ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಬೇಡಿ.. ಇಲ್ಲದಿದ್ದರೆ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುವಳು..
ಮನೆಯು ಆರ್ಥಿಕವಾಗಿ ಸಮೃದ್ಧವಾಗಿರಬೇಕು ಎನ್ನುವ ಆಸೆ ಯಾರಿಗೆ ತಾನೆ ಇರುವುದಿಲ್ಲ. ಆದರೆ ನಮ್ಮ ಜೀವನ ಚೆನ್ನಾಗಿರಬೇಕಾದರೆ ನಾವು ವಾಸಿಸುವ ಮನೆ ವಾಸ್ತು ನಿಯಮಗಳ ಪ್ರಕಾರ ಇರಬೇಕು ಮತ್ತು ನಮ್ಮ ಅಭ್ಯಾಸಗಳು ಸರಿಯಾಗಿರಬೇಕು. ಹೌದು... ನಮ್ಮ ಅಭ್ಯಾಸಗಳು ಸಹ ನಮ್ಮ ಜೀವನದ ಮೇಲೆ ಪ್ರಭಾವ ಬೀರಬಹುದು.
ಚಿಕ್ಕಂದಿನಿಂದಲೂ ನಮ್ಮ ಮನೆಯಲ್ಲಿ ಅಜ್ಜಿ, ತಾಯಂದಿರು ಸಂಜೆ ಉಗುರು ಕತ್ತರಿಸಬೇಡಿ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಇಂದಿನ ಪೀಳಿಗೆಯ ಅನೇಕ ಜನರು ಅದನ್ನು ಗೌರವಿಸುವುದಿಲ್ಲ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತಾರೆ. ನಮ್ಮ ಪೂರ್ವಜರು ಮಾಡಬಾರದು ಎಂದು ಹೇಳಿದ ಅನೇಕ ವಿಷಯಗಳನ್ನು ಈಗ ಅನೇಕರು ಅನುಸರಿಸುತ್ತಿದ್ದಾರೆ.

ವಿಶೇಷವಾಗಿ ರಾತ್ರಿಯಲ್ಲಿ ಇದನ್ನು ಮಾಡಬೇಡಿ ಎಂದು ಹೇಳಿದ್ದರೆ ಅದನ್ನು ಚಾಚೂ ತಪ್ಪದೆ ಈಗಲೂ ಬಹಳಷ್ಟು ಜನ ಅನುಸರಿಸುತ್ತಾರೆ. ಶಾಸ್ತ್ರಗಳ ಪ್ರಕಾರ, ಇಂಥಹ ಕೆಲ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ದುಷ್ಟ ಶಕ್ತಿಗಳು ಹೆಚ್ಚಾಗುತ್ತವೆ ಮತ್ತು ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ. ಹಾಗಾದರೆ ರಾತ್ರಿ ಸಮಯದಲ್ಲಿ ಏನು ಮಾಡಬಾರದು ಎಂದು ನೋಡೋಣ.
ಉಗುರು ಕತ್ತರಿಸುವುದು
ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ರಾತ್ರಿಯಲ್ಲಿ ಪುರುಷ ಅಥವಾ ಮಹಿಳೆ ಉಗುರುಗಳನ್ನು ಕತ್ತರಿಸಬಾರದು. ಹಾಗೆ ಕತ್ತರಿಸಿದರೆ ಮನೆಯಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮನೆಯ ಪಾವಿತ್ರ್ಯ ಕಳೆದು ಹೋಗುತ್ತದೆ. ಮುಖ್ಯವಾಗಿ ಮನೆಯಲ್ಲಿ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ. ಹಾಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.
ಸುಗಂಧ ದ್ರವ್ಯವಿಲ್ಲ
ವಾಸ್ತು ಪ್ರಕಾರ ರಾತ್ರಿಯಲ್ಲಿ ಪುರುಷರು ಅಥವಾ ಮಹಿಳೆಯರು ಸುಗಂಧ ದ್ರವ್ಯವನ್ನು (ಸೆಂಟ್) ಹಾಕಿಕೊಳ್ಳಬಾರದು. ಅಂತಹ ಸುಗಂಧ ದ್ರವ್ಯವನ್ನು ಹಾಕಿಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ದುಷ್ಟ ಶಕ್ತಿಗಳು ಒಬ್ಬರ ಮನಸ್ಸಿನ ಮೇಲೆ ಹೆಚ್ಚು ಪ್ರಾಬಲ್ಯವನ್ನು ಉಂಟುಮಾಡಬಹುದು. ಆದ್ದರಿಂದ ಇದನ್ನು ಮಾಡಬೇಡಿ.
ರಾತ್ರಿ ಸಾಲ ಪಡೆಯುವುದು
ಹಣದ ಅವಶ್ಯಕತೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ನೀವು ಹಣವನ್ನು ಎರವಲು ಪಡೆಯಲು ಬಯಸಿದರೆ, ರಾತ್ರಿಯಲ್ಲಿ ಅದನ್ನು ಮಾಡಬೇಡಿ. ಅದೇ ರೀತಿ ರಾತ್ರಿಯಲ್ಲಿ ಯಾರಿಗೂ ಸಾಲ ಕೊಡಬೇಡಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ನೆಲೆಸಿರುವ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುತ್ತಾಳೆ. ಹಾಗಾಗಿ ಈ ತಪ್ಪನ್ನೂ ಮಾಡಬೇಡಿ.
ತುಳಸಿ ಎಲೆಗಳನ್ನು ಕೀಳಬೇಡಿ
ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ತುಳಸಿ ಎಲೆಗಳು ಅಥವಾ ಮಾರಿಗೋಲ್ಡ್ ಎಲೆಗಳನ್ನು ಕೀಳಬಾರದು. ಹಾಗೆ ಕಿತ್ತುಕೊಂಡರೆ ಅದು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತದೆ ಮತ್ತು ಮನೆಯಲ್ಲಿ ಬಡತನವನ್ನು ತರುತ್ತದೆ. ಅಲ್ಲದೆ ಮನೆಯ ಸುಖ-ಶಾಂತಿ ಕಡಿಮೆಯಾಗಿ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.
ಪಾತ್ರೆಗಳನ್ನು ಖಾಲಿ ಬಿಡಬೇಡಿ
ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಆಹಾರದ ಸೇವಿಸಿದ ಪಾತ್ರೆಗಳನ್ನು ಸ್ವಚ್ಚಗೊಳಿಸದೆ ಇಡಬೇಡಿ. ವಾಸ್ತು ಪ್ರಕಾರ, ಅಂತಹ ಖಾಲಿ ಪಾತ್ರೆಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಇಟ್ಟುಕೊಂಡರೆ ಅನ್ನಪೂರ್ಣ ದೇವಿ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತಾನೆ. ಇದರ ಪರಿಣಾಮವಾಗಿ ಮನೆಯಲ್ಲಿ ಆಹಾರದ ಕೊರತೆ ಉಂಟಾಗುತ್ತದೆ ಮತ್ತು ಹಣದ ಸಮಸ್ಯೆ ಹೆಚ್ಚಾಗುತ್ತದೆ. ಅದೇ ರೀತಿ ರಾತ್ರಿ ಕೂದಲು ಹರಡಿ ಮಲಗುವುದು ಒಳ್ಳೆಯದಲ್ಲ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications