Google Lay Offs: ಗೂಗಲ್ ಕಂಪನಿಯಿಂದ ಉದ್ಯೋಗಿಗಳ ವಜಾ
ಕ್ಯಾಲಿಫೋರ್ನಿಯಾ, ಏಪ್ರಿಲ್ 18: ತಂತ್ರಜ್ಞಾನ ವಲಯದ ಉದ್ಯಮದಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರಿದಿದೆ. ಈ ಮಾತಿಗೆ ಪೂರಕವಾಗಿ 'ಆಲ್ಫಾಬೆಟ್' ಒಡೆತನದ 'ಗೂಗಲ್' ಅನಿರ್ದಿಷ್ಟ ಸಂಖ್ಯೆಯಲ್ಲಿ ತನ್ನ ನೌಕರರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ ಎಂದು ಕಂಪನಿಯ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.
ಇಡೀ ಕಂಪನಿಯಾದ್ಯಂತ ನೌಕರರನ್ನು ವಜಾಗೊಳಿಸುತ್ತಿಲ್ಲ. ನಿರ್ಧಿಷ್ಟ ವಿಭಾಗದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆದರೆ ಎಷ್ಟು ಮಂದಿ ಉದ್ಯೋಗಿಗಳು, ಯಾವೆಲ್ಲ ವಿಭಾಗದಿಂದ ಕೆಲಸ ಕಳೆದುಕೊಳ್ಳಲಿದ್ದರೆ ಎಂಬ ಮಾಹಿತಿಯನ್ನು ವಕ್ತಾರರು ತಿಳಿಸಿಲ್ಲ ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿದೆ.

ಈ ದೇಶಗಳಲ್ಲಿ ಉದ್ಯೋಗ ವಜಾ
ಈ ಗೂಗಲ್ನ ವಜಾ ಪ್ರಕ್ರಿಯೆಯ ಪ್ರಭಾವವು ಶೇಕಡಾವಾರು ಭಾರತ, ಚಿಕಾಗೋ, ಅಟ್ಲಾಂಟಾ ಮತ್ತು ಡಬ್ಲಿನ್ ಸೇರಿದಂತೆ ಹೂಡಿಕೆ ಮಾಡುತ್ತಿರುವ ಕೇಂದ್ರಗಳ ಮೇಲೆ ಉಂಟಾಗಲಿದೆ. ಈಗಾಗಲೇ ಅನೇಕ ಐಟಿ ಕಂಪನಿಗಳು, ಇವಿ ಆಟೋಮೊಬೈಲ್ ವಲಯದಲ್ಲಿ ಉದ್ಯೋಗಿಗಳ ವಜಾ ಘೋಷಣೆ ಮಾಡಿದೆ.
ಈ ವರ್ಷ ಗೂಗಲ್ ಕಂಪನಿಗಳು ಆರ್ಥಿಕ ಸದೃಢತೆಗಾಗಿ ತನ್ನ ವಲಯದ ಉದ್ಯೋಗಿಗಳ ಕಡಿತದ ನಿರ್ಧಾರ ಮಾಡಿದೆ. 2023 ರ ದ್ವಿತೀಯಾರ್ಧದಿಂದ 2024ರ ಅಂತ್ಯದವರೆಗೆ ನೌಕರರ ತಂಡಗಳು ಹೆಚ್ಚು ಪರಿಣಾಮಕಾರಿಯಾಗಲು, ಉತ್ತಮ ಕಾರ್ಯ ನಿರ್ವಹಣೆಗೆ ಬದಲಾವಣೆ ಮಾಡಲು ಮುಂದಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಗೂಗಲ್ ವಜಾ ಪರಿಣಾಮ ಯಾರ ಮೇಲೆ
ವರದಿಯ ಪ್ರಕಾರ, ಗೂಗಲ್ ರಿಯಲ್ ಎಸ್ಟೇಟ್ ಮತ್ತು ಹಣಕಾಸು ಇಲಾಖೆಗಳಲ್ಲಿನ ವಿವಿಧ ತಂಡಗಳಲ್ಲಿರುವ ಉದ್ಯೋಗಿಗಳು ಮೇಲೆ ಪರಿಣಾಮ ಬೀರಲಿದೆ. ಈ ಹಣಕಾಸು ವಿಭಾಗದಲ್ಲಿ ಗೂಗಲ್ ಖಜಾನೆ, ವ್ಯಾಪಾರ ಸೇವೆಗಳು ಮತ್ತು ಆದಾಯ ನಗದು ಕಾರ್ಯಾಚರಣೆಯ ತಂಡಗಳು ಸಹ ಈ ಪ್ರಕ್ರಿಯೆಯಲ್ಲಿ ಸೇರಿಕೊಂಡಿದೆ.

ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಬೆಂಗಳೂರು, ಮೆಕ್ಸಿಕೋ ಸಿಟಿ ಮತ್ತು ಡಬ್ಲಿನ್ಗೆ ವಿಸ್ತರಿಸುವ ಬೆಳವಣಿಗೆಯನ್ನು ಪುನರ್ರಚನೆಯು ಒಳಗೊಂಡಿದೆ ಎಂದು ಗೂಗಲ್ನ ಹಣಕಾಸು ಮುಖ್ಯಸ್ಥ ರೂತ್ ಪೊರಾಟ್ ಸಿಬ್ಬಂದಿಗೆ ಇಮೇಲ್ ಕಳುಹಿಸಿದ್ದಾರೆ.
ಮೊದಲೇ ಉದ್ಯೋಗಿಗಳ ವಜಾ ನಿರೀಕ್ಷೆ
ಕಂಪನಿಯು ಹೂಡಿಕೆ ಹೆಚ್ಚಿಸಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆಯ ಕೊಡುಗೆಗಳನ್ನು ನಿರ್ಮಿಸಲು ಗೂಗಲ್ ತನ್ನ ಎಂಜಿನಿಯರಿಂಗ್, ಹಾರ್ಡ್ವೇರ್ ಮತ್ತು ಸಹಾಯಕ ತಂಡಗಳ ಸದಸ್ಯರನ್ನು ಕೆಲಸದಿಂದ ಕೈ ಬಿಟ್ಟಿತು. ಈ ಪ್ರಕ್ರಿಯೆಯು ಕಳೆದ ಜನವರಿಯಲ್ಲಿ ನಡೆದಿದ್ದು, ಈ ವೇಳೆ ನೂರಾರು ಕೆಲಸಗಾರರು ಉದ್ಯೋಗ ಕಳೆದುಕೊಂಡರು.
ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರು ಈ ಉದ್ಯೋಗ ವಜಾ ಕುರಿತು ಈ ಹಿಂದೆಯೆ ಒಮ್ಮೆ ಉದ್ಯೋಗಿಗಳಿಗೆ ತಿಳಿಸಿದ್ದರು. ಕಂಪನಿಯಲ್ಲಿ ಉದ್ಯೋಗ ವಜಾ ನಿರೀಕ್ಷಿಸಿ ಎಂದು ತಿಳಿಸಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications