Halasina Kebab Recipe: ಬೆಳ್ಳುಳ್ಳಿ, ಈರುಳ್ಳಿ ಕಬಾಬ್ ಮಾಡಿ ತಿಂದ್ರಾ? ಈಗ ಹಲಸಿನ ಕಬಾಬ್ ಮಾಡೋಣ ಬನ್ನಿ
ವೆಜ್ ಪ್ರಿಯರಿಗೆ ನಾವು ಈಗಾಗಲೇ ಬೆಳ್ಳುಳ್ಳಿ ಹಾಗೂ ಈರುಳ್ಳಿ ಕಬಾಬ್ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದೇವೆ. ಅದನ್ನು ನೀವೆಲ್ಲಾ ಮನೆಯಲ್ಲಿ ಮಾಡಿ ಸವಿದಿರಬಹುದು. ಈಗ ನಾವು ಹಲಸಿನ ಕಬಾಬ್ ಮಾಡುವ ವಿಧಾನವನ್ನು ನಿಮಗಾಗಿ ತಂದಿದ್ದೇವೆ.
ಹೌದು.. ಸಾಮಾನ್ಯವಾಗಿ ನೀವು ಹಲಸಿನ ಚಿಪ್ಸ್ ತಿಂದಿರಬಹುದು, ಹಲಸಿನಿಂದ ಅನೇಕ ಖಾದ್ಯಗಳನ್ನು ತಯಾರಿಸಿರಬಹುದು. ಆದರೆ ಅನೇಕರಿಗೆ ಹಲಸಿನ ಕಬಾಬ್ ಮಾಡುವುದು ತಿಳಿದಿರಲಿಕ್ಕಿಲ್ಲ. ಹಾಗಾದರೆ ವೆಜ್ ಪ್ರಿಯರಿಗಾಗಿ ನಾವು ಇವತ್ತು ಹಲಸಿನ ಕಬಾಬ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವು ಟ್ರೈ ಮಾಡಿ, ಟೇಸ್ಟ್ ಮಾಡಿ ನಮ್ಮೊಂದಿಗೆ ನಿಮ್ಮ ಅನುಭವವನ್ನು ಕಾಮೆಮಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಹಾಗಾದರೆ ತಡ ಮಾಡುವುದು ಬೇಡ ಹಲಸಿನ ಕಬಾಬ್ ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು:
* ಹಲಸಿನ ಕಾಯಿ ಒಂದು
* ಕಾಶ್ಮೀರ ಚಿಲ್ಲಿ ಪೌಡರ್ ಎರಡು ಟೇಬಲ್ ಸ್ಪೂನ್
* ಗರಂ ಮಸಾಲ ಪುಡಿ ಅರ್ಧ ಟೇಬಲ್ ಸ್ಪೂನ್
* ಕರಿ ಮೆಣಸು ಪುಡಿ ಒಂದು ಟೇಬಲ್ ಸ್ಪೂನ್
*ಅರಿಶಿಣ ಕಾಲ್ ಟೇಬಲ್ ಸ್ಪೂನ್
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಒಂದು ಕಾಲ್ ಚಮಚ
* ಕಾರ್ನ್ ಫ್ಲೋರ್ ನಾಲ್ಕು ಟೇಬಲ್ ಸ್ಪೂನ್
*ಅಕ್ಕಿ ಹಿಟ್ಟು ಎರಡು ಟೇಬಲ್ ಸ್ಪೂನ್
*ಕರಿಬೇವು ಸೊಪ್ಪು
* ಎರಡು ಮೊಟ್ಟೆ ಬಿಳಿಭಾಗ
*ನಿಂಬೆ ಹಣ್ಣು ಒಂದು
* ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
* ಎಳೆಯದಾದ ಹಲಸಿನ ಕಾಯಿಯನ್ನು ತಂದು ಅದರ ಮೇಲಿನ ಸಿಪ್ಪೆ ಬಿಡಿಸಿಕೊಂಡು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳುವಾಗ ಇದನ್ನು ನೀರಿನಲ್ಲಿ ಹಾಕಿ ಇಲ್ಲವಾದಲ್ಲಿ ತುಂಡುಗಳು ಬೇರೆ ಬಣ್ಣಕ್ಕೆ ತಿರುಗುತ್ತವೆ.
* ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಹಲಸಿನ ತುಂಡುಗಳನ್ನು ಹಾಗೂ ಉಪ್ಪು ಜೊತೆಗೆ ಅರಿಶಿಣ ಹಾಕಿ ಕುದಿಸಿ.
* ಬಳಿಕ ಒಂದು ಪಾತ್ರೆಗೆ ಕಾಶ್ಮೀರ ಚಿಲ್ಲಿ ಪೌಡರ್, ಗರಂ ಮಸಾಲ ಪುಡಿ, ಕರಿ ಮೆಣಸು ಪುಡಿ, ಅರಿಶಿಣ, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಕರಿಬೇವು ಸೊಪ್ಪು, ಎರಡು ಮೊಟ್ಟೆ ಬಿಳಿಭಾಗ, ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಇದನ್ನು ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಂಟಾಗದಂತೆ ಕಲಿಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಇದನ್ನು ಕಲಿಸಿಕೊಳ್ಳಿ.
* ಬಳಿಕ ಇದಕ್ಕೆ ಕಕುದಿಸಿ ಆರಿಸಿದ ಹಲಸಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಟ್ಟುಬಿಡಿ.
* ಬಳಿಕ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಬಿಡಿ, ಇದನ್ನು ಡೀಪ್ ಫ್ರೈ ಮಾಡಬೇಕು.
*ಎಣ್ಣೆ ಕಾದ ನಂತರ ಒಂದೊಂದೇ ತುಂಡುಗಳನ್ನು ಹಾಕಿ ಡೀಫ್ ಫ್ರೈ ಮಾಡಿ.
* ಒಂದೆ ತಟ್ಟೆಗೆ ತೆಗೆದು ಸರ್ವ್ ಮಾಡಿ.
ಈಗ ಹಲಸಿನ ಸೀಸನ್ ಶುರುವಾಗುತ್ತಿರುವುದರಿಂದ ಹಲಸು ಕಾಯಿ ಸುಲಭವಾಗಿ ಸಿಗುತ್ತದೆ. ಮನೆಯಲ್ಲಿ ನೀವು ಕೂಡ ಟ್ರೈ ಮಾಡಿ. ನೀವೇನಾದ್ರೂ ಹಲಸಿನ ಹಣ್ಣಿನ ಪ್ರೀಯರಾಗಿದ್ದರೆ, ಇದನ್ನು ಇಷ್ಟಪಟ್ಟು ತಿನ್ನುತ್ತೀರಿ.
-
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
ಮಾರ್ನಿಂಗ್ ವಾಕ್ vs ಈವಿನಿಂಗ್ ವಾಕ್: ಯಾವುದು ಉತ್ತಮ? -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ












Click it and Unblock the Notifications