Navratri Puja in Periods: ನವರಾತ್ರಿ ಪೂಜೆಯನ್ನು ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡಬೇಕಾ ಅಥವಾ ಬೇಡಬಾರದಾ?
ನವರಾತ್ರಿ ಭಾನುವಾರ ಅಕ್ಟೋಬರ್ 15ರಿಂದ ಆರಂಭವಾಗುತ್ತದೆ. ಅಕ್ಟೋಬರ್ 15ರಿಂದ ಅಕ್ಟೋಬರ್ 23ರವರೆಗೆ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಅಕ್ಟೋಬರ್ 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದುರ್ಗಾದೇವಿಯು ಶಕ್ತಿ ಸ್ವರೂಪ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡಿ ಜಯ ಸಾಧಿಸಿದಳು.
ದೇವತೆಗಳಿಗೆ ಕಂಠಕವಾಗಿದ್ದ ಮಹಿಷಾಸುರನನ್ನು ಕೊಲ್ಲಲು ದುರ್ಗಾದೇವಿಗೆ ದೇವತೆಗಳು ತಮ್ಮೆಲ್ಲಾ ಶಕ್ತಿಯನ್ನು ನೀಡಿದರು. ಮಹಿಷಾಸುರನನ್ನು ಸದೆಬಡಿಯಲು ದುರ್ಗಾ ದೇವಿಯನ್ನು ತಮ್ಮೆಲ್ಲಾ ಶಕ್ತಿಯನ್ನು ನೀಡಿ ಪೂಜಿಸಿದರು ಆರಾಧಿಸಿದರು. ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿದ ದುರ್ಗಾ ಮಾತೆ ಕೊನೆಗೆ ಜಯ ಸಾಧಿಸಿದಳು. ಹೀಗಾಗಿ ಹತ್ತನೇ ದಿನ ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

ದೇಶದ ಹಲವೆಡೆ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಲವೆಡೆ ಪೆಂಡಾಲ್ಗಳನ್ನು ಹಾಕಿ ಬೃಹತ್ ದುರ್ಗಾ ದೇವಿಯ ಮೂರ್ತಿಯನ್ನು ಸ್ಥಾಪಿಸಿ ಅಲಂಕರಿಸಲಾಗುತ್ತದೆ. ಈ ಒಂಬರತ್ತು ದಿನಗಳ ಕಾಲ ಅತ್ಯಂತ ಸಂಭ್ರಮ ಸಡಗರದಿಂದ ದುರ್ಗಾ ದೇವಿಯ ಪೂಜೆ ನೆರವೇರಿಸಲಾಗುತ್ತದೆ.
ಈ ಒಂಬತ್ತು ದಿನಗಳಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ದೇವಿ ಆರ್ಶೀವಾದ ಪಡೆಯುತ್ತಾರೆ. ಭಕ್ತರ ಇಷ್ಟಾರ್ಥಗಳು ಈಡೇರಿಸಿ ಮತ್ತು ಅವರಿಗೆ ಯಶಸ್ಸನ್ನು ನೀಡುವ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಮಂಗಳಕರ ವಾತಾವರಣ ನಿರ್ಮಾಣವಾಗಿ ಶತ್ರುವನ್ನು ಜಯಿಸುವ ಶಕ್ತಿ ಲಭಿಸುತ್ತದೆ ಎಂದು ಬಲವಾದ ನಂಬಿಕೆ ಇದೆ. ಹೀಗಾಗಿ ಪ್ರತಿ ಹಿಂದೂ ಕುಟುಂಬ ಮಾತೃದೇವತೆಯ ಆರಾಧನೆಯಲ್ಲಿ ತೊಡಗಿಕೊಳ್ಳುತ್ತದೆ.
ಆದರೆ ಮಹಿಳೆಯರಿಗೆ ತಮ್ಮ ಮುಟ್ಟಿನ ಅವಧಿಯಲ್ಲಿ ಪೂಜೆಯನ್ನು ಮಾಡಬೇಕಾ ಅಥವಾ ಬೇಡಬಾರದಾ ಎನ್ನುವ ಗೊಂದಲಗಳಿವೆ. ಹಾಗಾದರೆ ನವರಾತ್ರಿ ವೇಳೆ ಮುಟ್ಟಾದರೆ ಅಥವಾ ಇದೇ ಸಮಯದಲ್ಲಿ ಮುಟ್ಟಿನ ಅವಧಿ ಇದ್ದಲ್ಲಿ ದುರ್ಗಾ ಪೂಜೆಯನ್ನು ಮಾಡಬೇಕಾ ಅಥವಾ ಮಾಡಬಾರದಾ ಎಂದು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯೋಣ.

ನವರಾತ್ರಿ ಪೂಜೆಯನ್ನು ಪಿರಿಯಡ್ಸ್ ಸಮಯದಲ್ಲಿ ಮಾಡಬೇಕಾ ಅಥವಾ ಬೇಡಬಾರದಾ?
ಸಾಮಾನ್ಯವಾಗಿ ಮಹಿಳೆಯರು ತಮ್ಮ ಮುಟ್ಟಿನ ಅವಧಿಯನ್ನು ತಿಳಿದಿರುತ್ತಾರೆ. ನವರಾತ್ರಿಯಲ್ಲಿ ಅವರ ಋತುಸ್ರಾವ ಬರಬಹುದೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಊಹಿಸಬಹುದು. ಒಂದು ವೇಳೆ ನವರಾತ್ರಿಯ ದಿನಗಳಲ್ಲಿ ಪಿರಿಯಡ್ಸ್ ಅವಧಿ ಇದೆ ಎಂದು ತೋರಿದರೆ ಅಂಥವರು ಮೊದಲ ಮತ್ತು ಕೊನೆಯ ನವರಾತ್ರಿಯಂದು ಪೂಜೆ ಮತ್ತು ಉಪವಾಸವನ್ನು ಮಾಡಬಹುದು. ಉಳಿದ ದಿನಗಳಲ್ಲಿ ದುರ್ಗೆ ದೇವಿಯನ್ನು ಸ್ಮರಿಸುವುದು ಒಳ್ಳೆಯದು.
ಮುಂಜಾನೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಪೂಜಾ ಕೊಠಡಿಯ ಮುಂದೆ ನಿಂತು ಮಾತೃದೇವತೆಯ ದರ್ಶನ ಪಡೆಯಬಹುದು. ಈ ಸಮಯದಲ್ಲಿ ಕಲಶ, ಪೂಜಾ ಸಾಮಗ್ರಿ ಅಥವಾ ದುರ್ಗಾ ದೇವಿಯ ಫೋಟೋವನ್ನು ಮುಟ್ಟಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಬಯಸಿದರೆ ಪಿರಿಯಡ್ಸ್ ಸಮಯದಲ್ಲಿ ನಿಮ್ಮ ಮನೆಯಲ್ಲಿ ಪೂಜೆಯನ್ನು ಮಾಡಲು ಅರ್ಚಕರನ್ನು ಕರೆತರಬಹುದು ಅಥವಾ ಇತರ ಕುಟುಂಬ ಸದಸ್ಯರು ಪೂಜೆಯನ್ನು ಮಾಡಬಹುದು.
ದುರ್ಗಾ ಸಪ್ತಶತಿ ಪಾರಾಯಣಕ್ಕೆ ಯಾವುದೇ ತೊಂದರೆ ಇಲ್ಲ. ನೀವು ಅದನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಅಥವಾ ನಿಮ್ಮ ಕೈಯಲ್ಲಿ ದುರ್ಗಾ ಸಪ್ತಶತಿಯನ್ನು ಹಿಡಿದುಕೊಂಡು ಪಠಿಸಬಹುದು. ಆದರೆ ಓದಿದ ನಂತರ ದುರ್ಗಾ ಸಪ್ತಶತಿಯನ್ನು ಶುದ್ಧ, ಪವಿತ್ರ ಸ್ಥಳದಲ್ಲಿ ಇರಿಸಿ. ಅದನ್ನು ಪೂಜಾ ಸ್ಥಳದಲ್ಲಿ ಇಡಬೇಡಿ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications