Datta Jayanti 2022 : ದತ್ತಾತ್ರೇಯ ಜಯಂತಿ ಮಹತ್ವ, ಜನ್ಮ ಕಥೆ, ಪೂಜಾ ವಿಧಿ
ದೇಶದ ಹಲವು ಭಾಗಗಳಲ್ಲಿ ತ್ರಿದೇವ ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸಂಯೋಜಿತ ರೂಪವೆಂದು ಪರಿಗಣಿಸಲ್ಪಟ್ಟ ಭಗವಾನ್ ದತ್ತಾತ್ರೇಯ ಜಯಂತಿಯನ್ನು ಡಿಸೆಂಬರ್ 8 ರಂದು ಆಚರಿಸಲಾಗುತ್ತದೆ. ದತ್ತಾತ್ರೇಯ ಜಯಂತಿಯನ್ನು ಅತ್ಯಂತ ಮಹತ್ವದ ದಿನ ಎಂದು ಪರಿಣಗಿಸಲಾಗುತ್ತದೆ. ಈ ದಿನ ದತ್ತಾತ್ರೇಯನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದರಿಂದ ಭಕ್ತನ ಸಂಕಷ್ಟಗಳು ದೂರವಾಗಿ ಆತ ಪ್ರಗತಿಯ ಹಾದಿಯಲ್ಲಿ ಸಾಗುತ್ತಾನೆ ಎಂದು ನಂಬಲಾಗುತ್ತದೆ.
ಮಾತ್ರವಲ್ಲದೆ ದತ್ತಾತ್ರೇಯನನ್ನು ಪೂಜಿಸುವುದರಿಂದ ಮನುಷ್ಯ ತನ್ನ ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ. ಅವನು ಬಯಸಿದ ಎಲ್ಲವನ್ನೂ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಕೆಲವು ಸ್ಥಳಗಳಲ್ಲಿ ಅವನನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಅವತಾರವೆಂದು ಪೂಜಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಭಕ್ತರು ದತ್ತಾತ್ರೇಯನಿಗಿದ್ದಾರೆ. ಸತಿ ಅನುಸೂಯೆಯ ಗರ್ಭದಿಂದ ಈ ದಿನ ಭಗವಾನ್ ದತ್ತಾತ್ರೇಯ ಜನಿಸಿದನೆಂದು ನಂಬಲಾಗಿದೆ.
ಶುಭ ಮುಹೂರ್ತ
2022 ಡಿಸೆಂಬರ್ 7 ರಂದು ಬುಧವಾರ ಬೆಳಗ್ಗೆ 08:01 ರಿಂದ ಪೂರ್ಣಿಮಾ ತಿಥಿ ಆರಂಭವಾಗಿ 2022 ಡಿಸೆಂಬರ್ 8 ರಂದು ಗುರುವಾರ ಬೆಳಗ್ಗೆ 09:37 ರವರೆಗೆ ಪೂರ್ಣಿಮಾ ತಿಥಿ ಮುಕ್ತಾಯಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ದತ್ತಾತ್ರೇಯರಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಮಹಾರಾಷ್ಟ್ರದಲ್ಲಿ ಅವರನ್ನು ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಗವಾನ್ ದತ್ತಾತ್ರೇಯರಿಗೆ ಮೂರು ತಲೆಗಳು ಮತ್ತು ಆರು ತೋಳುಗಳಿವೆ.
ದತ್ರಾತ್ರೇಯ ಜನ್ಮದ ಕಥೆ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಒಮ್ಮೆ ಮಾತಾ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ತಮ್ಮ ವಾಸ್ತವತೆಯ ಬಗ್ಗೆ ಬಹಳ ಹೆಮ್ಮೆಪಟ್ಟರು. ಅವರ ಅಹಂಕಾರಕ್ಕೆ ಪೆಟ್ಟು ನೀಡಲು ನಾರದರು ಒಂದು ದಿನ ತ್ರಿದೇವತೆಗಳ ಬಳಿ ಬಂದು ನಿಮ್ಮ ರೂಪ ಮತ್ತು ಗುಣಗಳು ಋಷಿ ಅತ್ರಿರವರ ಪತ್ನಿ ಅನಸೂಯಾ ಅವರ ಮುಂದೆ ಏನೂ ಇಲ್ಲ ಎಂದು ಹೇಳಿದರು. ಆಗ ಕೋಪಗೊಂಡ ತ್ರಿದೇವತೆಗಳು ತ್ರಿಮೂರ್ತಿಗಳಿಗೆ ಅತ್ರಿ ಮಹರ್ಷಿಯ ಪತ್ನಿ ಅನಸೂಯಾಳ ಬಳಿ ಹೋಗಿ ಆಕೆಯ ಗುಣಗಳನ್ನು, ಪತಿ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಒತ್ತಾಯಿಸುತ್ತಾರೆ. ತಮ್ಮ ಹೆಂಡತಿಯರ ಒತ್ತಾಯಕ್ಕೆ ಒಪ್ಪಿಕೊಂಡ ಶಿವ, ವಿಷ್ಣು ಮತ್ತು ಬ್ರಹ್ಮರು ಸಾಧು ವೇಷ ಧರಿಸಿ ಭಿಕ್ಷೆ ಬೇಡಲು ಸತಿ ಅನಸೂಯಾರ ಆಶ್ರಮಕ್ಕೆ ಹೋದರು. ಆ ಸಮಯದಲ್ಲಿ ಅತ್ರಿ ಮಹರ್ಷಿಗಳು ಆಶ್ರಮದಲ್ಲಿ ಇರುವುದಿಲ್ಲ.
ಶಿವ,
ವಿಷ್ಣು
ಮತ್ತು
ಬ್ರಹ್ಮರು
ಸತಿ
ಅನುಸೂಯಾಳ
ಬಳಿ
ಭಿಕ್ಷೆ
ಕೇಳಿದರು.
ಆಗ
ಸತಿ
ಅನಸೂಯಾ
ತನ್ನ
ಬಳಿ
ಇದ್ದ
ಧಾನ್ಯಗಳನ್ನು
ಭಿಕ್ಷೆ
ನೀಡಲು
ಹೊರಟಾಗ
ಅದನ್ನು
ತ್ರಿಮೂರ್ತಿಗಳು
ತಿರಸ್ಕರಿಸುತ್ತಾರೆ.
ಅನಸೂಯಾಳನ್ನು
ಕುರಿತು
ನಮಗೆ
ಎದೆಹಾಲನ್ನೇ
ಭಿಕ್ಷೆಯಾಗಿ
ನೀಡಬೇಕೆಂದು
ಹೇಳುತ್ತಾರೆ.
ಇದನ್ನು
ಕೇಳಿ
ಸತಿ
ಅನುಸೂಯಾ
ಗಾಬರಿಯಾದರು,
ಆದರೆ
ಸಾಧುಗಳನ್ನು
ಅವಮಾನಿಸಲಾಗುವುದಿಲ್ಲ
ಎಂಬ
ಭಯದಿಂದ
ಅವಳು
ತನ್ನ
ಗಂಡನನ್ನು
ನೆನಪಿಸಿಕೊಳ್ಳುವ
ಮೂಲಕ
ತನ್ನ
ಸತಿ
ಧರ್ಮದ
ಪ್ರಮಾಣವಚನ
ಸ್ವೀಕರಿಸಿದಳು.
ನನ್ನ
ಸತಿ
ಧರ್ಮ
ನಿಜವಾಗಿದ್ದರೆ,
ಮೂವರೂ
6
ತಿಂಗಳ
ವಯಸ್ಸಿನ
ಶಿಶುಗಳಾಗುತ್ತಾರೆ
ಎಂದು
ಅವಳು
ಬೇಡಿಕೊಂಡರು.
ಅನಸೂಯಾ
ಅಂದುಕೊಂಡಂತೆ
ಮೂವರು
ದೇವರುಗಳು
ಆರು
ತಿಂಗಳ
ಶಿಶುಗಳಾದರು
ಮತ್ತು
ಸತಿ
ಅನಸೂಯಾ
ಅವರನ್ನು
ತಾಯಿಯಂತೆ
ಎದೆಹಾಲನ್ನು
ನೀಡುತ್ತಾಳೆ.
ಗಂಡಂದಿರು
ಹಿಂತಿರುಗದಿದ್ದಾಗ,
ತ್ರಿದೇವತೆಗಳು
ಚಿಂತೆ
ಮಾಡಲು
ಪ್ರಾರಂಭಿಸಿದರು.
ಆಗ
ನಾರದರು
ಬಂದು
ಇಡೀ
ವಿಷಯವನ್ನು
ಹೇಳಿದರು.
ನಂತರ
ಮೂವರು
ದೇವತೆಗಳು
ಸತಿ
ಅನಸೂಯಾ
ಅವರ
ಬಳಿ
ಹೋಗಿ
ಕ್ಷಮೆಯಾಚಿಸಿ
ತಮ್ಮ
ಗಂಡನನ್ನು
ಮರಳಿ
ನೀಡುವಂತೆ
ಕೇಳಿಕೊಂಡರು.
ಅನಸೂಯಾ
ತ್ರಿಮೂರ್ತಿಗಳನ್ನು
ಮತ್ತೆ
ಅವರ
ಸ್ವರೂಪಕ್ಕೆ
ಮರಳಿ
ತಂದಳು.
ಅನಸೂಯಾ
ಸತಿ
ಧರ್ಮದಿಂದ
ಸಂತಸಗೊಂಡ
ತ್ರಿದೇವರು,
ನಾವು
ಮೂವರು
ನಿಮ್ಮ
ಭಾಗವಾಗಿ
ಜನಿಸುತ್ತೇವೆ
ಎಂಬ
ವರವನ್ನು
ನೀಡಿದರು.
ನಂತರ
ಬ್ರಹ್ಮ
ಭಾಗದಿಂದ
ಚಂದ್ರ,
ವಿಷ್ಣುವಿನ
ಭಾಗದಿಂದ
ದತ್ತಾತ್ರೇಯ
ಮತ್ತು
ನಂತರ
ಋಷಿ
ದುರ್ವಾಸರು
ಶಿವನ
ಭಾಗದಿಂದ
ಜನಿಸಿದರು.
ಪೂಜಾ ವಿಧಾನಗಳು
ಭಗವಾನ್ ನಾರಾಯಣನ ಅವತಾರವಾಗಿರುವುದರಿಂದ ದತ್ತಾತ್ರೇಯನನ್ನು ದತ್ತ ಪೂರ್ಣಿಮೆಯಲ್ಲಿ ಪೂಜಿಸಲಾಗುತ್ತದೆ. ಈ ದಿನ ಹಳದಿ ವಸ್ತ್ರಗಳನ್ನು ಧರಿಸಿ, ಹಳದಿ ಹೂವುಗಳನ್ನು ಅರ್ಪಿಸಬೇಕು ಮತ್ತು ಹಳದಿ ಸಿಹಿತಿಂಡಿಗಳು, ಹಳದಿ ಹಣ್ಣುಗಳನ್ನು ಅರ್ಪಿಸಬೇಕು. ದತ್ತಾತ್ರೇಯನ ಏಳು ಪ್ರದಕ್ಷಿಣೆಗಳನ್ನು ಮಾಡಿ. ಈ ದಿನ ಓಂ ನಮೋ ಭಗವತೇ ದತ್ತಾತ್ರೇಯ ಮಂತ್ರವನ್ನು ಮಾಲೆಯೊಂದಿಗೆ ಜಪಿಸಬೇಕು. ಇದು ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ವ್ಯಕ್ತಿಯ ಜೀವನವನ್ನು ಸಂತೋಷಪಡಿಸುತ್ತದೆ.
ದತ್ತ ಪೂಜೆಯ ಪ್ರಯೋಜನಗಳು
ದತ್ತಾತ್ರೇಯನ ಆರಾಧನೆಯು ಸಕಲ ಸುಖಗಳನ್ನು ನೀಡುತ್ತದೆ. ಅದಕ್ಕಾಗಿಯೇ ಯಾವುದೇ ಬಿಕ್ಕಟ್ಟು ಬಂದರೆ ಭಕ್ತರು ದತ್ತನನ್ನು ಆರಾಧಿಸುತ್ತಾರೆ. ದಾಂಪತ್ಯದಲ್ಲಿ ಅಡೆತಡೆಗಳು ಇರುವವರು, ಯುವಕ-ಯುವತಿಯರು ದತ್ತ ಪೂರ್ಣಿಮೆಯ ದಿನದಂದು ಹಳದಿ ಬಟ್ಟೆಯನ್ನು ಧರಿಸಿ, ದತ್ತನಿಗೆ ಪೂಜೆ ಸಲ್ಲಿಸುತ್ತಾರೆ. ದಾನ್ಯಗಳನ್ನು ದಾನ ಮಾಡುತ್ತಾರೆ. ಇದರಿಂದ ಕಂಕಣ ಭಾಗ್ಯ ಕೂಡಿ ಬರುವ ನಂಬಿಕೆ ಇದೆ. ದತ್ತ ಜಯಂತಿಯ ದಿನದಂದು ಅರಿಶಿನದ ಮಾಲೆಯೊಂದಿಗೆ ಓಂ ನಮೋ ಭಗವತೇ ದತ್ತಾತ್ರೇಯ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ. ದತ್ತ ದೇವರನ್ನು ಹೂವುಗಳಿಂದ ಪೂಜಿಸುವುದರಿಂದ ಮತ್ತು ಹಳದಿ ಹಣ್ಣುಗಳನ್ನು ಅರ್ಪಿಸುವುದರಿಂದ ದೈಹಿಕ ಕಾಯಿಲೆಗಳು ಗುಣವಾಗುತ್ತವೆ. ಈ ದಿನ ಉಪವಾಸವಿದ್ದು ಹಸುವಿನ ದೇಸಿ ತುಪ್ಪದಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿದರೆ ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ.