Batani Sambar Recipe: ಬಟಾಣಿ ದಾಲ್... ತಿಂದಾಗ ಕಮಾಲ್!
ಮನೆಯಲ್ಲಿ ನಿತ್ಯ ಸಾಂಬಾರ್, ರಸಂ, ಕರಿ ಮಾಡಿ ಬೇಜಾರಾಗಿದಿಯಾ? ಹಾಗಾದರೆ ನೀವು ಇವತ್ತು ಸಂಥಿಂಗ್ ಸ್ಪೆಷಲ್ ಆಗಿರುವ ಸಾಂಬರ್ ಅನ್ನು ಟ್ರೈ ಮಾಡಿ. ಇದು ರುಚಿಯಾಗಿರುವುದು ಮಾತ್ರವಲ್ಲದೆ ಮಾಡಲು ಕೂಡ ತುಂಬಾ ಸುಲಭ. ಇದನ್ನ ಮಾಡಿದರೆ ರೈಸ್ ಹಾಗೂ ಚಪಾತಿ ಮಾತ್ರವಲ್ಲದೆ ಪೂರಿ, ರೋಟಿ ಜೊತೆಗೂ ನೆಂಚಿಕೊಂಡು ತಿನ್ನಬಹುದು.
ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಬಟಾಣಿ ಇದ್ದೇ ಇರುತ್ತದೆ. ಇದರಿಂದ ಇಂದು ನಾವು ಸಾಂಬರ್ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಬಟಾಣಿಯಿಂದ ಮನೆ ಮಂದಿಗೆಲ್ಲಾ ಇಷ್ಟವಾಗುವ ಸಾಂಬರ್ ಅನ್ನು ನೀವು ತಯಾರಿಸಬಹುದು. ಜೊತೆಗೆ ಕುಟುಂಬ ಸದಸ್ಯರ ಮೆಚ್ಚುಗೆಯನ್ನೂ ಪಡೆಯಬಹುದು.

ಹಾಗಾದರೆ ತಡ ಮಾಡುವುದು ಬೇಡ. ಬಟಾಣಿ ದಾಲ್ ಮನೆಯಲ್ಲಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ಟೈ ಮಾಡಿ ರುಚಿ ನೋಡಿ ನಿಮ್ಮ ಅನುಭವವನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.
ಬಟಾಣಿ ದಾಲ್ ತಯಾರಿಸಲು ಬೇಕಾದ ಪದಾರ್ಥಗಳು:
* ಹಸಿ ಬಟಾಣಿ ಒಂದು ಕಪ್
* ಟೊಮ್ಯಾಟೋ ಎರಡು
* ಹಸಿ ಮೆಣಸಿನಕಾಯಿ ಎರಡು
* ಶುಂಠಿ ಒಂದು ಇಂಚು
* ಎಣ್ಣೆ
* ಜೀರಿಗೆ ಒಂದು ಚಮಚ
* ಸಾಸಿವೆ ಒಂದು ಚಮಚ
* ದನಿಯಾ ಪುಡಿ ಒಂದು ಚಮಚ
* ಅರಿಶಿಣ ಪುಡಿ ಕಾಲ್ ಚಮಚ
* ಉಪ್ಪು
* ಖಾರದ ಪುಡಿ ಒಂದು ಚಮಚ
*ಆಲುಗಡ್ಡೆ ಎರಡು
*ಗರಂ ಮಸಾಲೆ ಪುಡಿ ಅರ್ಧ ಚಮಚ
*ಕೊಬ್ಬರಿ ಎಣ್ಣೆ ಎರಡು ಚಮಚ
*ಕರಿಬೇವಿನ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ:
* ಹಸಿ ಬಟಾಣಿಯನ್ನು ತರಿತರಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.
* ಬಳಿಕ ಮಿಕ್ಸಿ ಜಾರ್ಗೆ ಟೊಮ್ಯಾಟೋ, ಹಸಿ ಮೆಣಸಿನಕಾಯಿ, ಶುಂಠಿ ಹಾಕಿ ರುಬ್ಬಿಕೊಳ್ಳಿ.
* ಮೊದಲಿಗೆ ಒಂದು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ ಹಾಕಿ. ಚಟಪಟ ಹುರಿದು ಗಮಗಮ ಪರಿಮಳ ಬರುವವರೆಗೂ ಬಿಡಿ. ಬಳಿಕ ಇದಕ್ಕೆ ಚಿಟಿಕೆ ಇಂಗು ಹಾಕಬೇಕು.
* ನಂತರ ಮಿಕ್ಸಿಗೆ ಹಾಕಿಕೊಂಡ ಟೊಮ್ಯಾಟೋವನ್ನು ಇದಕ್ಕೆ ಹಾಕಿ ಕುದಿಯಲು ಬಿಡಿ.
* ಇದಕ್ಕೆ ದನಿಯಾ ಪುಡಿ, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಎಣ್ಣೆ ಮೇಲೆ ತೇಲಬೇಕು.
* ಬಳಿಕ ಮಿಕ್ಸಿ ಮಾಡಿಕೊಂಡ ಬಟಾಣಿ ಹಾಕಿಕೊಳ್ಳಬೇಕು. ಎರಡು ನಿಮಿಷ ಹುರಿದುಕೊಳ್ಳಬೇಕು.
* ಬಳಿಕ ಇದಕ್ಕೆ ಕುದಿಸಿ ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಆಲೂಗಟ್ಟೆಯನ್ನು ಹಾಕಿ.
* ಬಳಿಕ ಒಂದು ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ.
* ನಂತರ ಗರಂ ಮಸಾಲೆ ಪುಡಿ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಸಿಲ್ ಬರುವವರೆಗೂ ಬಿಡಿ.
* ವಿಸಿಲ್ ಬಂದ ಬಳಿಕ ತಕ್ಷಣ ಒಲೆ ಆಫ್ ಮಾಡಿ. ಹಬೆ ಹೋಗುವವರೆಗೂ ಬಿಡಿ.
* ಈಗ ಇದಕ್ಕೆ ಒಗ್ಗರಣೆ ಹಾಕೋಣ. ಒಂದು ಚಿಕ್ಕ ಒಗ್ಗರಣೆ ಪಾತ್ರೆ ಇಡಿ. ಅದರಲ್ಲಿ ಕೊಬ್ಬರಿ ಎಣ್ಣೆ ಎರಡು ಚಮಚ, ಜೀರಿಗೆ ಅರ್ಧ ಚಮಚ ಹಾಕಿ. ಕರಿಬೇವಿನ ಸೊಪ್ಪು ಹಾಕಿದರೆ ಒಗ್ಗರಣೆ ರೆಡಿ.
* ಬಳಿಕ ಇದನ್ನು ಬಟಾಣಿ ದಾಲ್ಗೆ ಹಾಕಿದರೆ ಹಾಹಾ... ಬಿಸಿ ಬಿಸಿ ಬಟಾಣಿ ದಾಲ್ ಸವಿಯಲು ಸಿದ್ಧ.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ












Click it and Unblock the Notifications