ದುಡ್ಡಿನ ದೇವತೆಗೆ ಶೃಂಗಾರ ಮಾಡುವ ಪರಿ ಹೀಗೆ

ರಂಗೋಲಿ ಬಿಡಿಸಿ ತೋರಣ ಕಟ್ಟಿ ಹೊಸ ಸೀರೆ, ಒಡವೆ ತೊಟ್ಟು ದೇವಿಗೆ ಅಲಂಕರಿಸಿ ಪೂಜೆ ಮಾಡಿ ಅರಿಶಿನ ಕುಂಕುಮ ಕೊಟ್ಟು ಅಕ್ಷತೆ ಹಾಕಿಸಿಕೊಂಡರೆ ಸಮಾಧಾನ. ಈ ಎಲ್ಲ ಕಾರ್ಯಗಳನ್ನು ಒಪ್ಪವಾಗಿ ಮಾಡಿದರೆ ಹಬ್ಬಕ್ಕೆ ಸಾರ್ಥಕ. ಲಕ್ಷ್ಮಿಯನ್ನು ಯಾವ ರೀತಿ ಸಿಂಗಾರಗೊಳಿಸಿ ಇನ್ನಷ್ಟು ಕಂಗೊಳಿಸುವಂತೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ:
ಲಕ್ಷ್ಮಿ ಅಲಂಕಾರಕ್ಕೆ ಬೇಕಾಗುವ ಸಾಮಾನುಗಳು:
* ಲಕ್ಷ್ಮಿ ಮುಖವಾಡ
* ಸೀರೆ, ಬ್ಲೌಸ್ ಪೀಸ್
* ಆಭರಣಗಳು
* ದೊಡ್ಡ ಕಲಶದ ಬಿಂದಿಗೆ
* ದುಂಡಗಿನ ತೆಂಗಿನಕಾಯಿ
* ಮಾವಿನ ಎಲೆಗಳು
* ವಿಧ ವಿಧವಾದ ಹೂವುಗಳು
* ಪೇಂಟ್, ದಾರ, ನ್ಯೂಸ್ ಪೇಪರ್, ಫೆವಿಕಾಲ್
ಸಿಂಗಾರಗೊಳಿಸುವ ವಿಧಾನ:
1. ಮೊದಲು ಕಲಶದ ಬಿಂದಿಗೆಯನ್ನು ಚೆನ್ನಾಗಿ ತೊಳೆದು ಮಾವಿನ ಎಲೆಯನ್ನು ಒಪ್ಪವಾಗಿ ಇಟ್ಟು ತೆಂಗಿನ ಕಾಯಿಯನ್ನು ಕಲಶದ ಮೇಲೆ ಇಡಬೇಕು.
2. ಸರಿಯಾಗಿ ಕೂರಿಸಿದ ತೆಂಗಿನಕಾಯಿಗೆ ಲಕ್ಷ್ಮಿಯ ಮುಖವಾಡವನ್ನು ಎರಡೂ ಕಡೆ ಗಟ್ಟಿಯಾಗಿ ಕಟ್ಟಬೇಕು. ಹೂವನ್ನು ಮುಡಿಸುವುದಕ್ಕಾಗಿ ಕಲಶದ ಹಿಂದೆ ಸಣ್ಣದೊಂದು ತಂತಿಯನ್ನೂ ಅಡ್ಡಲಾಗಿ ಕಾಯಿಯ ಜುಟ್ಟಿಗೆ ಕಾಣದಂತೆ ಕಟ್ಟಬೇಕು.
3.ಲಕ್ಷ್ಮಿ ಮುಖವಾಡ ಕಲಶದ ಬಿಂದಿಗೆಯ ಕೊರಳಿನ ಮೇಲೆ ಸರಿಯಾಗಿ ಕೂತಿರಬೇಕು.
4. ಬಿಂದಿಗೆಯ ಕೊರಳಿಗೆ ದಾರ ಕಟ್ಟಿ ಸೀರೆಯನ್ನು ನೆರಿಗೆ ಮಾಡಿಕೊಂಡು ಅಳತೆಗೆ ತಕ್ಕಂತೆ ಸುತ್ತಲೂ ಉಡಿಸಿ ದಾರಕ್ಕೆ ಸಿಕ್ಕಿಸಬಹುದು. ಸೀರೆಗೆ ಹೊಂದಿಕೊಳ್ಳುವ ರವಿಕೆಯನ್ನು ಸುತ್ತಿ ಕಲಶವನ್ನು ಬಳಸಿ ಇಡಬೇಕು.
5. ಈಗ ಕಲಶಕ್ಕೆ ಆಭರಣ ಮತ್ತು ಹೂವನ್ನು ಅಲಂಕರಿಸಬೇಕು. ಬಗೆಬಗೆ ಬಣ್ಣದ ದಿಂಡುಗಳು, ಹೂವುಗಳು ಇದ್ದರೆ ಚೆಂದ. ಕಮಲವನ್ನು ಎರಡೂ ಬದಿಯಲ್ಲಿ ಕುಂಡದಲ್ಲಿ ನೀರಿಟ್ಟು ಇಡಬೇಕು. ಬಿಂದಿಗೆಯ ಕೊರಳಿಗೆ ಕಟ್ಟಿದ್ದ ದಾರ ಕಾಣದಂತೆ ಮಾಡಲು ಮಲ್ಲಿಗೆ ಹೂವಿನ ದಿಂಡನ್ನು ಸುತ್ತಿ.
6. ಬೇಕೆಂದರೆ ನ್ಯೂಸ್ ಪೇಪರ್ ಬಳಸಿಕೊಂಡು ಕಲಶಕ್ಕೆ ಕೈಕಾಲುಗಳನ್ನೂ ಮಾಡಬಹುದು. ನೀರು ಮಿಶ್ರಿತ ಫೆವಿಕಾಲ್ ನೊಂದಿಗೆ ಪೇಪರನ್ನು ಸುರಳಿ ಸುತ್ತಿ ಕೈಕಾಲುಗಳಂತೆ ಆಕಾರ ನೀಡಿ ಸ್ವಲ್ಪ ಆರಲು ಬಿಟ್ಟು ಸೆಲ್ಲೋಟೇಪ್ ಸಹಾಯದೊಂದಿಗೆ ಬಿಂದಿಗೆಗೆ ಅಂಟಿಸಬಹುದು. ಆ ಪೇಪರಿಗೆ ಮೈಬಣ್ಣ ಹೋಲುವ ಬಣ್ಣ ಹಚ್ಚಿ.
7. ಬಳೆಗಳನ್ನು ಕೈಗಳಿಗೆ ಅಥವಾ ರವಿಕೆಗೆ ತೊಡಿಸಬಹುದು.
8. ದೀಪಗಳನ್ನು ಎರಡು ಬದಿಗಿಟ್ಟು, ಅರಿಶಿನ ಕುಂಕುಮ, ಹೂವು, ಅಕ್ಷತೆ, ತಿಂಡಿ ತಿನಿಸು, ನೈವೇದ್ಯ ಎಲ್ಲವನ್ನು ಸಿದ್ಧಗೊಂಡ ಕಲಶದ ಮುಂದೆ ಇಡಬೇಕು.
9. ಲಭ್ಯವಿರುವ ಇನ್ನೂ ಅನೇಕ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿಕೊಂಡು ದೇವಿಯನ್ನು ಸಿಂಗಾರಗೊಳಿಸಿಕೊಳ್ಳಬಹುದು. (ವರಮಹಾಲಕ್ಷ್ಮಿ ಪೂಜಾ ವಿಧಾನ)
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications