ಫೆ.14: ಯುವಪ್ರೇಮಿಗಳಿಗೆ ಸೀಮಿತವಾಗಬೇಕೇಕೆ?

ಪ್ರೀತಿಗೆ ಅಂಟಿಕೊಂಡಿರುವ ತುಂಟತನ, ಕಚಗುಳಿತನ ಮದುವೆ-ಮಕ್ಕಳು ಅಂತ ಆಗಿಬಿಟ್ಟರೆ ಸಾಕು ಕಣ್ಮರೆಯಾಗಿ ಬಿಡುತ್ತವೆ. ಇದಕ್ಕೆ ಕಾರಣವೇನು ಅಂತ ಹುಡುಕುತ್ತಾ ಹೊರಟರೆ, ಅದಕ್ಕೆ ಕಾರಣ ನಾವೇ ಆಗಿರ್ತೀವಿ. ಮದುವೆಯಾಯ್ತು-ಮಕ್ಕಳೂ ಆದ್ವು ಇನ್ನೆಂತಹ ತುಂಟತನ, ಜವಾಬ್ದಾರಿಯಿಂದ ಇರ್ಬೇಕು ಅಂತ, ನಮ್ಮಲ್ಲಿಯ ತುಂಟತನಕ್ಕೆ ಫುಲ್-ಸ್ಟಾಪ್ ಹಾಕಿಬಿಡ್ತೀವಿ. ನಮಗರಿವಿಲ್ಲದೆ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದಾದ ಒಂದು ಜಬರದಸ್ತಾದ ರಸ ಘಳಿಗೆಗಳನ್ನ ಕಳೆದುಕೊಳ್ತೀವಿ.
ಒಂದು ಕ್ಷಣ ಯೋಚನೆ ಮಾಡಿ, ಮದುವೆ ಮುಂಚೆಯಾದ್ರೆ, ಸಂಗಾತಿಗಾಗಿ ಏನೆಲ್ಲಾ ಮಾಡ್ತೀವಿ, ಊಹಿಸಲಾಗದಂತಹ ಅನಿರೀಕ್ಷಿತ ಉಡುಗೊರೆ ಕೊಟ್ಟು ಸಂಗಾತಿಯನ್ನ ಬೆರಗು ಗೊಳಿಸ್ತೀವಿ. ಆ ಉಡುಗೊರೆ ದುಬಾರಿಯದ್ದೇ ಆಗಿರಬೇಕು ಅಂತೇನು ಇಲ್ಲ. ಎಲ್ಲೋ ದೂರದಲ್ಲಿದ್ದಾಗ ಅರೆಕ್ಷಣದ ಭೆಟ್ಟಿಗಾಗಿ ಅಷ್ಟುದೂರದಿಂದ ಬಂದು ಸಂಗಾತಿಯ ಕಣ್ಣಲ್ಲಿ ಖುಷಿಯನ್ನ ತುಂಬಿಕೊಡುವ ಉಡುಗೊರೆಗೆ ಬೆಲೆಕಟ್ಟಲು ಸಾಧ್ಯವೆ? ಸಂಸಾರದ ಜಂಜಾಟಗಳಲ್ಲಿ, ಜವಾಬ್ದಾರಿಗಳಲ್ಲಿ ಕಳೆದು ಹೋಗಿ ಅಂತಹ ಅನುರಾಗದ ಅಪರೂಪದ ಕ್ಷಣಗಳನ್ನು ಸವಿಯದೆ ಹೋಗ್ತೀವಿ.
ಇನ್ನೇನು ಇಹಯಾತ್ರೆ ಮುಗಿಸಲು ಕೆಲವೇ ಕ್ಷಣಗಳು ಬಾಕಿಯಿದ್ದಾಗ ನಮ್ಮೆಲ್ಲಾ ಪ್ರೀತಿ-ಪಾತ್ರರಿಗೆ ಎಷ್ಟರ ಮಟ್ಟಿಗೆ ಪ್ರೀತಿ ವ್ಯಕ್ತಪಡಿಸಿದ್ವಿ? ಅಂತ ನಮ್ಮನ್ನು ನಾವೇ ಪ್ರಶ್ನಿಸಿ ಕೊಂಡರೆ, ಛೇ! ನಾನು ಇನ್ನೂ ಸೊಗಸಾಗಿ ಜೀವನ ಮಾಡಬಹುದಿತ್ತು ಅಂತ ಅನ್ನಿಸಿದರೆ, ಏನುಪಯೋಗ? ಆಗ ಏನು ಮಾಡಲಾಗದ ಸ್ಥಿತಿಯಲ್ಲಿರ್ತೀವಿ. ಬದುಕು ತನ್ನ ಗರ್ಭದಲ್ಲಿ ಏನೆಲ್ಲಾ ಅಡಗಿಸಿಟ್ಟು ಕೊಂಡಿದೆ, ಅದೆನ್ನೆಲ್ಲಾ ಪಡೆಯಬೇಕಂದರೆ ಪ್ರೀತಿಯಿಂದ, ಆಸ್ಥೆಯಿಂದ ಬದುಕಿದರೆ ಮಾತ್ರ ಸಾಧ್ಯ.
ಪ್ರೀತಿ ವ್ಯಕ್ತ ಪಡಿಸೋಕೆ ಫೆಬ್ರವರಿ ಹದಿನಾಲ್ಕೇ ಆಗಿ, ಯುವ-ಪ್ರೇಮಿಗಳೇ ಆಗಿರಬೇಕಂತೇನಿಲ್ಲ. ಅನ್ಯರೊಂದಿಗೆ ಸಮಾಧಾನವಾಗಿ ಎಷ್ಟೊಂದು ಪ್ರೀತಿಯಿಂದ ಮಾತಾಡ್ತೀವಿ, ಆದರೆ ಸದಾಕಾಲ ನಮಗೆ ಬೆನ್ನೆಲುಬಾಗಿರುವ, ಅದೆ ನನ್ನವರು ಅಂತ ಅನ್ನಿಸಿಕೊಂಡ ಅಪ್ಪ-ಅಮ್ಮ-ಅಣ್ಣ-ತಂಗಿ-ಹೆಂಡತಿ ಜೊತೆಗೆ ಪ್ರೀತಿಯಿಂದ ಎಷ್ಟು ಸಲ ಮಾತಾಡ್ತೀವಿ? ಸದಾಕಾಲ ಪ್ರೀತಿಯಿಂದ ಮಾತಾಡ್ತಾಯಿದ್ದು, ಪ್ರೀತಿ ಧಾರೆಯೆರೆಯುತ್ತಾ ಇದ್ರೆ ಅದಕ್ಕಿಂತ ಮಿಗಿಲಾದ ಉಡುಗೊರೆ ಇದೆಯಾ?
ಈ ಪ್ರೇಮಿಗಳ ದಿನ- ಪಾಶ್ಚಾತ್ಯರಿಂದ ಬಂದದ್ದು ಅಂತ ಮೂಗು ಮುರಿಯುವುದರ ಬದಲಾಗಿ, ನಮ್ಮ ಸಂಸ್ಕೃತಿಗೆ ಒಗ್ಗಿ ಕೊಳ್ಳುವ ಹಾಗೆ ಆಚರಿಸುವುದು ನಮ್ಮ ಕೈಯಲ್ಲೆ ಇದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications