Get Updates
Get notified of breaking news, exclusive insights, and must-see stories!

Leucas Benefits: ಹಲವಾರು ಔಷಧಿಯ ಗುಣಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿರುವ ತುಂಬೆ ಗಿಡ ತಂದು ನೆಡಿ..

ತುಂಬೆ ಗಿಡ.. ಹೆಚ್ಚಾಗಿ ನಗರ ಪ್ರದೇಶದಲ್ಲಿ ಕಾಣ ಸಿಗುವುದಿಲ್ಲ. ಆದರೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ತುಂಬೆ ಗಿಡ ಹಲವಾರು ಔಷಧಿಯ ಗುಣಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ತುಂಬೆ ಗಿಡ ಉತ್ತಮ ಗಿಡಮೂಲಿಕೆಯಾಗಿದ್ದರಿಂದ ಇದಕ್ಕೆ ಬೇಡಿಕೆ ಕೂಡ ಹೆಚ್ಚು.

ಮನೆಯ ಹಿತ್ತಲಿನಲ್ಲಿ ತನ್ನ ಪಾಡಿಗೆ ಬೆಳೆದು ಹೂ ಬಿಟ್ಟು ಬೀಜವಾಗಿ ಮತ್ತೆ ಗಿಡವಾಗುವ ಈ ತುಂಬೆ ಗಿಡ ಅಜೀರ್ಣ, ಕೆಮ್ಮು, ನೆಗಡಿ, ಕಣ್ಣಿನ ಕಾಯಿಲೆಗಳು, ತಲೆನೋವು, ಜ್ವರ ಹೀಗೆ ನಾನಾ ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಆಯುರ್ವೇದದಲ್ಲಿ ದ್ರೋಣಪುಷ್ಪಿದ ಗುಣಲಕ್ಷಣಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ.

 Astonishing Health Benefits Of Leucas Aspera (Thumbe Gida) In Kannada

ದ್ರೋಣಪುಷ್ಪ ಎಂದರೇನು?

ತುಂಬೆ ಗಿಡದ ಹೂವುಗಳು ಕಪ್‌ನಂತೆ ಇರುವುದರಿಂದ ಇದನ್ನು ದ್ರೋಣಪುಷ್ಪಿ ಎಂದು ಕರೆಯಲಾಗುತ್ತದೆ. ದ್ರೋಣಪುಷ್ಪದ ಸಸ್ಯ 60-90 ಸೆಂ.ಮೀ ಎತ್ತರದಲ್ಲಿ ಬೆಳೆಯುತ್ತದೆ. ಈ ಸಸ್ಯ ನೇರವಾಗಿ ಅಥವಾ ಕೆಲವೊಮ್ಮೆ ಹರಡಿಕೊಂಡು ಬೆಳೆಯುತ್ತದೆ. ಇದರ ಕಾಂಡ ಮತ್ತು ಅದರ ಕೊಂಬೆಗಳು ಚತುರ್ಭುಜವನ್ನು ಹೊಂದಿರುತ್ತವೆ. ಇದರ ಎಲೆಗಳು ನೇರವಾಗಿರುತ್ತವೆ. 3.8-7.5 ಸೆಂ.ಮೀ ಉದ್ದ ಬೆಳೆಯುತ್ತವೆ. ಇದರ ಎಲೆಗಳು ವಾಸನೆಯನ್ನು ಹೊಂದಿರುತ್ತವೆ ಮತ್ತು ರುಚಿಯಲ್ಲಿ ಕಹಿಯಾಗಿರುತ್ತವೆ.

ಇದರ ಹೂವುಗಳು ಚಿಕ್ಕದಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ. ಇದರ ಹಣ್ಣುಗಳು 3 ಮಿಮೀ ಉದ್ದ, ಕಂದು ಬಣ್ಣದಿಂದ ಮೃದುವಾಗಿರುತ್ತದೆ. ಇದರ ಹೂವುಗಳು ಮತ್ತು ಹಣ್ಣುಗಳು ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಬಿಡುತ್ತವೆ.

 Astonishing Health Benefits Of Leucas Aspera (Thumbe Gida) In Kannada

ತುಂಬೆ ಗಿಡ ಆರೋಗ್ಯಕರ ಪ್ರಯೋಜನಗಳು ಮತ್ತು ಉಪಯೋಗಗಳು:-

1. ಕಣ್ಣಿನ ಕಾಯಿಲೆಯಲ್ಲಿ ತುಂಬೆ ಗಿಡದ ಪ್ರಯೋಜನಗಳು

ಸಾಮಾನ್ಯವಾಗಿ ಹೆಚ್ಚು ಟಿವಿ, ಸಿಸ್ಟಮ್, ಮೊಬೈಲ್ ನೋಡುವುದರಿಂದ ಕಣ್ಣುಗಳು ದೃಷ್ಟಿ ಕಳೆದುಕೊಳ್ಳುತ್ತವೆ. ಜೊತೆಗೆ ಕಣ್ಣಿಗೆ ಸಂಬಂಧಿಸಿ ನಾನಾ ಕಾಯಿಲೆಗಳು ಬರುತ್ತವೆ. ಆದರೆ ಕಣ್ಣಿನ ಸಮಸ್ಯೆಗಳಿಗೆ ತುಂಬೆ ಗಿಡ ರಾಮಬಾಣದಂತೆ ಕೆಲಸ ಮಾಡುತ್ತದೆ. ವೈದ್ಯರ ಸಲಹೆ ಮೇರೆಗೆ ಮನೆಮದ್ದಾಗಿ ಇದನ್ನು ಬಳಕೆ ಮಾಡಬಹುದು.

ಅಕ್ಕಿ ತೊಳೆದ ನೀರಿನಿಂದ ದ್ರೋಣಪುಷ್ಪವನ್ನು ಒಣಗಿಡಿ ಪುಡಿಮಾಡಿ. ಮೂಗಿನ ಮೂಲಕ 1-2 ಹನಿಗಳ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಕಣ್ಣಿನ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಕಾಜಲ್‌ನಂತೆ ಇದನ್ನು ಹಚ್ಚುವುದರಿಂದ ಕಣ್ಣಿನ ಯಾವುದೇ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಇದಕ್ಕಿದೆ.

 Astonishing Health Benefits Of Leucas Aspera (Thumbe Gida) In Kannada

2. ಕೆಮ್ಮಿನಿಂದ ಮುಕ್ತಿ ನೀಡುವ ತುಂಬೆ ಗಿಡ

ಕೆಮ್ಮಿಗೆ ತುಂಬೆ ಗಿಡ ಉತ್ತಮ ಮನೆಮದ್ದಾಗಿ ಕೆಲಸ ಮಾಡುತ್ತದೆ. ಔಷಧಿಯ ಗುಣಗಳನ್ನು ಹೊಂದಿರುವ ಗಿಡದ ಎಲೆಗಳಿಂದ 5 ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಕ್ರಮೇ ಕೆಮ್ಮು ಕಡಿಮೆಯಾಗುತ್ತದೆ. ಜೊತೆಗೆ ಜ್ವರ, ನೆಗಡಿಯಿಂದ ನಿಮ್ಮ ನ್ನು ಕಾಪಾಡುತ್ತದೆ.

3. ಜೀರ್ಣ ಕ್ರಿಯೆಯನ್ನು ಹೆಚ್ಚಿಸುವ ತುಂಬೆ ಗಿಡ

ಅಜೀರ್ಣಕ್ಕೆ ಚಿಕಿತ್ಸೆಯಾಗಿ ನೀವು ದ್ರೋಣಪುಷ್ಪವನ್ನು ಸೇವಿಸಬಹುದು. ದ್ರೋಣಪುಷ್ಪಿ ಎಲೆಗಳ ಸೊಪ್ಪಿನಂತೆ ತಯಾರಿಸಿ ತಿನ್ನಿ. ಇದು ಅಜೀರ್ಣದಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಮಾಡುತ್ತದೆ.

4. ರಕ್ತಹೀನತೆ-ಕಾಮಾಲೆಗೆ ಚಿಕಿತ್ಸೆ ನೀಡುವ ತುಂಬೆ

ಮಸ್ಕರಾದಂತೆ ಹಲವು ಕಾಯಿಲೆಗಳು ಬಹುಬೇಗ ನಮ್ಮನ್ನು ಆವರಿಸಿಬಿಡುತ್ತದೆ. ಇತಂಹ ಕಾಯಿಲೆಗಳಲ್ಲಿ ರಕ್ತಹೀನತೆ ಮತ್ತು ಕಾಮಲೆ ಕೂಡ ಸೇರಿವೆ. ಈ ಕಾಯಿಲೆಗಳಿಗೆ ತುಂಬೆ ಗಿಡಿ ತುಂಬಾ ಪ್ರಯೋಜನಕಾರಿಯಾಗಿದೆ. 5 ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಅದನ್ನು ಬಳಸಬೇಕು. ದ್ರೋಣಪುಷ್ಪದ 5-10 ಮಿಲಿ ರಸದಲ್ಲಿ 500 ಮಿಗ್ರಾಂ ಕರಿಮೆಣಸಿನ ಪುಡಿ ಮತ್ತು ಕಲ್ಲು ಉಪ್ಪನ್ನು ಮಿಶ್ರಣ ಮಾಡಿ. ದಿನಕ್ಕೆ ಮೂರು ಬಾರಿ ಇದನ್ನು ಸೇವಿಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆಗೆ ಪ್ರಯೋಜನಕಾರಿಯಾಗಿದೆ.

5. ಲಿವರ್‌ಗೆ ತುಂಬಾ ಒಳ್ಳೆಯದು

ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಲಿವರ್ ಅಥವಾ ಯಕೃತ್ತು ಸಮಸ್ಯೆಗಳು ಕೂಡ ಒಂದಾಗಿವೆ. ಈ ಸಮಸ್ಯೆಗಳು ಮಾನವ ಜೀವವನ್ನೇ ಬಲಿ ಪಡೆಯಬಹುದು. ಆದರೆ ವೈದ್ಯರ ಸಲಹೆ ಮೇರೆಗೆ ತುಂಬೆ ಗಿಡವನ್ನು ನಿತ್ಯ ಸೇವನೆಯಿಂದಾಗ ನಿಮ್ಮ ಲಿವರ್ ಕಾಪಾಡಿಕೊಳ್ಳಬಹುದು. ದ್ರೋಣಪುಷ್ಪಿ ಬೇರಿನ ಪುಡಿ ಯಕೃತ್ತು ಅಸ್ವಸ್ಥತೆಯನ್ನು ದೂರ ಮಾಡುತ್ತದೆ.

ತುಂಬೆ ಗಿಡದ ಬೇರಿನ ಪುಡಿಯನ್ನು ತೆಗೆದುಕೊಳ್ಳಿ, ಅದರಲ್ಲಿ ಒಂದು ಭಾಗ ಉದ್ದದ ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. 1-2 ಗ್ರಾಂ ಪ್ರಮಾಣದಲ್ಲಿ ಸೇವಿಸುವುದು ಯಕೃತ್ತು ಅಸ್ವಸ್ಥತೆಗಳನ್ನು ದೂರ ಮಾಡಬಹುದು.

6. ತುಂಬೆ ಗಿಡದೊಂದಿಗೆ ಸಂಧಿವಾತದ ಚಿಕಿತ್ಸೆ

ತುಂಬೆ ಗಿಡದ ಕಷಾಯವನ್ನು ಕುಡಿದರೆ ಸಂಧಿವಾತ ವಾಸಿಯಾಗುತ್ತದೆ. ತುಂಬೆ ಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳುಮೆಣಸಿನ ಪುಡಿಯನ್ನು 10-30 ಮಿ.ಲೀ ಕಷಾಯದಲ್ಲಿ ಬೆರೆಸಿ ಕುಡಿದರೆ ಸಂಧಿವಾತ ದೂರವಾಗುತ್ತದೆ.

7. ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧ

ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧಿಯಾಗಿದೆ. ಎಲೆಗಳ ರಸ ಅಥವಾ ಪೇಸ್ಟ್ ಅನ್ನು ಚರ್ಮಕ್ಕೆ ಅನ್ವಯಿಸಿದರೆ ತಕ್ಷಣ ತುರಿಕೆ ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದು ಗಾಯಗಳನ್ನೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

8.ನಿದ್ರಾಹೀನತೆಗೆ ತುಂಬೆ ಗಿಡದ ಪ್ರಯೋಜನಗಳು

ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ತುಂಬೆ ಗಿಡಿ ಉತ್ತಮ ಔಷಧಿಯಾಘಿದೆ. ಅನೇಕ ಆಯುರ್ವೇದಾಚಾರ್ಯರು ಇದನ್ನು ಬಳಸುತ್ತಾರೆ. ದ್ರೋಣಪುಷ್ಪಿ ಬೀಜಗಳ 10-20 ಮಿಲಿ ಕಷಾಯವನ್ನು ತೆಗೆದುಕೊಂಡರೆ ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.

9. ನರಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಪ್ರಯೋಜನಕಾರಿ

ನರಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದಕ್ಕೆ ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

10.ಮಲೇರಿಯಾ ಜ್ವರದ ವಿರುದ್ಧ ಹೋರಾಡಲು ತುಂಬೆ

ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಈ ಸಂದರ್ಭದಲ್ಲಿ ತುಂಬೆ ಗಿಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳ 5 ಮಿಲಿ ರಸದಲ್ಲಿ 1 ಗ್ರಾಂ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ಸೇವಿಸುವುದು ಮಲೇರಿಯಾ ಜ್ವರಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ತುಂಬೆ ಗಿಡದಿಂದಾಗುವ ದುಷ್ಪರಿಣಾಮಗಳು:

2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತುಂಬೆ ಗಿಡ ಸಿಎನ್‌ಎಸ್ ಖಿನ್ನತೆಗೆ ಕಾರಣವಾಗಬಹುದು ಅಥವಾ ಮೆದುಳಿನ ಚಟುವಟಿಕೆಯನ್ನು ನಿಧಾನಗೊಳಿಸಬಹುದು ಎಂದು ಕಂಡುಹಿಡಿದಿದೆ. ಇದು ವಾಕರಿಕೆ, ವಾಂತಿ, ಕಡಿಮೆ ಹೃದಯ ಬಡಿತ ಮತ್ತು ಉಸಿರಾಟ, ಗೊಂದಲ ಮತ್ತು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು.

ನಾನಾ ಔಷಧಿಯ ಗುಣಗಳನ್ನು ಹೋಮದಿರುವ ತುಂಬೆ ಗಿಡದ ಸೇವನೆಯಿಂದ ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಅನುಭವಿಸಿದರೆ, ಅದರ ಸೇವನೆಯನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ ಇದನ್ನು ಆಯುರ್ವೇದ ವೈದ್ಯರ ಸಮಹೆಯ ಮೇರೆಗೆ ತೆಗೆದುಕೊಳ್ಳುವುದು ಸರಿಯಾದ ಮಾರ್ಗವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+