ಕಾಲ್ತುಳಿತದಿಂದ ತಪ್ಪಿಸಿಕೊಳ್ಳುವುದು ಹೇಗೆ, ಇಷ್ಟು ಮಾಡಿ ಸಾಕು!
Bengaluru Stampede: ಬೆಂಗಳೂರಿನ ಇತಿಹಾಸದಲ್ಲೇ ಸಂಭವಿಸದ ದುರಂತವೊಂದು ಸಂಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದಾರೆ. ಹೆಚ್ಚು ಜನ ಸೇರಿದ ಸಂದರ್ಭಗಳಲ್ಲಿ ಗೊಂದಲಗಳು ಸೃಷ್ಟಿಯಾದಾಗ ಹಾಗೂ ಅನಿಯಂತ್ರಿತವಾಗಿ ಜನ ಸೇರುವಾಗೆಲ್ಲವೂ ಕಾಲ್ತುಳಿತ ಸಂಭವಿಸಿದ ಉದಾಹರಣೆಗಳು ಇವೆ. ಹಾಗಾದರೆ ಕಾಲ್ತುಳಿತದಿಂದ ತಪ್ಪಿಸಿಕೊಳ್ಳುವುದು ಹೇಗೆ, ಕಾಲ್ತುಳಿತ ಸಂಭವಿಸುವಾಗ ನಾವು ಏನು ಮಾಡಬೇಕು ಎನ್ನುವ ಡೀಟೆಲ್ಸ್ ಇಲ್ಲಿದೆ.
11 ಜನ ಅಮಾಯಕರು ಬೆಂಗಳೂರಿನ ಕರಾಳ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. 11 ಜನ ಸಾವನ್ನಪ್ಪಿದ್ದ ಬೆನ್ನಲ್ಲೇ ಕಾಲ್ತುಳಿತದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೆಚ್ಚು ಜನಸಂದಣೆ ಸೇರುವ ಜಾಗಗಳಲ್ಲಿ ಜನ ಹೇಗೆ ನಡೆದುಕೊಳ್ಳಬೇಕು ಹಾಗೂ ಜನರ ವರ್ತನೆ ಹೇಗಿರಬೇಕು ಎನ್ನುವುದು ಸಹ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದ ಮೇಲೆ ಜನ ಎರಡು ದಿನ ಯಾವ ರೀತಿ ಸಂಭ್ರಮಾಚರಣೆ ಮಾಡಿದರು & ನಡೆದುಕೊಂಡಿದ್ದಾರೆ ಎನ್ನುವುದನ್ನು ಜಗತ್ತೇ ನೋಡಿದೆ. ಕೆಲವರಿಂದ ಇಡೀ ಕರ್ನಾಟಕಕ್ಕೆ ಈ ವಿಷಯದಲ್ಲಿ ಮುಜುಗರವೂ ಆಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಶಿಕ್ಷಣದಲ್ಲಿ ಇಲ್ಲದೆ ಇರುವುದು ಅಥವಾ ಶಿಕ್ಷಣದಲ್ಲಿ ತಿಳಿಸದೆ ಇರುವುದು ಸಹ ಇದಕ್ಕೆ ಕಾರಣ. ಸರ್ಕಾರ ಹಾಗೂ ಕೆಲವರ ತಪ್ಪಿನಿಂದ ಭೀಕರ ಕಾಲ್ತುಳಿತ ಸಂಭವಿಸಿತ್ತು.

ಇನ್ನು ಈ ರೀತಿಯ ಕಾಲ್ತುಳಿತದ ಪರಿಸ್ಥಿತಿಯಲ್ಲಿ ಕೆಲವೊಂದು ಸರಳಸೂತ್ರಗಳನ್ನು ಅನುಸರಿಸಿದರೆ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬಹುದು.
* ತಪ್ಪಿಸಿಕೊಳ್ಳುವ ಮಾರ್ಗ ಹುಡುಕಿ: ಕಾಲ್ತುಳಿತ ಆಗುತ್ತಿದೆ ಅಥವಾ ಕಾಲ್ತುಳಿತ ಸಂಭವಿಸಬಹುದು ಎನ್ನುವ ಸಂದರ್ಭ ಎದುರಾದರೆ ಕೂಡಲೇ ಅಲ್ಲಿಂದ ಹೊರಗೆ ಬರಲು ಸಾಧ್ಯವೇ ಅಂತ ನೋಡುವುದು ಮೊದಲ ಆಯ್ಕೆ. ಹೌದು ಇದು ತುಸು ವಿಚಿತ್ರವೆನಿಸಿದರೂ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬೇಕಾದರೆ ಇದೊಂದು ಉತ್ತಮ ಆಯ್ಕೆ. ಕಾಲ್ತುಳಿತ ಸಂಭವಿಸುತ್ತಿರುವ ಜಾಗದಿಂದ ಪಕ್ಕದ ಕಾಲುದಾರಿ, ದ್ವಾರ ಅಥವಾ ಜನಸಂದಣಿಯಿಂದ ಹೊರಬರಲು ಸಾಧ್ಯವಿರುವ ಜಾಗಗಳನ್ನು ಹುಡುಕಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ರೀತಿ ಹೊರ ಬರುವಾಗ ಕಾಲ್ತುಳಿತಕ್ಕೆ ಅಥವಾ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿ.
* ಭದ್ರವಾಗಿ ನಿಲ್ಲಲು ಪ್ರಯತ್ನಿಸಿ: ಕಾಲ್ತುಳಿತದಂತಹ ದುರಂತ ಸಂಭವಿಸುವಾಗ ಭದ್ರವಾಗಿ ನಿಲ್ಲುವುದಕ್ಕೆ ಪ್ರಯತ್ನಿಸಿ. ಈ ರೀತಿ ಒಬ್ಬರೇ ಮಾಡಿದರೆ ಖಂಡಿತವಾಗಿಯೂ ಕಾಲ್ತುಳಿತ ತಪ್ಪಿಸಲು ಸಾಧ್ಯವಿಲ್ಲ. ಎಲ್ಲರೂ ಈ ರೀತಿ ಮಾಡುವಂತೆ ಹೇಳಬೇಕು ಭದ್ರವಾಗಿ ಅಥವಾ ಒಂದೇ ಜಾಗದಲ್ಲಿ ನಿಲ್ಲಿ ಎಂದು ಕಿರುಚಿದರೂ ಅಡ್ಡಿ ಇಲ್ಲ. ಈ ರೀತಿ ಭದ್ರವಾಗಿ ನಿಲ್ಲುವುದರಿಂದ ನೀವು ಕಾಲ್ತುಳಿತ ತಪ್ಪಿಸಬಹುದು. ನೀವು ಈ ರೀತಿಯ ಗುಂಪಿನಲ್ಲಿ ಬಿದ್ದರೆ ಎದ್ದೇಳುವುದು ತುಂಬಾ ಕಷ್ಟ, ನೀವು ತುಳಿತಕ್ಕೆ ಒಳಗಾಗುವ ಅಪಾಯವೇ ಹೆಚ್ಚು. ನೇರವಾಗಿ ನಿಲ್ಲಲು ಗೋಡೆ ಅಥವಾ ಬೀಳದಂತೆ ನಿಲ್ಲಲು ಸಾಧ್ಯವಿರುವ ಯಾವುದಾದರೂ ಸಾಧನವನ್ನು ಬಳಸಿ. ಉದಾ: ಕಂಬಿಗಳು, ಗೇಟ್ ಅಥವಾ ಯಾವುದಾದರೂ ಭದ್ರವಾದ ವಸ್ತುಗಳು.
ಬಾಕ್ಸರ್ ರೀತಿ ನಿಂತುಕೊಳ್ಳಿ: ಕಾಲ್ತುಳಿತದಂತಹ ಸಂದರ್ಭದಲ್ಲಿ ಬಾಕ್ಸರ್ ರೀತಿ ನಿಂತುಕೊಳ್ಳಿ. ಈ ರೀತಿಯ ಸಂದರ್ಭದಲ್ಲಿ ಹೆಚ್ಚು ಸಾವುಗಳು ಸಂಭವಿಸುವುದು ಎದೆಯ ಭಾಗಕ್ಕೆ ಹಾಗೂ ಕಿಡ್ನಿ ಸೇರಿದಂತೆ ಸೂಕ್ಷ್ಮ ಅಂಗಾಂಗಗಳಿಗೆ ಹಾನಿಯಾದಾಗ. ಹೀಗಾಗಿ, ಹೃದಯ ಹಾಗೂ ಕಿಡ್ನಿಯ ಭಾಗ, ಲಿವರ್ ಸೇರಿದಂತೆ ದೇಹದ ಪ್ರಮುಖ ಭಾಗಗಳನ್ನು ರಕ್ಷಿಸಿಕೊಳ್ಳುವ ಮಾದರಿಯಲ್ಲಿ ನಿಲ್ಲಿ.
ಕಾಲ್ತುಳಿತದ ಸಂದರ್ಭದಲ್ಲಿ ಎದೆಯ ಭಾಗಕ್ಕೆ ಹಾನಿಯಾದರೆ ಉಸಿರುಗಟ್ಟುವಿಕೆ ಹಾಗೂ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹೆಚ್ಚು ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ.
ಭಯ ಬೀಳಬೇಡಿ: ಮುಖ್ಯವಾಗಿ ಕಾಲ್ತುಳಿತ ಅಥವಾ ಯಾವುದೇ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಮೊದಲು ಗಾಬರಿಯಾಗಬೇಡಿ ಶಾಂತವಾಗಿರಿ. ಭಯಗೊಂಡರೆ ನೀವು ಮುಂದೆ ಏನು ಮಾಡಬೇಕು ಎನ್ನುವುದು ತೋಚುವುದಿಲ್ಲ. ನಿಮ್ಮ ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ. ಜನರ ಗುಂಪನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳುವ ಪ್ರಯತ್ನ ಮಾಡಬೇಡಿ ಇದರಿಂದ ನೀವು ಕಾಲ್ತುಳಿತಕ್ಕೆ ಸಿಲುಕುವ ಅಥವಾ ಗಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದರ ಬದಲಾಗಿ ಜನರೊಂದಿಗೆ ಆ ಸ್ಥಳದಿಂದ ಹೊರ ಬರುವ ಉಪಾಯಗಳನ್ನು ನೋಡಿ.
How to survive a stampede. pic.twitter.com/KANNG9IZ9M
— Learn Something (@cooltechtipz) June 6, 2025
ಜನ ಸಂದಣೆಯಿಂದ ದೂರವಿರಿ: ಇನ್ನು ಅಂತಿಮವಾಗಿ ಹಾಗೂ ಮುಖ್ಯವಾಗಿ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬೇಕಾದರೆ ಜನಸಂದಣೆ ಇರುವ ಜಾಗದಿಂದ ದೂರವಿರಿ. ಜನ ಹೆಚ್ಚು ಸೇರುವ ಜಾಗಗಳಿಗೆ ಹೋಗದೆ ಸುರಕ್ಷಿತವಾಗಿರಿ. ಈ ಸಂದರ್ಭದಲ್ಲಿ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಿ. ಇತರರಿಗೂ ಅಪಾಯದ ಮುನ್ಸೂಚನೆ ಕೊಡಿ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications