ರಾಯರ 338ನೇ ಆರಾಧನಾ ಮಹೋತ್ಸವ

Sri Raghavendra Swamiji
ರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ ವಿಜಯದಾಸ ಟ್ರಸ್ಟ್‌ಗೆ ಶ್ರೀರಾಘವೇಂದ್ರ ಅನುಗ್ರಹ' ಲಭಿಸಿದೆ.

ಪ್ರಶಸ್ತಿ ಒಂದು ಲಕ್ಷ ರೂ. ನಗದು, ಫಲಕ, ಶೇಷ ವಸ್ತ್ರ ಹಾಗೂ ಫಲ ಮಂತ್ರಾಕ್ಷತೆ ಒಳಗೊಂಡಿದೆ. ಆಸ್ಥಾನ ವಿದ್ವಾನ್ ಖ್ಯಾತ ಗಾಯಕ ಡಾ.ಪಿ.ಬಿ. ಶ್ರೀನಿವಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ ಬೆಂಗಳೂರಿನ ಆರ್.ಕೆ.ಶ್ರೀಕಂಠನ್ ಹಾಗೂ ಚೆನ್ನೈನ ಮೃದಂಗ ವಿದ್ವಾನ್ ಡಾ.ಟಿ.ಕೆ.ಮೂರ್ತಿ ಅವರಿಗೆ ಆಸ್ಥಾನ ವಿದ್ವಾನ್' ಗೌರವ ಪ್ರಕಟಿಸಲಾಗಿದೆ.

ರಾಯರ ಪೂರ್ವಾರಾಧನೆ (ಆ.7) ಯಂದು ಬೆಳಗ್ಗೆ 10ಕ್ಕೆ ಶ್ರೀಮಠದ ಪ್ರಾಕಾರದಲ್ಲಿ ಡಾ.ಪಿ.ಬಿ.ಶ್ರೀನಿವಾಸ ಅವರಿಗೆ ಆಸ್ಥಾನ್ ವಿದ್ವಾನ್' ಗೌರವ ನೀಡಿ ಪೀಠಾಧಿಪತಿ ಸುಯತೀಂದ್ರ ತೀರ್ಥರು ಆಶೀರ್ವದಿಸಲಿದ್ದಾರೆ. ಶ್ರೀರಾಘವೇಂದ್ರ ಅನುಗ್ರಹ ಹಾಗೂ ಇನ್ನಿಬ್ಬರಿಗೆ ಆಸ್ಥಾನ ವಿದ್ವಾನ್ ಗೌರವ
ಪ್ರದಾನ ಸಮಾರಂಭ ರಾಯರ ಮಧ್ಯಾರಾಧನೆ (ಆ.8)ಯಂದು ಬೆಳಗ್ಗೆ 10ಕ್ಕೆ ಶ್ರೀಮಠದ ಪ್ರಾಕಾರದಲ್ಲಿ ಪೀಠಾಧಿ ಪತಿ ಸುಯತೀಂದ್ರ ತೀರ್ಥರ ಸಾನ್ನಿಧ್ಯದಲ್ಲಿ ನೆರವೇರಲಿದೆ.

ಆರಾಧನಾ ಮಹೋತ್ಸವ : ಭರದ ಸಿದ್ಧತೆ
ಗುರು ರಾಯರ 338ನೇ ಆರಾಧನಾ ಮಹೋತ್ಸವ ನಿಮಿತ್ತ ಆ.5ರಿಂದ 11ರವರೆಗೆ ಸಪ್ತ ರಾತ್ರೋತ್ಸವ ನಿಗದಿ ಯಾಗಿದ್ದು, ಭರದಿಂದ ಸಿದ್ಧತೆಗಳು ಸಾಗಿವೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ಏಳು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಲಿವೆ. ಆ.7ರ ರಾತ್ರಿ 9ಕ್ಕೆ ಘವೇಂದ್ರಸ್ವಾಮಿ ಪೂರ್ವಾರಾಧನೆ ನಿಮಿತ್ತ ರಜತ ಮಂಟಪೋತ್ಸವ, ಆ.8ರ ರಾತ್ರಿ 9.30ಕ್ಕೆ ಮಧ್ಯಾರಾಧನೆ ನಿಮಿತ್ತ ಗಜ, ರಜತ ಮತ್ತು ಸ್ವರ್ಣ ರಥೋತ್ಸವ, ಆ.9ರ ಬೆಳಗ್ಗೆ 10ಕ್ಕೆ ಉತ್ತರಾರಾಧನೆ ನಿಮಿತ್ತ ಮಹಾ ರಥೋತ್ಸವ ನೆರವೇರಲಿದೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+