Holi 2024: ನವವಿವಾಹಿತೆ ಅತ್ತೆಯೊಂದಿಗೆ ಹೋಳಿ ಆಚರಿಸಿದರೆ ತಾಯಿ ಮನೆಯಲ್ಲಿ ಆರ್ಥಿಕ ಸಂಕಷ್ಟ...
ಹೋಳಿ ವಿಶೇಷವಾದ ಹಬ್ಬ. ಯಾಕೆಂದರೆ ಹೋಳಿಯು ಕೇವಲ ಹಬ್ಬವಾಗಿರದೆ ಸಂಭ್ರಮ ಮತ್ತು ಬದಲಾವಣೆಗೆ ಹೆಸರಾಗಿದೆ. ಹೋಳಿ ಹಬ್ಬ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಮಹತ್ವದ್ದಾಗಿದೆ. ಈ ಹೋಳಿ ಹಬ್ಬದಂದು ನವ ವಧು ಕೆಲ ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ.
ಹೌದು... ನವವಿವಾಹಿತೆ ಮೊದಲ ಹೋಳಿಯನ್ನು ಅತ್ತೆಯ ಮನೆಯಲ್ಲಿ ಆಚರಿಸದೆ ತನ್ನ ತಾಯಿಯ ಮನೆಗೆ ಹೋಗುವ ಸಂಪ್ರದಾಯ ಇದೆ. ನವವಿವಾಹಿತೆ ಮದುವೆಯ ನಂತರ ಬರುವ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲೇ ಆಚರಿಸಬೇಕು. ಇದರ ಹಿಂದಿ ಕಾರಣವೇನು ಎಂದು ಈಗ ತಿಳಿಯೋಣ.

ಅತ್ತೆ ಮತ್ತು ಸೊಸೆ ಒಟ್ಟಿಗೆ ಹೋಳಿ ಆಡಬಾರದು
ಅತ್ತೆ ಮತ್ತು ಸೊಸೆ ಒಟ್ಟಿಗೆ ಹೋಲಿಕಾ ದಹನವನ್ನು ವೀಕ್ಷಿಸಿದರೆ, ಅವರ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ನವವಿವಾಹಿತೆ ಮೊದಲ ಹೋಳಿಯಂದು ಅತ್ತೆಯ ಮನೆಯಲ್ಲಿ ಉಳಿಯಬಾರದು ಎಂದು ಹೇಳಲಾಗುತ್ತದೆ. ಈ ಸಂಪ್ರದಾಯದ ಒಂದು ಅಂಶವೆಂದರೆ ಹೊಸ ಸೊಸೆಯು ಹೊಸ ಕುಟುಂಬ ಮತ್ತು ಜನರಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ವಿಶೇಷವಾಗಿ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸೊಸೆ ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸಬೇಕು.
ಮನೆಯಲ್ಲಿ ಹೋಳಿ ಆಚರಿಸುವುದರಿಂದ ಸಂಬಂಧಗಳು ಗಟ್ಟಿ
ಮೊದಲ ಹೋಳಿಯಂದು ಸೊಸೆ ತನ್ನ ತಾಯಿಯ ಮನೆಗೆ ಬಂದಾಗ, ಅವಳು ಮತ್ತೊಮ್ಮೆ ಕುಟುಂಬದೊಂದಿಗೆ ಬೆರೆಯುವ ಅವಕಾಶವನ್ನು ಪಡೆಯುತ್ತಾಳೆ ಎಂದು ನಂಬಲಾಗುತ್ತದೆ. ಅದೇ ಸಮಯಕ್ಕೆ ಅಳಿಯ ಕೂಡ ಹುಡುಗಿಯ ಮನೆಗೆ ಹೋಳಿ ಹಬ್ಬದ ಶುಭಾಶಯ ಕೋರಲು ಬರುತ್ತಾನೆ. ಹಿಂದೂ ಸಂಪ್ರದಾಯದಲ್ಲಿ ಅಳಿಯನಿಗೆ ಹೆಚ್ಚಿನ ಗೌರವವನ್ನು ನೀಡಲಾಗುತ್ತದೆ. ಅವರನ್ನು ವಿಶೇಷ ಅತಿಥಿಯಂತೆ ಪರಿಗಣಿಸಲಾಗುತ್ತದೆ. ಆದ್ದರಿಂದ ಹುಡುಗಿಯ ತಾಯಿಯ ಕುಟುಂಬವು ತಮ್ಮ ಅಳಿಯನನ್ನು ವಿಶೇಷವಾಗಿ ಸ್ವಾಗತಿಸುತ್ತದೆ. ಇದರಿಂದಾಗಿ ಕುಟುಂಬದಲ್ಲಿನ ವಾತಾವರಣವು ತುಂಬಾ ಆಹ್ಲಾದಕರವಾಗಿರುತ್ತದೆ. ಇದು ಪತಿ-ಪತ್ನಿಯರ ನಡುವೆ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ.
ಭಕ್ತ ಪ್ರಹ್ಲಾದ ಮತ್ತು ಹೋಲಿಕಾಗೆ ಸಂಬಂಧಿಸಿದ ಕಥೆ
ಹೋಲಿಕಾ ದಹನ ಕಥೆಯ ಪ್ರಕಾರ, ಹೋಲಿಕಾ ತನ್ನ ಮಡಿಲಲ್ಲಿ ಭಕ್ತ ಪ್ರಹ್ಲಾದನೊಂದಿಗೆ ಬೆಂಕಿಯಲ್ಲಿ ಕುಳಿತಾಗ, ಭಕ್ತ ಪ್ರಹ್ಲಾದನನ್ನು ರಕ್ಷಿಸಲಾಯಿತು. ಆಗ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಭಸ್ಮವಾದಳು. ಆದರೆ ಕೆಲವೇ ದಿನಗಳಲ್ಲಿ ಹೋಲಿಕಾ ಮದುವೆ ನಿಶ್ಚಯವಾಗಿರುತ್ತದೆ. ಈ ಕಾರಣಕ್ಕಾಗಿ, ಆಕೆಯ ಭಾವಿ ಅತ್ತೆ ಮತ್ತು ಪತಿ ಹೋಲಿಕಾಳನ್ನು ಭೇಟಿಯಾಗಲು ಆಕೆಯ ರಾಜ್ಯಕ್ಕೆ ಬರುತ್ತಾರೆ. ಆದರೆ ಹೋಲಿಕಾ ಸುಟ್ಟು ಬೂದಿಯಾಗಿದ್ದಾಳೆಂದು ತಿಳಿದಾಗ, ಅವರಿಗೆ ನಂಬಲಾಗಲಿಲ್ಲ. ಆಗ ಹೋಲಿಕಾಳ ಅತ್ತೆ ಈ ಸತ್ಯವನ್ನು ತಿಳಿದುಕೊಳ್ಳಲು ಹೋಳಿಕ ಸುಟ್ಟು ಬೂದಿಯಾದ ಸ್ಥಳಕ್ಕೆ ತಲುಪಿದಳು. ಅಲ್ಲಿಗೆ ಹೋದಾಗ ಹೋಲಿಕಾಳ ಅತ್ತೆಯು ಬೂದಿಯಲ್ಲಿದ್ದ ಹೋಲಿಕಾಳ ಆಭರಣವನ್ನು ಕಂಡು ಗಾಬರಿಗೊಂಡು ಪ್ರಜ್ಞಾಹೀನಳಾದಳು. ಈ ಆಘಾತಕ್ಕೆ ಹೋಲಿಕಾ ಅತ್ತೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತದೆ.
ಗರ್ಭಿಣಿ ಮಹಿಳೆ ತಾಯಿ ಮನೆಯಲ್ಲೇ ಹೋಳಿ ಆಚರಿಸಬೇಕು
ಹೊಸ ಸೊಸೆಯು ತನ್ನ ತಾಯಿಯ ಮನೆಯಲ್ಲಿ ಹೋಳಿ ಆಚರಿಸಬೇಕು. ಇದರಿಂದ ಮುಂದೆ ದಂಪತಿಗೆ ಹುಟ್ಟುವ ಮಕ್ಕಳು ತುಂಬಾ ಸುಂದರ, ಆರೋಗ್ಯ ಮತ್ತು ಅದೃಷ್ಟವಂತರಾಗಿರುತ್ತಾರೆಂದು ನಂಬಲಾಗುತ್ತದೆ. ಈ ಕಾರಣಕ್ಕಾಗಿ ಹೊಸ ಸೊಸೆ ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸುತ್ತಾಳೆ.
ಈ ಸಮಯದಲ್ಲಿ ಹೊಸ ಸೊಸೆ ಗರ್ಭಿಣಿಯಾಗಿದ್ದರೆ, ಅವಳು ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸಬೇಕು. ಯಾಕೆಮದರೆ ಹೋಳಿ ಸಮಯದಲ್ಲಿ ಮನೆಯಲ್ಲಿ ಹೆಚ್ಚು ಚಟುವಟಿಕೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿ ಮಹಿಳೆ ವಿಶ್ರಾಂತಿ ಪಡೆಯಲು ಅವಕಾಶವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿ ಗರ್ಭಿಣಿ ಮಹಿಳೆ ತನ್ನ ತಾಯಿಯ ಮನೆಯಲ್ಲಿ ಹೋಳಿ ಆಚರಿಸಿದರೆ, ಅವಳು ಚೆನ್ನಾಗಿ ವಿಶ್ರಾಂತಿ ಪಡೆಯಬಹುದು.
ತಾಯಿಯ ಮನೆಯ ಆರ್ಥಿಕ ಸ್ಥಿತಿಯಲ್ಲಿ ಬಲ
ಹೊಸ ಸೊಸೆಯ ಪಾದಗಳು ತುಂಬಾ ಮಂಗಳಕರವೆಂದು ನಂಬಲಾಗಿದೆ. ಅವರು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದಿರುತ್ತಾರೆ ಎನ್ನಲಾಗುತ್ತದೆ. ವಿಶೇಷವಾಗಿ ಸೊಸೆ ತನ್ನ ತಾಯಿಯ ಮನೆಗೆ ಹಿಂದಿರುಗಿದಾಗ, ಅವಳು ತನ್ನೊಂದಿಗೆ ಹೊಸ ಜೀವನದ ಅನೇಕ ಸಂತೋಷ ಮತ್ತು ಅದೃಷ್ಟವನ್ನು ತರುತ್ತಾಳೆ. ಈ ಕಾರಣದಿಂದಾಗಿ ನವವಿವಾಹಿತೆ ತನ್ನ ತಾಯಿಯ ಮನೆಗೆ ಅದೃಷ್ಟವನ್ನು ತರುತ್ತಾಳೆ. ಇದು ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಇದರಿಂದ ತಾಯಿಯ ಮನೆಯಲ್ಲಿ ಆಕೆಗೆ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications