Jolada Rotti Recipe: ಉತ್ತರ ಕರ್ನಾಟಕ ಜೋಳದ ರೊಟ್ಟಿ ರೆಸಿಪಿ- ಮನೆಯಲ್ಲಿ ತಯಾರಿಸಲು ಕಷ್ಟನಾ? ಇಲ್ಲಿದೆ ಸರಳ ವಿಧಾನ
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಪ್ರತೀ ದಿನ ಊಟಕ್ಕೆ ಈ ಭಾಗದ ಜನ ರೊಟ್ಟಿಯನ್ನು ತಯಾರಿಸಿ ಸೇವಿಸುತ್ತಾರೆ. ಇದರೊಂದಿಗೆ ಬಗೆ ಬಗೆಯ ತರಕಾರಿ, ಸೊಪ್ಪಿನ ಪಲ್ಯ ತಯಾರಿಸುವುದು ಇಲ್ಲಿನ ವಿಶೇಷ. ಆದರೀಗ ಜೋಳದ ರೊಟ್ಟಿ ಕೇವಲ ಉತ್ತರ ಕರ್ನಾಟದ ಭಾಗವಾಗಿ ಉಳಿದಿಲ್ಲ. ರಾಜ್ಯದ ಹಲವೆಡೆ ಇದನ್ನು ತಯಾರಿಸಲಾಗುತ್ತದೆ. ಜೊತೆಗೆ ಹೋಟೆಲ್ಗಳಲ್ಲೂ ಜೋಳದ ರೊಟ್ಟಿ ಲಭ್ಯವಿರುತ್ತದೆ. ಆದರೆ ಜೋಳದ ರೊಟ್ಟಿಯ ನಿಜವಾದ ರುಚಿ ಸವಿಯಬೇಕು ಅಂದರೆ ಉತ್ತರ ಕರ್ನಾಟಕದಲ್ಲೇ ತಿನ್ನಬೇಕು.
ಆದರೆ ಎಲ್ಲಾ ಸಮಯದಲ್ಲೂ ಇದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲೇ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಬಹುದು. ಕೆಲವರಿಗೆ ರೊಟ್ಟಿಯನ್ನು ತಯಾರಿಸುವುದು ತುಂಬಾ ಕಷ್ಟ. ಇನ್ನೂ ಕೆಲವರಿಗೆ ರೊಟ್ಟಿ ತಯಾರಿಸುವ ವಿಧಾನ ಕೇಳಿ ತಯಾರಿಸಲು ಹಿಂದೇಟು ಹಾಕುತ್ತಾರೆ. ಆದರೀಗ ನಾವು ಹೇಳುವ ಸುಲಭ ವಿಧಾನವನ್ನು ಅನುಸರಿಸಿದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಿ ಸವಿಯಬಹುದು. ಹಾಗಾದರೆ ತಡ ಮಾಡುವುದು ಬೇಡ ರೊಟ್ಟಿ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಪದಾರ್ಥ
* ಬಿಳಿ ಜೋಳದಿಂದ ನುಣ್ಣಗೆ ರುಬ್ಬಿದ ಹಿಟ್ಟು (1 ಕಪ್)
* ಉಪ್ಪು ಸ್ವಲ್ಪ (ಅಗತ್ಯವಿದ್ದರೆ ಮಾತ್ರ)
* ನೀರು
ರೊಟ್ಟಿ ತಯಾರಿಸುವ ವಿಧಾನ:-
* ಮೊದಲಿಗೆ ರೊಟ್ಟಿ ತಟ್ಟುವ ಮಣೆಯ ಮೇಲೆ ಹಿಟ್ಟು ಹಾಕಿ ಅದಕ್ಕ ಬಿಸಿ ನೀರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
* ಹಿಟ್ಟು ಚಪಾತಿ ಹದಕ್ಕೆ ಇದ್ದರೆ ತುಂಬಾ ಚೆನ್ನಾಗಿ ರೊಟ್ಟಿ ತಟ್ಟಬಹುದು ಅಥವಾ ಚಪಾತಿಯಂತೆ ಕೂಡ ತಯಾರಿಸಬಹುದು.
* ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಒಂದೊಂದೇ ಉಂಡೆಗಳನ್ನು ತೆಗೆದುಕೊಂಡು ಒಣ ಹಿಟ್ಟು ಹಾಕಿ ಮಣೆಯ ಮೇಲೆ ತಟ್ಟಿ. ರೊಟ್ಟಿ ತಟ್ಟುವಾಗ ಮಣಿಗೆ ಹಿಟ್ಟು ಹಿಡಿಯದಂತೆ ನೋಡಿಕೊಳ್ಳಬೇಕು.
* ನಿಮಗೆ ರೊಟ್ಟಿ ತಟ್ಟಲು ಸಾಧ್ಯವಾಗದೇ ಇದ್ದರೆ ಚಪಾತಿಯಂತೆ ಕೂಡ ಇದನ್ನು ತಯಾರಿಸಬಹುದು. ಆದರೆ ಇದನ್ನು ತೆಳುವಾಗಿ ತಟ್ಟಿ ಮಾಡಿದರೆ ತುಂಬಾ ಚೆನ್ನಾಗಿ ಬರುತ್ತದೆ.
*ಮೊದಲ ಬಾರಿ ತಯಾರಿಸುವವರಿಗೆ ರೊಟ್ಟಿ ತಟ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಬಿಡಬೇಡಿ. ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ನಿತ್ಯ ಹೀಗೆ ಮಾಡುವುದನ್ನು ಪ್ರಯತ್ನ ಮಾಡಿ. ಮೊದಲ ದಿನ ನಿಮಗಿದು ಕಷ್ಟವಾಗಬಹುದು. ಆದರೆ ಒಂದೆರೆಡು ದಿನದಲ್ಲಿ ಚಂದವಾಗಿ ನೀವು ರೊಟ್ಟಿಯನ್ನು ತಯಾರಿಸುವಿರಿ.
* ವೃತ್ತಾಕಾರದಲ್ಲಿ ರೊಟ್ಟಿಯನ್ನು ತಟ್ಟಿ ನಂತರ ಅದನ್ನು ತವೆಯ ಮೇಲೆ ಹಾಕಿ.
* ಒಂದು ಚಿಕ್ಕಬಟ್ಟೆಯನ್ನು ನೀರಿನಲ್ಲಿ ಅದ್ದಿ ಸ್ವಲ್ಪ ನೀರಿರುವಂತೆ ಹಿಂಡಿಕೊಂಡು ಅದನ್ನು ರೊಟ್ಟಿಯ ಮೇಲ್ಬದಿಗೆ ಹಚ್ಚಿ.
* ನಂತರ ಎರಡು ಬದಿ ರೊಟ್ಟಿಯನ್ನು ಬೇಯಿಸಿಕೊಂಡರೆ ಬಿಸಿ ಬಿಸಿ ಜೋಳದ ರೊಟ್ಟಿ ಸವಿಯಲು ಸಿದ್ಧ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications