Bonus: ₹70 ಕೋಟಿ ಬೋನಸ್ ಕೊಟ್ಟ ಕಂಪನಿ ಉದ್ಯೋಗಿಗಳಿಗೆ ಹಾಕಿದ್ದು ಒಂದೇ ಷರತ್ತು!
ಉದ್ಯೋಗಿಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಲು ಕಂಪನಿಯು ಬೋನಸ್ ಕೊಟ್ಟು ಧನ್ಯವಾದ ಹೇಳುತ್ತದೆ. ಇದು ಉದ್ಯೋಗಿಗಳಿಗೆ ಕೆಲಸ ಮಾಡಲು ಮತ್ತಷ್ಟು ಉತ್ತೇಜನ ಕೊಡುತ್ತದೆ. ಬೋನಸ್ ಕೊಡಲು ಹಲವು ಮಾನದಂಡಗಳಿರುತ್ತವೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಭರ್ಜರಿ ಆಫರ್ ಕೊಟ್ಟಿದೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚೀನಾದ ಕ್ರೇನ್ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಷಾಂತ್ಯದ ಬೋನಸ್ ಆಗಿ $11 ಮಿಲಿಯನ್ ಅಂದರೆ ಸುಮಾರು 70 ಕೋಟಿ ರೂಪಾಯಿ ನೀಡಿದೆ. ಆದರೆ ಬೋನಸ್ ಕೊಡಲು ಒಂದು ಷರತ್ತು ವಿಧಿಸಿದೆ. ಅಷ್ಟೊಂದು ದುಡ್ಡು ಮುಂದಿಟ್ಟು ನಿಮಗೆ ಎಣಿಸಲು ಆಗುವಷ್ಟನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದೆ.

ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ಲಿಮಿಟೆಡ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಭರ್ಜರಿ ಆಫರ್ ಸಿಕ್ಕಿದೆ. ₹70 ಕೋಟಿ ರೂಪಾಯಿ ಹಣವನ್ನು ಮೇಜಿನ ಮೇಲೆ ಇಟ್ಟಿದ್ದು, ಉದ್ಯೋಗಿಗಳು ತಮ್ಮ ವರ್ಷಾಂತ್ಯದ ಬೋನಸ್ ಅನ್ನು ಪಡೆಯಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. 15 ನಿಮಿಷಗಳಲ್ಲಿ ಉದ್ಯೋಗಿಗಳು ಎಣಿಸಿಕೊಳ್ಳುವಷ್ಟು ಹಣವನ್ನು ಅವರಿಗೆ ಬೋನಸ್ ಆಗಿ ನೀಡಲಾಗಿದೆ.
ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕಗಳಾದ ಡೌಯಿನ್ ಮತ್ತು ವೀಬೋದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಳಿಕ ಜಗತ್ತಿನ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಹಂಚಿಕೊಳ್ಳಲಾಗಿದೆ. ದೊಡ್ಡ ಮೇಜಿನ ಮೇಲೆ ಹಣದ ರಾಶಿಯನ್ನು ಹರಡಲಾಗಿದ್ದು ಉದ್ಯೋಗಿಗಳು ಸಾಧ್ಯವಾದಷ್ಟು ಹಣವನ್ನು ಎಣಿಸಿಕೊಳ್ಳುವುದನ್ನು ನೋಡಬಹುದು.
ಒಬ್ಬ ಉದ್ಯೋಗಿ 15 ನಿಮಿಷಗಳಲ್ಲಿ 100,000 ಯುವಾನ್ಗಳನ್ನು (ಭಾರತೀಯ ಕರೆನ್ಸಿಯಲ್ಲಿ 12.07 ಲಕ್ಷ ರೂಪಾಯಿ) ಎಣಿಸಿಕೊಳ್ಳುವ ಮೂಲಕ ಭರ್ಜರಿ ಬೋನಸ್ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೆನಾನ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವರ್ಷಾಂತ್ಯದ ಬೋನಸ್ ಆಗಿ ನೀಡುತ್ತಿದೆ. ನೌಕರರು ತಾವು ಎಣಿಸಲು ಸಾಧ್ಯವಾಗುವಷ್ಟು ಹಣವನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಆಫರ್ ಕೊಟ್ಟಿದೆ ಎಂದು ವಿಡಿಯೋ ಹಂಚಿಕೊಂಡಿರುವ ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ಗಳು ಬಂದಿವೆ. ಹಲವರು ಇದನ್ನು ನೋಡಿ ಆಘಾತಗೊಂಡರೆ ಇನ್ನೂ ಕೆಲವು ಈ ರೀತಿ ಬೋನಸ್ ಕೊಡುವುದನ್ನು ಟೀಕಿಸಿದರು. ಇನ್ನೂ ಕೆಲವರು ಕಂಪನಿಯ ಔದಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆನಾನ್ ಮೈನಿಂಗ್ ಕ್ರೇನ್ ಕಂಪನಿಯು ಉದ್ಯೋಗಿಗಳ ವಿಚಾರದಲ್ಲಿ ಔದಾರ್ಯತೆ ತೋರಿರುವುದು ಇದೇ ಮೊದಲನೇನಲ್ಲ. 2023ರಲ್ಲಿ ಕೂಡ ಉದ್ಯೋಗಳಿಗೆ ವಾರ್ಷಿಕ ಭೋಜನದ ಸಮಯದಲ್ಲಿ ಹಣವನ್ನು ವಿತರಣೆ ಮಾಡುವ ಮೂಲಕ ಗಮನ ಸೆಳೆದಿತ್ತು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications