Lakshmi Devi Puja Tips: ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಈ ತಪ್ಪು ಮಾಡಬೇಡಿ
ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಸರಿಯಾಗಿ ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ನೆಲೆಸಿರುತ್ತದೆ. ಲಕ್ಷ್ಮಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಆಕೆ ಶಾಂತಿಯಿಂದ ಮನೆಯಲ್ಲಿ ನೆಲೆಸುತ್ತಾಳೆ. ಒಂದು ವೇಳೆ ಲಕ್ಷ್ಮಿ ದೇವಿ ಕೋಪಗೊಂಡರೆ ಕಾಳಿ ದೇವಿಯ ಅವತಾರವಾಗುತ್ತಾಳೆ.
ಹಾಗಾಗಿ ಲಕ್ಷ್ಮಿ ದೇವಿಗೆ ಕೋಪ ಬರುವಂತಹ ಕೆಲಸ ಮಾಡಿದರೆ ಲಕ್ಷ್ಮಿ ನಿಮ್ಮ ಮನೆ ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಇದೆ. ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿರುತ್ತವೆ. ಈ ತಪ್ಪುಗಳು ಲಕ್ಷ್ಮಿ ದೇವಿಗೆ ನೋವುಂಟು ಮಾಡಿರಬಹುದು. ಲಕ್ಷ್ಮಿ ದೇವಿಯು ನಿಮ್ಮ ಮನೆಯನ್ನು ಬಿಟ್ಟು ಹೋಗದಿರಲು ನೀವು ಸರಿಪಡಿಸಬೇಕಾದ ಕೆಲವು ತಪ್ಪುಗಳನ್ನು ಇಲ್ಲಿದೆ.

ಕೊಳಕು ಅಡುಗೆ ಮನೆ
ಹೆಚ್ಚಿನ ಜನರು ಮನೆಯಲ್ಲಿ ತಮ್ಮ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಅನೇಕ ಜನರು ರಾತ್ರಿಯಿಡೀ ಕೊಳಕು ಪಾತ್ರೆಯನ್ನು ಬಿಟ್ಟು ಬೆಳಿಗ್ಗೆ ತೊಳೆಯುತ್ತಾರೆ. ಈ ಕ್ರಮವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.
ಅಂತಹ ಪಾತ್ರೆಗಳನ್ನು ಸಂಗ್ರಹಿಸುವುದು ಮತ್ತು ಮನೆಯನ್ನು ಕೊಳಕು ಇಡುವುದು ಲಕ್ಷ್ಮಿ ದೇವಿಗೆ ಕೋಪವನ್ನುಂಟುಮಾಡುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯನ್ನು ಸದಾ ಸ್ವಚ್ಛವಾಗಿಡಲು ವಿಶೇಷ ಕಾಳಜಿ ವಹಿಸಬೇಕು.
ಮನೆಯ ಉತ್ತರ ಭಾಗದಲ್ಲಿ ಕಸ
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಭಗವಾನ್ ಕುಬೇರ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆಯ ಉತ್ತರ ಭಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಬಾರದು.
ಮನೆಯ ಈ ಭಾಗವು ಧನಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಇಲ್ಲಿ ನಿಷ್ಪ್ರಯೋಜಕ ವಸ್ತುಗಳನ್ನು ಇಟ್ಟರೆ ಲಕ್ಷ್ಮಿ ಮತ್ತು ಕುಬೇರ ಕೋಪಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಈ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಸಂಪತ್ತಿನ ಹರಿವಿಗೆ ಪ್ರಯೋಜನಕಾರಿ.
ಒಲೆಯ ಮೇಲೆ ಖಾಲಿ ಪಾತ್ರೆ
ಪೂಜಾ ಕೋಣೆಯ ನಂತರ, ಅಡುಗೆಮನೆಯು ಮನೆಯಲ್ಲಿ ಅತ್ಯಂತ ಮಂಗಳಕರ ಸ್ಥಳವಾಗಿದೆ. ಹೀಗಾಗಿ ಒಲೆಯ ಮೇಲೆ ಖಾಲಿ ಅಥವಾ ಕೊಳಕು ಪಾತ್ರೆಗಳನ್ನು ಇಡಬಾರದು. ಮನೆಯ ಒಲೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಮತ್ತು ಸಮಾಜದಲ್ಲಿ ಸಮೃದ್ಧಿ ಮತ್ತು ಗೌರವವನ್ನು ತರುತ್ತದೆ.
ಖಾಲಿ ಪಾತ್ರೆಗಳನ್ನು ಒಲೆಯಲ್ಲಿಟ್ಟರೆ ಬಡತನಕ್ಕೆ ದಾರಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಹಾಗೊಮದು ವೇಲೆ ಖಾಲಿ ಪಾತ್ರೆ ಅಥವ ಕೊಳಕು ಪಾತ್ರೆಗಳನ್ನು ಒಲೆಯ ಮೇಲೆ ಇಟ್ಟರೆ ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.

ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದು
ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದು ದುರಾದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಪೊರಕೆಯಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಮನೆ ಗುಡಿಸುವುದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಪೊರಕೆಯನ್ನು ಬಳಸುವುದರಿಂದ ಮನೆಯಿಂದ ಹೊರ ಹೋಗುತ್ತಾಳೆ.
ವಿಷ್ಣುವನ್ನು ಆರಾಧಿಸಿ
ಲಕ್ಷ್ಮಿ ದೇವಿಯನ್ನು ಪೂಜಿಸುವವರು ವಿಷ್ಣು ದೇವರನ್ನೂ ಪೂಜಿಸಬೇಕು. ಇಬ್ಬರನ್ನೂ ಲಕ್ಷ್ಮೀ ನಾರಾಯಣನ್ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮಾತ್ರ ಪೂಜಿಸುವುದರಿಂದ ದೇವಿಯ ಕೃಪೆಗೆ ಪಾತ್ರರಾಗುವುದಿಲ್ಲ. ಆದ್ದರಿಂದ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆಯಲು ಲಕ್ಷ್ಮಿ ಜೊತೆಗೆ ವಿಷ್ಣುವನ್ನು ಪೂಜಿಸಿ.
ಈ ಸಮಯದಲ್ಲಿ ಮಲಗಬೇಡಿ
ಪುರಾಣಗಳು ಮತ್ತು ಶಾಸ್ತ್ರಗಳು ಮಲಗುವ ಸಮಯವನ್ನು ಉಲ್ಲೇಖಿಸುತ್ತವೆ. ರಾತ್ರಿ ಮಲಗಿ ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳಿ. ಆದರೆ ಹೆಚ್ಚಿನವರು ಹಾಗಲ್ಲ. ಕೆಲವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗುತ್ತಾರೆ. ಅಂತಹ ಕ್ರಮವನ್ನು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ.
ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ ಎಂಬ ನಂಬಿಕೆ ಇದೆ. ಸಂಜೆ ಪೂಜೆಗೆ ಉತ್ತಮ ಸಮಯ. ಈ ಸಮಯದಲ್ಲಿ ಮಲಗುವುದು ಉತ್ತಮವಲ್ಲ.
ಸ್ವಾರ್ಥ ಬೇಡ
ಲಕ್ಷ್ಮಿ ದೇವಿಗೆ ಸ್ವಾರ್ಥ ಇಷ್ಟವಿಲ್ಲ. ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ನಿಮ್ಮ ಸಂಪತ್ತನ್ನು ನಿಮ್ಮ ಬಳಿ ಇಟ್ಟುಕೊಂಡರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಆದರೆ ನೀವು ಸ್ವಾರ್ಥವನ್ನು ತೊರೆದು ನಿಸ್ವಾರ್ಥರಾದಾಗ, ಲಕ್ಷ್ಮಿ ದೇವಿಯು ನಿಮಗೆ ಬಯಸದೆ ಸಂಪತ್ತನ್ನು ನೀಡುತ್ತಾಳೆ.
ದುರಾಸೆ ಬೇಡ
ದುರಾಸೆಯನ್ನು ತಪ್ಪಿಸಿ ಮತ್ತು ನಿಮ್ಮಲ್ಲಿರುವದರಲ್ಲಿ ತೃಪ್ತರಾಗಿರಿ. ಯಾವುದು ಬೇಕು ಮತ್ತು ಯಾವುದು ಬೇಡ ಎಂಬುದನ್ನು ಪ್ರತ್ಯೇಕಿಸಲು ಕಲಿಯಿರಿ. ನಿಮ್ಮಲ್ಲಿರುವದರಲ್ಲಿ ತೃಪ್ತಿಯಿಂದ ಬದುಕಿದರೆ, ಲಕ್ಷ್ಮಿ ದೇವಿಯು ನಿಮಗೆ ಸಮೃದ್ಧಿಯನ್ನು ನೀಡುತ್ತಾಳೆ.












Click it and Unblock the Notifications