Naga Panchami 2024 Vastu Dosha: ನಾಗ ಪಂಚಮಿಯಂದು ಕಬ್ಬಿಣದ ಪ್ಯಾನ್ನಲ್ಲಿ ರೊಟ್ಟಿ ಏಕೆ ಮಾಡುವುದಿಲ್ಲ?
ಆಗಸ್ಟ್ 9ರಂದು ದೇಶಾದ್ಯಂತ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ನಾಗ ಪಂಚಮಿಯೊಂದಿಗೆ ಅನೇಕ ರೀತಿಯ ನಂಬಿಕೆಗಳು ಮತ್ತು ಸಂಪ್ರದಾಯಗಳು ಸಂಬಂಧಿಸಿವೆ. ನಾಗ ಪಂಚಮಿಯಲ್ಲಿ ಹಲವರು ಹಾವಿನ ಮೂರ್ತಿ, ಹುತ್ತಕ್ಕೆ ಹಾಲನೆರೆಯುತ್ತಾರೆ. ಅನೇಕ ಸ್ಥಳಗಳಲ್ಲಿ, ನಾಗ ಪಂಚಮಿಯ ದಿನದಂದು ವಿಶೇಷ ಆಚರಣೆಗಳು ಮತ್ತು ಪೂಜೆ-ಹವನವನ್ನು ಸಹ ಮಾಡಲಾಗುತ್ತದೆ. ನಾಗ ಪಂಚಮಿಯಿಂದ ಕೆಲ ದಿನಗಳವರೆಗೆ ಹಾವಿನ ಹುತ್ತಗಳಿಗೆ, ಮೂರ್ತಿಗಳಿಗೆ ಹಾಲನೆರೆಯುತ್ತಾರೆ.
ನಾಗ ಪಂಚಮಿಗೆ ಸಂಬಂಧಿಸಿದ ಇನ್ನೊಂದು ನಂಬಿಕೆ ಇದೆ. ನಾಗ ಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿಯನ್ನು ಬೇಯಿಸಬಾರದು ಎಂದು ಹಲವರು ನಂಬುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನಾಗ ಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಮಾಡುವುದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ನಾಗಪಂಚಮಿಯ ದಿನದಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಏಕೆ ಮಾಡುವುದಿಲ್ಲ ಎಂದು ತಿಳಿಯೋಣ.

ನಾಗ ಪಂಚಮಿಯಂದು ಕಬ್ಬಿಣದ ಹೆಂಚಿನ ಮೇಲೆ ರೊಟ್ಟಿ ಮಾಡುವುದಿಲ್ಲ. ಇದಕ್ಕೆ ಕಾರಣವಿದೆ. ನಾಗ ಪಂಚಮಿಯಂದು ಹಾವಿನ ಪೂಜೆಯ ಜೊತೆಗೆ ರಾಹು ಗ್ರಹದ ಶಾಂತಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಹ ಮಾಡಲಾಗುತ್ತದೆ. ಹೀಗಾಗಿ ಈ ದಿನ ಕಬ್ಬಿಣವನ್ನು ಬಳಸಬಾರದು. ರೊಟ್ಟಿ ತಯಾರಿಸಲು ಬಳಸುವ ಕಬ್ಬಿಣದ ಪ್ಯಾನ್ ಅನ್ನು ಸಹ ಈ ದಿನ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ.
ಹೌದು.. ಕಬ್ಬಿಣದ ಪ್ಯಾನ್ ಅನ್ನು ಸಾಮಾನ್ಯವಾಗಿ ರೊಟ್ಟಿ ಮಾಡಲು ಬಳಸಲಾಗುತ್ತದೆ. ನಾಗ ಪಂಚಮಿಯಂದು ಕಬ್ಬಿಣದ ಬಳಕೆಯನ್ನು ಅಶುಭವೆಂದು ಪರಿಗಣಿಸುವುದರಿಂದ ಅದರ ಬಳಕೆಯನ್ನು ತಪ್ಪಿಸಲಾಗುತ್ತದೆ.
ರಾಹುವಿನಿಂದ ನಕಾರಾತ್ಮಕ ಶಕ್ತಿ
ಕಬ್ಬಿಣವನ್ನು ರಾಹುವಿನ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಔಇಗೆ ಹಾಲನೆರೆಯುವ ದಿನಗಳಲ್ಲಿ ಕಬ್ಬಿಣದ ಬಾಣಲೆಯನ್ನು ಬಳಸಿದರೆ ರಾಹು ಗ್ರಹ ಅಶುಭ ಪರಿಣಾಮಗಳನ್ನು ಬೀರುತ್ತದೆ ಎಂದು ನಂಬಲಾಗುತ್ತದೆ. ರಾಹು ಗ್ರಹದ ಶಾಂತಿಗಾಗಿ ಮಾತ್ರ ಸರ್ಪಗಳನ್ನು ಪೂಜಿಸಲಾಗುತ್ತದೆ. ಹೀಗಾಗಿ ಈ ದಿನ ವಿಶೇಷವಾಗಿ ಕಬ್ಬಿಣವನ್ನು ಬಳಸಬಾರದು.
ರಾಹುವಿನ ಋಣಾತ್ಮಕ ಪ್ರಭಾವದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಈ ನಕಾರಾತ್ಮಕ ಶಕ್ತಿಯಿಂದಾಗಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಅವನ ಕೆಲಸವೂ ಹಾಳಾಗುತ್ತದೆ.
ಈ ದಿನ ನಾಗ ಪಂಚಮಿಯಂದು ನಾಗದೇವರ ಹೆಸರಿನಲ್ಲಿ ಆಹಾರ ಸೇವಿಸಿ. ನಾಗ ಪಂಚಮಿಯ ದಿನದಂದು ನಾಗದೇವತೆಯ ಹೆಸರಿನಲ್ಲಿ ಆಹಾರ ಮತ್ತು ಹಾಲನ್ನು ಹೊರತರಬೇಕು. ಅಂದಹಾಗೆ ಹಾವುಗಳು ಹಾಲು ಅಥವಾ ಆಹಾರವನ್ನು ಸೇವಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ನಾಗ ಪಂಚಮಿಯಂದು ಶೇಷನಾಗನನ್ನು ನೆನೆದು, ಆಹಾರವನ್ನು ತೆಗೆದುಕೊಂಡು ಹಾವುಗಳಿಗೆ ಇಟ್ಟುಬರಬೇಕು. ನಂತರ ಅದನ್ನು ಹಸಿದ ಪ್ರಾಣಿ ಅಥವಾ ಪಕ್ಷಿಗಳು ತಿನ್ನುತ್ತವೆ. ಇದರಿಂದ ನಿಮಗೆ ಪುಣ್ಯವನ್ನು ಲಭಿಸಲಿದೆ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications