ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ
ನಾನೊಬ್ಬ ಗೃಹಿಣಿ. ನಾನು ಯಾವಾಗ ಈ ಪದವಿ ಪಡೆದೆನೋ ಅಂದೇ ನನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೆಲ್ಲಾ ಆಕಾಶದ ಬುಟ್ಟಿಯಲ್ಲಿ ಇಟ್ಟಾಯಿತು. ಗಂಡ, ಮನೆ ಮಕ್ಕಳು, 'ನನ್ನ ಸಂಸಾರ, ಆನಂದ ಸಾಗರ' ಎಂಬ ಹೊತ್ತಿಗೆ ಬಿಚ್ಚಿಟ್ಟಾಯಿತು. ಈ ಅಧ್ಯಾಯ ಆರಂಭಿಸಿ 25 ವರ್ಷಗಳು ಸಂದಿವೆ ಯಾವುದೇ ಹೊಸ ಅಧ್ಯಾಯದ ಕಡೆ ಕಣ್ತೆರೆದೂ ನೋಡದೆ. ನನಗೆ ಈ ಅಧ್ಯಾಯವನ್ನು ಮುಂದುವರೆಸಲೂ ಮನಸಿಲ್ಲ, ಮುಚ್ಚಿಡಲೂ ಮೊದಲೇ ಸಾಧ್ಯವಾಗುತ್ತಿಲ್ಲ. ಇದು ನನ್ನ ಪಾಡು.
ತಂದೆ ತಾಯಿಯರ ಮುದ್ದಿನ ಮಗಳಾಗಿ ಹಾಡು ಹಸೆ, ಕುಣಿತ ಎಂದು ಬೆಳೆದ ನನಗೆ ಮದುವೆ ಎಂಬ ಮೂರು ಅಕ್ಷರದ ಮಾಲೆಯನ್ನು 20ರ ಹರೆಯದಲ್ಲಿಯೇ ತೊಡಿಸಿದರು. ಮದುವೆಯ ದಿನ ಕರುಳು ಹಿಂಡುವ ಸಂಕಟ. ಹೇಳಲಾಗದ, ಬಿಕ್ಕಿ ಬಿಕ್ಕಿ ಅಳಲೂ ಸಾಧ್ಯವಾಗದ ದಿನವದು. ತಂದೆ-ತಾಯಿಯ ಬಾಂಧವ್ಯವನ್ನು ಕಳಚುವ ಆ ದಿನ ಕೆಲವರಿಗೆ ಸಂಭ್ರಮ. ನನಗೆ ಮಾತ್ರ ಬದುಕಿನಲ್ಲಿ ಮರೆಯಲಾಗದ ನೋವಿನ ದಿನವದು.[ಮಹಿಳಾ ದಿನಾಚರಣೆ ಬಗ್ಗೆ ಮಹಿಳೆಯರಿಗೆಷ್ಟು ಗೊತ್ತು?]

ಮದುವೆಗೆಂದು ಮನೆಯಿಂದ ತೆರಳುವ ಮುನ್ನ ಇದು ತವರು ಮನೆಯ ಕೊನೆಯ ಹಾಲು ಎಂದು ಸೂಕ್ಷ್ಮವಾಗಿ ಹೇಳುತ್ತಾ ಅಮ್ಮ ಹಾಲು ಕೊಡುವ ಕ್ಷಣ ಹೆಣ್ಣು ಮಕ್ಕಳ ಜೀವನದ ಬಹಳ ನೋವಿನ ದಿನ. ಮದುವೆ ಮಂಟಪದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಪುರೋಹಿತರು ಹೇಳುವ 'ನಿನ್ನ ತವರಿನ ಹಾಲಿನ ಋಣ ತೀರಿತು ಎಂದಾಗ?' ಜೀವನವೇ ಬೇಡ ಎನಿಸಿಬಿಡುತ್ತದೆ. ಅಳುತ್ತಾ ನಿಂತಾಗ ಮದುವೆ ಹುಡುಗನ ಕಡೆ ಕೈ ತೋರಿಸಿ ಇನ್ನು ಮುಂದೆ ಇದೇ ನಿನ್ನ ಪ್ರಪಂಚ ಹೇಳಿದಾಗ ಅಂದಿನಿಂದ ಬದುಕಿನ ಎರಡನೇ ಅಧ್ಯಾಯ ಆರಂಭ.
ಮದುವೆ ಎಂಬ ಎರಡನೇ ಅಧ್ಯಾಯದಲ್ಲಿ ನನಗೆ ಎಲ್ಲವೂ ಹೊಸತು. ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ. ಇಲ್ಲಿಂದಲೇ ಗೃಹಿಣಿ ಎಂಬ ಕಿರೀಟ ಧರಿಸಿ ನಾಲ್ಕು ಗೋಡೆಯ ನಡುವೆಯೇ ಪ್ರಪಂಚ ಕಾಣುವ ಕ್ಷಣಗಳು ಆರಂಭವಾದವು. ಆದರೆ ಗೃಹಿಣಿ ಎನಿಸಿಕೊಂಡು ಗಂಡ, ಅತ್ತೆ, ಮಾವನ ಮಾತಿಗೆ ಒಗ್ಗಿಕೊಂಡು ಬದುಕುವುದು ನನಗೇನೂ ಕಷ್ಟವಾಗಲಿಲ್ಲ. ಏಕೆಂದರೆ ನನಗೆ ಗಂಡ ಮತ್ತು ಮಕ್ಕಳ ಹೊರತಾಗಿ ಬೇರೆ ಪ್ರಪಂಚವಿರಲಿಲ್ಲವಲ್ಲ ಇಂದಿನ ಮಹಿಳೆಯರಿಗಿರುವಂತೆ.
ಗಂಡ ಕೊಡಿಸೋ ಪ್ರತಿಯೊಂದು ವಸ್ತುವೂ ಬಂಗಾರವೇ ಆಗಿತ್ತು. ಅತ್ತೆ ಮಾವನ ಮಾತೇ ವೇದವಾಕ್ಯವಾಗಿತ್ತು. ಹಾಗೆಂದ ಮಾತ್ರಕ್ಕೆ ಇದು ನನ್ನ ದೌರ್ಬಲ್ಯವಲ್ಲ. ನಾನು ಇದನ್ನು ಕುಟುಂಬ, ಸಮಾಜದ ಶಕ್ತಿ ಎಂದು ತಿಳಿದೆ. ಹಾಗಾಗಿ ಎಲ್ಲಾ ಕ್ಷಣವೂ ಖುಷಿದಾಯಕ. ಒಟ್ಟಿನಲ್ಲಿ 'ಆಡಿಸಿದಾತನ ಕೈ ಚಳಕದಲ್ಲಿ ಎಲ್ಲ ಅಡಗಿದೆ' ಎಂಬ ವಾಕ್ಯ ಮಾತ್ರ ನನ್ನ ಬದುಕಿಗೆ ಶತಸಿದ್ದ ಎನಿಸಿದರೂ ಗೃಹಿಣಿಯ ಆಲಯ ಯಾರು ಒಡೆಯಲಾಗದ ಪ್ರೀತಿ ಪ್ರೇಮದ ಗೃಹ ಎಂದು ಹೇಳಲು ನಾನು ಖಂಡಿತಾ ಮರೆಯುವುದಿಲ್ಲ.[ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು]

ಹೆಣ್ಣು ಮಕ್ಕಳು ಬಾಹ್ಯಾಕಾಶ ನೋಡಿ ಬಂದಿದ್ದಾರೆ, ವಿಮಾನ ಹಾರಿಸಿದ್ದಾರೆ, ರೈಲು ಓಡಿಸಿದ್ದಾರೆ, ಜಗದಗಲ ಓಡಾಡಿ ದೇಶಕ್ಕೆ ಹೆಸರು ತಂದಿದ್ದಾರೆ ನಾನು ಇದನ್ನು ಒಪ್ಪಿಕೊಳ್ತೇನೆ. ಆದರೆ ಅಡುಗೆಮನೆ ಕಡೆ ಮುಖ ಮಾಡದೆ ಅವರು ಇರುವರೇ. ಚಂದದ ಅಡುಗೆ ಮಾಡಿ ಮನೆಮಂದಿಗೆಲ್ಲಾ ಬಡಿಸದೇ ಇರುವರೇ?. ಅದರ ಆನಂದವನ್ನು ಸವಿಯದೇ ಇರುವರೇ? ಈ ಎಲ್ಲಾ ಮಾತುಗಳನ್ನು ಹೇಳುವ ನಾನು ಪುರುಷರ ಎಲ್ಲಾ ತಪ್ಪು-ಒಪ್ಪುಗಳನ್ನು ಒಪ್ಪಿ ತಲೆಬಾಗಿ ನಡೆಯುತ್ತೇನೆಂದು ಭ್ರಮಿಸಬೇಡಿ. ಅಂದರೆ ನಾನು ಇಡೀ ಕುಟುಂಬದ ಸಹನೆಯ ಕಟ್ಟೆ ಒಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳ ಬಯಸುತ್ತೇನೆ.
ನನ್ನ ಮಾತು ಇಷ್ಟೇ...ಯಾರೋ ಒಬ್ಬ ಮಹಿಳೆ ನಾನು ಗೃಹಿಣಿ ಎಂದಾಕ್ಷಣ ಮೂಗು ಮುರಿಯಬೇಡಿ. ಆಕೆಗೂ ಸಾಧನೆಯ ಹಂಬಲವಿದೆ. ಜ್ಞಾನದ ಒಡಲಿದೆ ಎಂಬುದನ್ನು ಅರಿಯಿರಿ. ಗೃಹಿಣಿ ಎಂಬುದು ಕೇವಲ ಮೂರೇ ಅಕ್ಷರ ಎನಿಸಬಹುದು. ಅದರಲ್ಲಿ ಸುಖ, ಸಂತೋಷ, ನೆಮ್ಮದಿ, ತಾಳ್ಮೆಯ ತೆಕ್ಕೆಯಿದೆ, ಬೇಸರವಾದಾಗ ಸಾಂತ್ವನ ಹೇಳುವ ಮನಸ್ಸಿದೆ, ತಪ್ಪು ಮಾಡಿದಾಗ ತಿದ್ದಿ ತೀಡುವ ಹೃದಯವಿದೆ. ಎಡವಿದಾಗ ಕೈ ಹಿಡಿದು ನಡೆಸುವ ಧೈರ್ಯದ ಮನಸ್ಸಿದೆ.[ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ: ಸಮಗ್ರ ನೋಟ]
ಗೃಹಿಣಿ ಎಂದಾಕ್ಷಣ ಆಕೆ ಎಲ್ಲವನ್ನು ಕಳೆದುಕೊಂಡವಳಲ್ಲ. ಆಕೆಯೂ ಎಲ್ಲವನ್ನು ಪಡೆದುಕೊಂಡವಳು ಪ್ರೀತಿ ಪ್ರೇಮದ ಹಾದಿಯಲ್ಲಿ. ಸಮತೋಲನದ ಬದುಕಿನಲ್ಲಿ ಗೃಹಿಣಿಯೇ ಪ್ರಥಮ. ಆಕೆಯ ಸ್ಥಾನವನ್ನು ಮತ್ತೊಬ್ಬರು ತುಂಬಲು ಸಾಧ್ಯವೇ ಇಲ್ಲ. ದುಡಿಯುವ ಮಹಿಳೆಯ ಜೊತೆ, ಗೃಹಿಣಿಯನ್ನು ಗೌರವಿಸಿ, ಗೃಹಿಣಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯ ಹೇಳಿ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications