ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕೆಲ್ಲ ಬೇವು-ಬೆಲ್ಲ

By Staff
|
Google Oneindia Kannada News
ವಸುಂಧರೆಗೆ ಹಸಿರುಡುಗೆ ತೊಡಿಸಿ ಬಂದ ವಸಂತ
ಚ್ಯೆತ್ರದ ಚಿಗುರು ಎಲ್ಲೆಲ್ಲೂ ಹಸಿರು ತಂದ ವಸಂತ
ಅವಿರತ ಹಕ್ಕಿಗಳ ಚಿಲಿಪಿಲಿ ಗಾನ
ಆದರೆ ಮನುಜರೇಕೋ ಮೌನ ಅರಿಯದಾದ ವಸಂತ

ಮೌನದ ಮನುಜನಿಗೆ ಪ್ರಶ್ನಿಸಿದ ಹೀಗೆ
ದಿನದಿನದ ದುಡಿಮೆಗೆ ದುಗುಡವೇಕೆ?
ದಿನವೂ ಉದಯಿಸುವ ದಿನಕರ ದಣಿದಾನೆ?
ಈ ದಿನ ಬರಲಾರೆನೆಂದು ವಿರಮಿಸುವನೆ?

ಉಕ್ಕುವ ಕಡಲು ಉದಾಸಗೊಂಡಿತೆ?
ಬಳ್ಳಿ ಬಳಲೀತೆ ಹೂ ಭಾರದಿಂದ?
ನಿತ್ಯವು ನಗೆ ತುಂಬಿ ಹೂವು ಅರಳುವುದಲ್ಲ
ಶಿಶಿರ ಕಳೆದು ವಸಂತ ಬಂದಾಯಿತಲ್ಲ
ನಲಿಯುತ್ತಿವೆ ಜೀವಸಂಕುಲವೆಲ್ಲ

ಬಿಸಿಲು ಕಳೆದು ಬೆಳದಿಂಗಳು ಬರುವುದು ಸಹಜ ಧರ್ಮ
ಇದೇ ಜೀವನದ ಮರ್ಮ
ಅರಿಯಿತೇ ಮನುಜ ಜೀವನದ ಮೌಲ್ಯ?
ಇನ್ನಾಗಲಿ ನಿಮ್ಮ ಬದುಕು ಬೇವು-ಬೆಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X