ಆದಿಚುಂಚನಗಿರಿಯಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ
ಬೆಂಗಳೂರು, ಮೇ 31 : ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಆಗಮ ಮಹಾವಿದ್ಯಾಲಯದಲ್ಲಿ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. 10/6/2020ರಂದು ಸಂದರ್ಶನ ನಡೆಯಲಿದೆ.
Recommended Video
ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯದಲ್ಲಿ ವಿವಿಧ ವಿಷಯಗಳ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಈ ಕುರಿತು ಪ್ರಕಟಣೆ ಹೊರಿಡಿಸಿದೆ.
ಸಹಾಯಕ ಪ್ರಾಧ್ಯಾಪಕರು (ಅಲಂಕಾರ ಶಾಸ್ತ್ರ) 2, ಸಹಾಯಕ ಪ್ರಾಧ್ಯಾಪಕರು (ಅದ್ವೈತವೇದಾಂತ ಶಾಸ್ತ್ರ) 1, ಸಹಾಯಕ ಪ್ರಾಧ್ಯಪಕರು (ಶೈವಾಗಮ) 1, ಸಹಾಯಕ ಪ್ರಾಧ್ಯಾಪಕರು (ಕೃಷ್ಣಯರ್ಜುವೇದ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸಹ ಶಿಕ್ಷಕರು 12, ಆಂಗ್ಲ 2, ಕನ್ನಡ 2, ಗಣಿತ 1, ಇತಿಹಾಸ 1, ಸಂಗೀತ ಹಾಡುಗಾರಿಕೆ 1, ತಬಲಾ 1, ಹಾರ್ಮೋನಿಯಂ 1 ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು 10/6/2020ರಂದು ಬೆಳಗ್ಗೆ 9.30ರಿಂದ ನೇರ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂದರ್ಶನ ನಡೆಯುವ ಸ್ಥಳ ಶ್ರೀ ಕ್ಷೇತ್ರ ಆದಿಚುಂಚನಗಿರಿ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9449259233, 9886958585, 944812441 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.











Click it and Unblock the Notifications