ಉಗಾದಿಯ ಉಲ್ಲಾಸ

ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು
ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು
ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ
ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು
ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು
ಇನ್ನೊಂದು ಕವನ
ಯುಗಾದಿ : ಯುಗದ ಸಂಭ್ರಮ ಬರೀ ಭ್ರಮೆ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications