Avalakki Puliogare Recipe: ಬೆಳಿಗ್ಗೆಗೆ ತಿಂಡಿ ಏನ್ ಮಾಡ್ಬೇಕು ಅಂತ ಈಗಲೇ ಯೋಚನೆ ಮಾಡ್ತಾಯಿದಿರಾ? ಹೀಗೆ ಮಾಡಿ..
ಅದೆಷ್ಟೋ ಗೃಹಿಣಿಯರು ಬೆಳಗ್ಗೆ ತಿಂಡಿ ಏನು ಮಾಡೋದು ಅಂತ ರಾತ್ರಿಯಿಂದಲೇ ಯೋಚನೆ ಮಾಡಲು ಶುರು ಮಾಡಿರುತ್ತಾರೆ. ನೀವೇನಾದ್ರು ಹೀಗೆ ಯೋಚನೆ ಮಾಡ್ತಾಯಿದ್ದರೆ ನಾವು ನಿಮಗೆ ಒಂದು ಸುಲಭವಾಗಿ ತಯಾರಿಸಬಹುದಾದ ತಿಂಡಿಯನ್ನು ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿ ಟ್ರೈ ಮಾಡಿ.
ಅದುವೇ ಅವಲಕ್ಕಿ ಪುಳಿಯೊಗರೆ. ಸಾಮಾನ್ಯವಾಗಿ ನಾವು ಅನ್ನದಿಂದ ಪುಳಿಯೊಗರೆ ತಯಾರಿಸುತ್ತೇವೆ. ಆದರೆ ನಾವು ಈಗ ನಿಮಗೆ ಹೇಳಲು ಹೊರಟಿರುವ ರೆಸಿಪಿ ಅವಲಕ್ಕಿ ಪುಳಿಯೊಗರೆ ಪಾಕವಿಧಾನದ ಬಗ್ಗೆ. ಉತ್ತರ ಕರ್ನಾಟಕದ ಜನರಿಗೆ ಅವಲಕ್ಕಿ ಪುಳಿಯೊಗರೆ ಬಗ್ಗೆ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಹೀಗಾಗಿ ಬೆಳಗ್ಗೆ ಸುಲಭವಾಗಿ ಬಹುಬೇಗ ಯಾವ ತಿಂಡಿ ತಯಾರಿಸಬಹುದು ಎಂದು ಯೋಚನೆ ಮಾಡುವವರಿಗೆ ಅವಲಕ್ಕಿ ಪುಳಿಯೊಗರೆ ತುಂಬಾ ಸುಲಭ.

ಹಾಗಾದರೆ ತಡ ಮಾಡುವುದು ಬೇಡ ಅವಲಕ್ಕಿ ಪುಳಿಯೊಗರೆ ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನ ಒಮ್ಮೆ ಟ್ರೈ ಮಾಡಿ. ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ತಯಾರಿಸಲು ಬೇಕಾಗುವ ಪದಾರ್ಥಗಳು:-
* ಅವಲಕ್ಕಿ ಒಂದು ಕಪ್
* ಈರುಳ್ಳಿ 1
* ಟೆಮೊಟೊ 2
* ಹಸಿ ಮೆಣಸಿನಕಾಯಿ 5
* ಪುಳಿಯೊಗರೆ ಪೌಡರ್ ಸಣ್ಣ ಪಾಕೇಟ್
* ಶೆಂಗಾ ಬೀಜ ಸ್ವಲ್ಪ
* ಕಡಲೆಬೇಳೆ 1 ಟೀ ಸ್ಪೂನ್
* ಎಣ್ಣೆ
* ಕರಿಬೇವು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಸ್ವಲ್ಪ
*ಕೊತ್ತಂಬರಿ ಸ್ವಲ್ಪ
* ಕಾಯಿ ತುರಿ ಸ್ವಲ್ಪ

ತಯಾರಿಸುವ ವಿಧಾನ:-
* ಅವಲಕ್ಕಿಯನ್ನು ತೊಳೆದು ಒಂದು ಪಾತ್ರೆಯಲ್ಲಿ ಮುಚ್ಚಿಡಿ
* ಒಂದು ಪಾತ್ರೆಯಲ್ಲಿ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ.
* ಬಳಿಕ ಇದಕ್ಕೆ ಶೆಂಗಾ ಬೀಜ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿಯನ್ನು ಹಾಕಿ ಬಾಡಿಸಿ.
* ಬಳಿಕ ಇದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಬಾಡಿಸಿ.
* ಬಳಿಕ ಇದಕ್ಕೆ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಸ್ವಲ್ಪ ಕರಿಬೇವು ಹಾಕಿ ಚೆನ್ನಾಗಿ ಕಲಸಿ.
* ಎಣ್ಣೆ ತೇಲುವಾಗ ಪುಳಿಯೊಗರೆ ಪೌಡರ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
* ಬಳಿಕ ಇದಕ್ಕೆ ನೆನಸಿದ ಅವಲಕ್ಕಿ ಜೊತೆಗೆ ಸಣ್ಣಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಸ್ವಲ್ಪ ಕಾಯಿ ತುರಿ ಮೇಲೆ ಉದುರಿಸಿದರೆ ರುಚಿ ರುಚಿಯಾದ ಅವಲಕ್ಕಿ ಪುಳಿಯೊಗರೆ ಸವಿಯಲು ಸಿದ್ದ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications