Bosch Layoffs: ಬರೋಬ್ಬರಿ 7000 ಉದ್ಯೋಗಿಗಳ ವಜಾ...
ನವದೆಹಲಿ, ನವೆಂಬರ್ 05: ಗೃಹ ಉಪಯೋಗಿ ಉಪಕರಣ ಒದಗಿಸುವ ಪ್ರತಿಷ್ಠಿತ ಬಾಷ್ ಕಂಪನಿಯು (Bosch Layoffs) ತನ್ನ ಸಾವಿರಾರು ಉದ್ಯೋಗಿಗಳಿಗೆ ಆಘಾತ ನೀಡಿದೆ. ಹೌದು, ಸಾವಿರಾರು ಉದ್ಯೋಗಿಗಳನ್ನು ಕಡಿತಗೊಳಿಸಲು ಈ ಕಂಪನಿಯು ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ. ಉದ್ಯೋಗ ಕಡಿತ ಬಗ್ಗೆ ಬಾಷ್ ಘೋಷಣೆ ಇದೇ ಮೊದಲೇನಲ್ಲ ಎಂದು ವರದಿ ಆಗಿದೆ.
ಹೌದು, Bosch ಪ್ರಪಂಚದಾದ್ಯಂತ ನೌಕರರನ್ನು ಕೆಲಸದಿಂದ ತೆಗೆಯು ಬಗ್ಗೆ, ಉದ್ಯೋಗ ಕಡಿತದ ಯೋಚನೆ ಬಗ್ಗೆ ಘೋಷಿಸುತ್ತಲೇ ಇದೆ. ಇದೀಗ ಜರ್ಮನಿ ಪ್ಲಾಂಟ್ ವಿಭಾಗಕ್ಕೆ ಸಂಬಂಧಿಸಿದಂತೆ ಬೃಹತ್ ಉದ್ಯೋಗ ವಜಾ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಾಷ್ ಜರ್ಮನಿ ಪ್ಲಾಂಟ್ನ 7,000 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿಯು ಪ್ಲಾನ್ ಮಾಡಿಕೊಂಡಿದೆ. ಈ ಕುರಿತು ವರದಿ ಮಾಡದಂತೆ ಕಂಪನಿಯ ಸಿಇಒ ಸ್ಟೇಫನ್ ಹಾರ್ತಂಗ್ ಅವರು ತಿಳಿಸಿದ್ದಾರೆ. ಬಾಷ್ ಕಂಪನಿಯ ನಿರ್ಧಾರವು ಭರ್ತಿ 7,000 ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ.
ಬೃಹತ್ ಉದ್ಯೋಗ ಕಡಿತಕ್ಕೆ ಕಾರಣವೇನು?
ಪ್ರಸಕ್ತ ವರ್ಷದಲ್ಲಿ 2024 ಬಾಷ್ ಕಂಪನಿಯು ಆರ್ಥಿಕ ಗುರಿಗಳನ್ನು ಸಾಧಿಸಿಲ್ಲ. ಇದರಿಂದ ಕಂಪನಿ ಆದಾಯ ಗಳಿಕೆಯು ಇಳಿಕೆ ಮುಖವಾಗಿದೆ. 2023 ರಲ್ಲಿ ಕಂಪನಿಯು ಸುಮಾರು 98 ಬಿಲಿಯನ್ ಯುಎಸ್ ಡಾಲರ್ ಆದಾಯ ಸಂಗಹಿಸುವಲ್ಲಿ ಯಶಸ್ವಿಯಾಗಿತ್ತು.
ಬಾಷ್ ಉತ್ಪನ್ನ ಮಾರಾಟದ ಈ ವರ್ಷದ ಆದಾಯವು ಕಳೆದ ವರ್ಷ 5 ಪ್ರತಿಶತಕ್ಕೆ ಹೋಲಿಸಿದರೆ 4 ಶೇಕಡಾ ಅಧಿಕ ಗುರಿ ಹೊಂದಲಾಗಿತ್ತು. ಆದರೆ ಅದನ್ನು ಸಾಧಿಸಲಾಗಿಲ್ಲ. 2026ರ ವೇಳೆಗೆ ಆದಾಯ ಹೆಚ್ಚಳದಲ್ಲಿ ಶೇಕಡಾ 7 ಗುರಿ ಇಟ್ಟುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಬದಲಾವಣೆ, ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕಾರಣ ಎದುರಾಗಿದೆ ಎಂದು ಸ್ವತಃ ಸಿಇಓ ಸ್ಟೇಫನ್ ಹಾರ್ತಂಗ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಒಂದು ಕಡೆ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಬಾಷ್ ಕಂಪನಿಯು ಐರಿಶ್ ಕಂಪನಿ ಜಾನ್ಸನ್ ಕಂಟ್ರೋಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಚನೆ ನಡೆಸಿದೆ ಅಂತಲೂ ಹೇಳಲಾಗುತ್ತಿದೆ. ಇದು ಕಂಪನಿಯ ಐತಿಹಾಸಿಕ ಸ್ವಾಧೀನ ಎಂದು ಬಣ್ಣಿಸಲಾಗಿದೆ. ಕಂಪನಿ ಆದಾಯ ಗಳಿಕೆ ಇಳಿಕೆ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಿಗಳ ಕಡಿತಕ್ಕೆ ಬಾಷ್ ನಿರ್ಧರಿಸುವ ಸಂಗತಿ ತಿಳಿದಿದೆ. ಆದರೆ ಯಾವಾಗ ಈ ನಿರ್ಧಾರದಂತೆ ವಜಾಪ್ರಕ್ರಿಯೆ ನಡೆಯಲಿದೆ, ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications