Ganesha Chaturthi 2023: ವಾಸ್ತು ದೋಷ ನಿವಾರಿಸಲು ಗಣೇಶನನ್ನು ಹೇಗೆ ಪೂಜಿಸಬೇಕು?

ಸನಾತನ ಧರ್ಮದಲ್ಲಿ ಗಣೇಶನನ್ನು ಮೊದಲ ಪೂಜನೀಯ ದೇವತೆ ಎಂದು ಪರಿಗಣಿಸಲಾಗಿದೆ. ಯಾವುದೇ ಶುಭ ಅಥವಾ ಮಂಗಳಕರ ಕೆಲಸದಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಗಣೇಶನನ್ನು ವಿನಾಶದ ವಿಧ್ವಂಸಕ ಎಂದು ಪರಿಗಣಿಸಲಾಗುತ್ತದೆ.

ಗಣಪತಿಯನ್ನು ಸ್ತುತಿಸಿ ಜಪಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಲಾಭ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆದರೆ ತಪ್ಪಾದ ವಿಧಾನದ ಪೂಜೆಯಿಂದ ಅಥವಾ ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಗಣೇಶ ನಮ್ಮ ಮೇಲೆ ಕೋಪಗೊಳ್ಳಬಹುದು. ಹೀಗಾಗಿ ಸಿದ್ಧಿಗೆ ಅಧಿಪತಿಯಾಗಿರುವ ಗಜಾನನ್ನನ್ನು ಫುಜಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಹಾಗಾದರೆ ವಾಸ್ತು ದೋಷಗಳನ್ನು ನಿವಾರಿಸಲು ಗಣೇಶನನ್ನು ಹೇಗೆ ಪೂಜಿಸಬೇಕು ಎಂದು ನೋಡೋಣ.

ganesha-chaturthi-2023

ಯಾವ ಬಣ್ಣದ ಗಣೇಶ ಪೂಜಿಸಬೇಕು?

ಗಣೇಶನ ಪ್ರತಿಯೊಂದು ರೂಪದ ವಿಶೇಷ ಪೂಜೆಯು ಎಲ್ಲಾ ರೀತಿಯ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಆದರೂ ಎಲ್ಲಾ ಐಶ್ವರ್ಯಗಳನ್ನು ಬಯಸುವವರಿಗೆ ಸಿಂಧೂರ ಬಣ್ಣದ ಗಣಪತಿಯನ್ನು ಪೂಜಿಸುವುದು ಅನುಕೂಲಕರವಾಗಿದೆ. ಜೀವನದಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಲು ಬಿಳಿ ಬಣ್ಣದ ಗಣೇಶನ ವಿಗ್ರಹವನ್ನು ಪೂಜಿಸಬೇಕು.

ಬಾಗಿಲಿನ ಮೇಲೆ ಯಾವಾಗಲೂ ಅವರ ಫೋಟೋವನ್ನು ಹಾಕಬೇಕು. ಕಲಾ ಕ್ಷೇತ್ರದಲ್ಲಿ ಖ್ಯಾತಿಗಾಗಿ ಮನೆಯಲ್ಲಿ ನರ್ತಿಸುವ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಕು. ಕುಳಿತ ಭಂಗಿಯಲ್ಲಿರುವ ಗಣೇಶನ ವಿಗ್ರಹವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಎಡ ಸೊಂಡಿಲಿನ ಗಣೇಶನ ಮೂರ್ತಿಯ ಮಹತ್ವ

ಸಾಮಾನ್ಯವಾಗಿ ಗಣೇಶನ ವಿಗ್ರಹದಲ್ಲಿ ಅವನ ಸೊಂಡಿಲು ಬಲ ಅಥವಾ ಎಡಕ್ಕೆ ಬಾಗಿರುತ್ತದೆ. ಈ ಎರಡು ರೂಪಗಳು ಧರ್ಮಗ್ರಂಥಗಳಲ್ಲಿ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ಸೊಂಡಿಲು ಎಡಕ್ಕೆ ತಿರುಗಿರುವ ಗಣೇಶನ ವಿಗ್ರಹವನ್ನು ಯಾವಾಗಲೂ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ದೇವಾಲಯದಲ್ಲಿ ಬಲಕ್ಕೆ ಸೊಂಡಿಲನ್ನು ತಿರುಗಿಸಿರುವ ಗಣೇಶನನ್ನು ಪ್ರತಿಷ್ಠಾಪಿಸಬೇಕು.

ganesha-chaturthi-2023

ಕೆಲಸದ ಸ್ಥಳದಲ್ಲಿ ಗಣೇಶನ ಮೂರ್ತಿ ಹೀಗಿರಬೇಕು...

ಕಚೇರಿ ಅಥವಾ ಸಂಸ್ಥೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ನಿಯಮಗಳಿವೆ. ಗಣೇಶನ ವಿಗ್ರಹವನ್ನು ಯಾವಾಗಲೂ ಕೆಲಸದ ಸ್ಥಳದಲ್ಲಿ ಇಡಬೇಕು. ನಿಂತಿರುವ ಗಣೇಶನ ಮೂರ್ತಿಯಲ್ಲಿ ಎರಡೂ ಪಾದಗಳು ನೆಲವನ್ನು ಸ್ಪರ್ಶಿಸುತ್ತಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಯಾವಾಗಲೂ ಕೆಲಸದ ಸ್ಥಳದಲ್ಲಿ ಉತ್ಸಾಹ ಮತ್ತು ತಾಜಾತನವನ್ನು ಕಾಪಾಡುತ್ತದೆ. ಕೆಲಸದ ಸ್ಥಳದಲ್ಲಿ ಗಣೇಶ ಮೂರ್ತಿಯ ಮುಖವು ದಕ್ಷಿಣ ದಿಕ್ಕಿನಲ್ಲಿ ಅಥವಾ ನೈಋತ್ಯ ಮೂಲೆಯಲ್ಲಿ ಇರಬಾರದು.

ವಾಸ್ತು ದೋಷಗಳ ನಿವಾರಣೆಗೆ

ಗಣೇಶನ ವಿಶೇಷ ಆಶೀರ್ವಾದ ಹೊಂದಿರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಎಂದಿಗೂ ನೆಲೆಸುವುದಿಲ್ಲ. ಗಣೇಶನ ವಿಗ್ರಹವನ್ನು ಯಾವಾಗಲೂ ಮನೆಯ ವಾಸ್ತು ದೋಷಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಏಕದಂತನ ಪ್ರತಿಮೆ ಅಥವಾ ಚಿತ್ರವನ್ನು ಇಡುವುದರಿಂದ ವಾಸ್ತು ದೋಷಗಳನ್ನು ತಡೆಯುತ್ತದೆ.

ಮುಖ್ಯ ಬಾಗಿಲಿಗೆ ಸಂಬಂಧಿಸಿದ ದೋಷಗಳನ್ನು ನಿವಾರಿಸಲು

ಕಟ್ಟಡದ ಬಾಗಿಲಿನ ಮುಂಭಾಗದಲ್ಲಿರುವ ಮರ, ದೇವಸ್ಥಾನ, ಕಂಬ ಮತ್ತು ರಸ್ತೆ ಇತ್ಯಾದಿ ಮನೆಯ ಮುಖ್ಯ ಬಾಗಿಲಿಗೆ ಸಂಬಂಧಿಸಿದಂತೆ ಯಾವುದೇ ವಾಸ್ತು ದೋಷವಿದ್ದರೆ. ಈ ವಾಸ್ತು ದೋಷವನ್ನು ದ್ವಾರವೇದ ದೋಷ ಎನ್ನುತ್ತಾರೆ. ಈ ದೋಷವನ್ನು ಹೋಗಲಾಡಿಸಲು ಮುಖ್ಯದ್ವಾರದಲ್ಲಿ ಕುಳಿತಿರುವ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.

ಅಶುಭ ಗ್ರಹಗಳ ಪ್ರಭಾವ ತೊಡೆದುಹಾಕಲು

ಜಾತಕದಲ್ಲಿ ಗ್ರಹದೋಷ ಇರುವವರು ಗಣಪತಿಯನ್ನು ಪೂಜಿಸುವುದು ತುಂಬಾ ಫಲಕಾರಿಯಾಗಿದೆ. ಸ್ವಸ್ತಿಕ ಚಿಹ್ನೆಯನ್ನು ಗಣೇಶನ ರೂಪವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರವು ದೋಷಗಳನ್ನು ತೆಗೆದುಹಾಕಲು ಸ್ವಸ್ತಿಕವನ್ನು ಉಪಯುಕ್ತವೆಂದು ಪರಿಗಣಿಸುತ್ತದೆ. ಇದಲ್ಲದೇ ಗ್ರಹಶಾಂತಿಗಾಗಿ ತುಪ್ಪ ಮಿಶ್ರಿತ ಸಿಂಧೂರದಿಂದ ಗೋಡೆಯ ಮೇಲೆ ಸ್ವಸ್ತಿಕ್ ಗುರುತು ಹಾಕಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+