Jolada Rotti Recipe: ಉತ್ತರ ಕರ್ನಾಟಕ ಜೋಳದ ರೊಟ್ಟಿ ರೆಸಿಪಿ- ಮನೆಯಲ್ಲಿ ತಯಾರಿಸಲು ಕಷ್ಟನಾ? ಇಲ್ಲಿದೆ ಸರಳ ವಿಧಾನ
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಪ್ರತೀ ದಿನ ಊಟಕ್ಕೆ ಈ ಭಾಗದ ಜನ ರೊಟ್ಟಿಯನ್ನು ತಯಾರಿಸಿ ಸೇವಿಸುತ್ತಾರೆ. ಇದರೊಂದಿಗೆ ಬಗೆ ಬಗೆಯ ತರಕಾರಿ, ಸೊಪ್ಪಿನ ಪಲ್ಯ ತಯಾರಿಸುವುದು ಇಲ್ಲಿನ ವಿಶೇಷ. ಆದರೀಗ ಜೋಳದ ರೊಟ್ಟಿ ಕೇವಲ ಉತ್ತರ ಕರ್ನಾಟದ ಭಾಗವಾಗಿ ಉಳಿದಿಲ್ಲ. ರಾಜ್ಯದ ಹಲವೆಡೆ ಇದನ್ನು ತಯಾರಿಸಲಾಗುತ್ತದೆ. ಜೊತೆಗೆ ಹೋಟೆಲ್ಗಳಲ್ಲೂ ಜೋಳದ ರೊಟ್ಟಿ ಲಭ್ಯವಿರುತ್ತದೆ. ಆದರೆ ಜೋಳದ ರೊಟ್ಟಿಯ ನಿಜವಾದ ರುಚಿ ಸವಿಯಬೇಕು ಅಂದರೆ ಉತ್ತರ ಕರ್ನಾಟಕದಲ್ಲೇ ತಿನ್ನಬೇಕು.
ಆದರೆ ಎಲ್ಲಾ ಸಮಯದಲ್ಲೂ ಇದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲೇ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಬಹುದು. ಕೆಲವರಿಗೆ ರೊಟ್ಟಿಯನ್ನು ತಯಾರಿಸುವುದು ತುಂಬಾ ಕಷ್ಟ. ಇನ್ನೂ ಕೆಲವರಿಗೆ ರೊಟ್ಟಿ ತಯಾರಿಸುವ ವಿಧಾನ ಕೇಳಿ ತಯಾರಿಸಲು ಹಿಂದೇಟು ಹಾಕುತ್ತಾರೆ. ಆದರೀಗ ನಾವು ಹೇಳುವ ಸುಲಭ ವಿಧಾನವನ್ನು ಅನುಸರಿಸಿದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಿ ಸವಿಯಬಹುದು. ಹಾಗಾದರೆ ತಡ ಮಾಡುವುದು ಬೇಡ ರೊಟ್ಟಿ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಪದಾರ್ಥ
* ಬಿಳಿ ಜೋಳದಿಂದ ನುಣ್ಣಗೆ ರುಬ್ಬಿದ ಹಿಟ್ಟು (1 ಕಪ್)
* ಉಪ್ಪು ಸ್ವಲ್ಪ (ಅಗತ್ಯವಿದ್ದರೆ ಮಾತ್ರ)
* ನೀರು
ರೊಟ್ಟಿ ತಯಾರಿಸುವ ವಿಧಾನ:-
* ಮೊದಲಿಗೆ ರೊಟ್ಟಿ ತಟ್ಟುವ ಮಣೆಯ ಮೇಲೆ ಹಿಟ್ಟು ಹಾಕಿ ಅದಕ್ಕ ಬಿಸಿ ನೀರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
* ಹಿಟ್ಟು ಚಪಾತಿ ಹದಕ್ಕೆ ಇದ್ದರೆ ತುಂಬಾ ಚೆನ್ನಾಗಿ ರೊಟ್ಟಿ ತಟ್ಟಬಹುದು ಅಥವಾ ಚಪಾತಿಯಂತೆ ಕೂಡ ತಯಾರಿಸಬಹುದು.
* ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಒಂದೊಂದೇ ಉಂಡೆಗಳನ್ನು ತೆಗೆದುಕೊಂಡು ಒಣ ಹಿಟ್ಟು ಹಾಕಿ ಮಣೆಯ ಮೇಲೆ ತಟ್ಟಿ. ರೊಟ್ಟಿ ತಟ್ಟುವಾಗ ಮಣಿಗೆ ಹಿಟ್ಟು ಹಿಡಿಯದಂತೆ ನೋಡಿಕೊಳ್ಳಬೇಕು.
* ನಿಮಗೆ ರೊಟ್ಟಿ ತಟ್ಟಲು ಸಾಧ್ಯವಾಗದೇ ಇದ್ದರೆ ಚಪಾತಿಯಂತೆ ಕೂಡ ಇದನ್ನು ತಯಾರಿಸಬಹುದು. ಆದರೆ ಇದನ್ನು ತೆಳುವಾಗಿ ತಟ್ಟಿ ಮಾಡಿದರೆ ತುಂಬಾ ಚೆನ್ನಾಗಿ ಬರುತ್ತದೆ.
*ಮೊದಲ ಬಾರಿ ತಯಾರಿಸುವವರಿಗೆ ರೊಟ್ಟಿ ತಟ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಬಿಡಬೇಡಿ. ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ನಿತ್ಯ ಹೀಗೆ ಮಾಡುವುದನ್ನು ಪ್ರಯತ್ನ ಮಾಡಿ. ಮೊದಲ ದಿನ ನಿಮಗಿದು ಕಷ್ಟವಾಗಬಹುದು. ಆದರೆ ಒಂದೆರೆಡು ದಿನದಲ್ಲಿ ಚಂದವಾಗಿ ನೀವು ರೊಟ್ಟಿಯನ್ನು ತಯಾರಿಸುವಿರಿ.
* ವೃತ್ತಾಕಾರದಲ್ಲಿ ರೊಟ್ಟಿಯನ್ನು ತಟ್ಟಿ ನಂತರ ಅದನ್ನು ತವೆಯ ಮೇಲೆ ಹಾಕಿ.
* ಒಂದು ಚಿಕ್ಕಬಟ್ಟೆಯನ್ನು ನೀರಿನಲ್ಲಿ ಅದ್ದಿ ಸ್ವಲ್ಪ ನೀರಿರುವಂತೆ ಹಿಂಡಿಕೊಂಡು ಅದನ್ನು ರೊಟ್ಟಿಯ ಮೇಲ್ಬದಿಗೆ ಹಚ್ಚಿ.
* ನಂತರ ಎರಡು ಬದಿ ರೊಟ್ಟಿಯನ್ನು ಬೇಯಿಸಿಕೊಂಡರೆ ಬಿಸಿ ಬಿಸಿ ಜೋಳದ ರೊಟ್ಟಿ ಸವಿಯಲು ಸಿದ್ಧ.
-
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ











Click it and Unblock the Notifications