ರಾಮನವಮಿಯಂದು ಮರ್ಯಾದಾ ಪುರುಷೋತ್ತಮನಿಗೆ ನಮಿಸಿದ ಮೋದಿ
Recommended Video

ಮರ್ಯಾದಾ ಪುರುಷೋತ್ತಮ ರಾಮನ ಜನ್ಮದಿನವಾದ ಚೈತ್ರ ಮಾಸದ ಶುಕ್ಲಪಕ್ಷದ ನವಮಿ(ಈ ವರ್ಷ ಏ.13)ಯನ್ನು ದೇಶದೆಲ್ಲೆಡೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ.
ತ್ರೇತಾಯುಗದಲ್ಲಿ ಅವತರಿಸಿದ ಸೂರ್ಯ ವಂಶದವನಾದ ರಾಮನದು ವಿಷ್ಣುವಿನ ಏಳನೇ ಅವತಾರ. ರಾಮನ ಕಾಲದಲ್ಲಿ ಆತನ ನೆಲೆ ಅಯೋಧ್ಯೆಯು ಅತ್ಯಂತ ಸುಭಿಕ್ಷೆಯಿಂದ, ಸಮೃದ್ಧಿಯಿಂದ, ನೆಮ್ಮದಿಯಿಂದ, ಸಹಬಾಳ್ವೆಯಿಂದ ಕೂಡಿತ್ತು ಎಂಬ ಕಾರಣಕ್ಕೆಯೇ ಇಂದಿಗೂ ರಾಮರಾಜ್ಯದ ಪರಿಕಲ್ಪನೆಯನ್ನು ನೆಲೆಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಬಾಲ್ಯದಿಂದಲೂ ದುಷ್ಟಸಂಹಾರಿಯಾಗಿ, ಶಿಷ್ಟರಕ್ಷಕನಾಗಿ, ಪಿತೃವಾಕ್ಯ ಪಾಲಕನಾಗಿ, ಕೊನೆಗೆ ರಾಜಧರ್ಮ ಮತ್ತು ವ್ಯಕ್ತಿಧರ್ಮದ ನಡುವೆ ಆಯ್ಕೆಯ ಪ್ರಶ್ನೆ ಉದ್ಭವಿಸಿದಾಗ, ರಾಜಧರ್ಮವನ್ನೇ ನೆಚ್ಚಿಕೊಂಡು ಪತ್ನಿಯನ್ನು ಕಾಡಿಗೆಕಳಿಸಿದವನಾಗಿ, ತನ್ ಪತ್ನಿ ಪವಿತ್ರಳು ಎಂಬುದು ಗೊತ್ತಿದ್ದರೂ ವಿಶ್ವಕ್ಕೆ ಅದನ್ನು ಸಾಬೀತುಪಡಿಸುವ ಸಲುವಾಗಿ ಆಕೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದವನಾಗಿ ರಾಮ ಹಲವು ಕಾರಣಗಳಿಂದ ನೆನಪಿನಲ್ಲಉಳಿದಿದ್ದಾನೆ.
ಅಂಥ ರಾಮನನ್ನು ಚೈತ್ರಮಾಸದ ಶುದ್ಧ ನವಮಿಯಂದು ಪೂಜಿಸಲಾಗುತ್ತದೆ. ಈ ದಿನ ಕೋಸಂಬರಿ, ಪಾನಕಗಳನ್ನು ಮಾಡಿ ರಾಮನಿಗೆ ನೈವೇದ್ಯ ಮಾಡಲಾಗುತ್ತದೆ. ದಾನ ಧರ್ಮ ಮಾಡಲಾಗುತ್ತದೆ.
ರಾಮನವಮಿಯ ಶುಭಗಳಿಗೆಯಂದು ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
|
ನರೇಂದ್ರ ಮೋದಿ
ರಾಮನವಮಿಯ ಶುಭದಿನದಂದು ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಕಾಮನೆಗಳು. ಜೈ ಶ್ರೀರಾಮ್ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
| Array |
ಸುರೇಶ್ ಪ್ರಭು
ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ಈ ಆಚರಣೆ ಶ್ರೀರಾಮನ ಬದುಕನ್ನು ನಾವೂ ಅಳವಡಿಸಿಕೊಳ್ಳಲು ಅನುಕೂಲವಾಗಲಿ. ದೇಶ ಮುಂಬರುವ ದಿನಗಳಲ್ಲಿ ರಾಮರಾಜ್ಯವನ್ನು ಕಾಣಲಿ ಎಂದು ನಾನು ಹಾರೈಸುತ್ತೇನೆ- ಸುರೇಶ್ ಪ್ರಭು, ಕೇಂದ್ರ ಸಚಿವ
|
ಅಶೋಕ್ ಗೆಹ್ಲೋಟ್
ಈ ಪವಿತ್ರ ಮತ್ತು ಸಂಭ್ರಮದ ರಾಮನವಮಿಯಂದು ಎಲ್ಲರಿಗೂ ನನ್ನ ಶುಭಾಶಯಗಳು. ಸರ್ವಶಕ್ತರಾಮ ನಿಮಗೆ ಸಕಲವನ್ನೂ ಕರುಣಿಸಿ, ಹರಸಲಿ. ರಾಮನವಮಿಯಂದು ಆತನ ಧೈರ್ಯ, ಸದ್ಗುಣ ಮತ್ತು ಎಲ್ಲಾ ಸುಗುಣಗಳನ್ನು ನೆನಪಿಸಿಕೊಂಡು, ಸ್ಫೂರ್ತಿ ಪಡೆಯೋಣ- ಅಶೋಕ್ ಗೆಹ್ಲೋಟ್
|
ಡಾ.ಡೇವಿಡ್ ಫ್ರಾಲಿ
ಭಾರತವು ಮತ್ತೊಮ್ಮೆ ರಾಮರಾಜ್ಯವಾಗಿ, ಧರ್ಮ ಮತ್ತು ಯೋಗವನ್ನು ಜಗತ್ತಿಗೆ ಪಸರಿಸುವಂತಾಗಲಿ. ಅದಕ್ಕಾಗಿ ಧಾರ್ಮಿಕ ಪುನರುತ್ಥಾನವಾಗಬೇಕಿದೆ. ಇದು 2019 ರಲ್ಲಿ ಆಗಬೇಕಾದ ಅತ್ಯಗತ್ಯ ಸಂಗತಿ-ಡಾ.ಡೇವಿಡ್ ಫ್ರಾಲಿ
|
ಸಿದ್ದರಾಮಯ್ಯ
ಪಾನಕ ಕೋಸಂಬರಿಯ ಜೊತೆಗೆ ಪ್ರೀತಿ ವಿಶ್ವಾಸಗಳು ಮಿಳಿತಗೊಳ್ಳಲಿ. ಈ ಪವಿತ್ರ ಹಬ್ಬವೂ ನಾಡಿನಲ್ಲಿ ಸ್ನೇಹ ಸೌಹಾರ್ದತೆಯನ್ನು ಬೆಳೆಸಲು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು-ಸಿದ್ದರಾಮಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications