚ್ಚು. ಮಣ್ಣಿನ ತೇವಾಂಶವು ರೋಗ ಮತ್ತು ಸೋಂಕು ಹರಡಲು ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ದೇಶದ ರೋಗನಿರೋಧಕ ಶಕ್ತಿ ಹೆಚ್ಚಿರುವುದು ತುಂಬಾ ಮುಖ್ಯ. ಈ ಸಂದರ್ಭದಲ್ಲಿ ಪೋಷಕಾಂಶ ಭರಿತ ಆಹಾರಗಳು ನಮ್ಮ ಊಟದಲ್ಲಿ ಮೊದಲ ಪ್ರಾಮುಖ್ಯತೆ ಪಡೆಯಬೇಕು.

ತೇವಾಂಶವು ಕರುಳಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಿಂದ ಕರುಳಿನ ಸೋಂಕುಗಳಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ ಮತ್ತು ನೀರು ಸಹ ಅಪಾಯ ಉಂಟುಮಾಡುತ್ತದೆ. ಸರಿಯಾದ ಆಹಾರದ ಆಯ್ಕೆಗಳು ಕರುಳನ್ನು ಬಲಪಡಿಸಬಹುದು ಮತ್ತು ಈ ಸೋಂಕುಗಳನ್ನು ಮೀರಲು ಸಹಾಯ ಮಾಡಬಹುದು.
ಅಲರ್ಜಿ ಮತ್ತು ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಆಹಾರಗಳು
* ಅರಿಶಿನ: ಆಯುರ್ವೇದದಲ್ಲಿನ ಮೂಲಿಕೆಯಾದ ಹಳದಿ ಚಿನ್ನ ಅರಿಶಿನ. ಈ ಮಸಾಲೆಯು ಕರ್ಕ್ಯುಮಿನ್ ಅನ್ನು ಹೊಂದಿದೆ. ಅರಿಶಿನದಲ್ಲಿನ ಅಂಶಗಳು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕವಾಗಿದ್ದು ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲರ್ಜಿ ಮತ್ತು ಸೋಂಕುಗಳನ್ನು ಕಡಿಮೆ ಮಾಡುತ್ತದೆ.
* ಶುಂಠಿ: ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿ ಶುಂಠಿ ಕೆಲಸ ಮಾಡುತ್ತದೆ. ಗಂಟಲು ಕಡಿತ, ಗಂಟಲು ಕಿರಿಕಿರಿ, ತೆಲನೋವು, ನೆಗಡಿಯಾದರೇ ಇಂದಿಗೂ ಮನೆಯಲ್ಲಿ ಮೊದಲ ಮದ್ದು ಶುಂಠಿ ಕಷಾಯ. ಇದರ ಜೊತೆಗೆ ಶುಂಠಿಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
* ಸಿಟ್ರಸ್ ಹಣ್ಣುಗಳು: ತಂಡಿ ಸಮಯದಲ್ಲಿ ಕಿತ್ತಳೆ, ನಿಂಬೆಹಣ್ಣು ಮತ್ತು ಮೋಂಸಂಬಿ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ. ಈ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ತುಂಬಿವೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಮತ್ತು ಕರುಳಿನ ಸಮಸ್ಯೆಗಳ ವಿರುದ್ಧ ಹೋರಾಡುವ ಪ್ರಮುಖ ರೋಗನಿರೋಧಕ ಬೂಸ್ಟರ್ ಆಗಿದೆ.

* ಮೊಸರು: ಪ್ರೋಬಯಾಟಿಕ್ಗಳೊಂದಿಗೆ ಪ್ಯಾಕ್ ಮಾಡಲಾದ ಮೊಸರು ಸುಧಾರಿತ ಜೀರ್ಣಕ್ರಿಯೆಗಾಗಿ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚು ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಸರು ಸೇವನೆಯಿಂದ ಜಠರಗರುಳಿನ ಸೋಂಕು ಕಡಿಮೆಯಾಗಲಿದ್ದು, ಮಳೆಗಾಲ ಕಾಯಿಲೆಗಳಿಂದ ರಕ್ಷಿಸುತ್ತದೆ.
* ಬೆಳ್ಳುಳ್ಳಿ: ಪ್ರಕೃತಿಯ ಆಂಟಿಬಯೋಟಿಕ್ ಮತ್ತು ಆಂಟಿವೈರಲ್ ಪವರ್ಹೌಸ್ ಎಂದರೆ ಅದು ಎಲ್ಲರ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ. ಬೆಳ್ಳುಳ್ಳಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸಾಮಾನ್ಯ ಶೀತಗಳು ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
* ಹಾಗಲಕಾಯಿ: ಹಾಗಲಕಾಯಿ ಎಂದ ತಕ್ಷಣ ಹಲವು ಮಂದಿ ಮುಖ ಮುರಿಯುತ್ತಾರೆ. ಅದರೆ, ನಿಜಕ್ಕೂ ಇದು ಪೋಷಕಾಂಶಗಳ ಖನಿಜ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಲವರು ಇದರ ಕಹಿಯಿಂದಾಗಿ ದೂರ ಓಡುತ್ತಾರೆ. ಆದರೆ, ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದರೇ ನಿಜಕ್ಕೂ ಹತ್ತಿರಕ್ಕೆ ಓಡಿ ಬರುತ್ತಾರೆ. ಹಾಗಲಕಾಯಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
* ಹಸಿರು ಎಲೆಗಳ ತರಕಾರಿಗಳು: ಪಾಲಕ ಮತ್ತು ಕೇಲ್ (kale) ನಂತಹ ಸೋಪ್ಪುಗಳು ವಿಟಮಿನ್ಗಳು, ಖನಿಜಗಳು ಮತ್ತು ರೋಗ ನಿರೋಧಕಗಳಿಂದ ತುಂಬಿರುವ ಪವರ್ಹೌಸ್. ಈ ಸೋಪ್ಪುಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತಾರೆ.












Click it and Unblock the Notifications