ದೊಡ್ಡ ಪರದೆಯ ಮೇಲೆ ದಸರಾ ಕಾರ್ಯಕ್ರಮಗಳು
ಮೈಸೂರು, ಸೆ, 22: ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಕಾರ್ಯಕ್ರಮಗಳನ್ನು ದೊಡ್ಡ ಪರದೆಯ ಮೇಲೆ ಪ್ರೊಜೆಕ್ಟರ್ ಮುಖಾಂತರ ನಗರದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ಮತ್ತು ಮೈಸೂರಿನ ಎಲ್ಲಾ ನಾಗರೀಕರು ಟಿವಿಗಳಲ್ಲಿ ಕೇಬಲ್ ನೆಟ್ವರ್ಕ್ ಮುಖಾಂತರ ವೀಕ್ಷಿಸಲು ದಸರಾ ಸಮಿತಿಯಿಂದ ಅನುವು ಮಾಡಿಕೊಡಲಾಗಿದೆ. ದೊಡ್ಡ ಪರದೆಯ ಮೇಲೆ ಕಾರ್ಯಕ್ರಮಗಳನ್ನು ಬಿತ್ತರಿಸುವುದರಿಂದ ಆಯಾ ಮೊಹಲ್ಲಗಳಲ್ಲಿಯೇ ನಾಗರೀಕರು ಮನರಂಜನೆ ಪಡೆಯಬಹುದಾಗಿದೆ.
ಈ ಕೆಳಕಂಡ ಜಾಗಗಳಲ್ಲಿ ಪ್ರದರ್ಶಿಸಲು ಏರ್ಪಾಡು ಮಾಡಲಾಗಿದೆ.
ಆಂದೋಲನ ವೃತ್ತ, ಶಾರದದೇವಿ ವೃತ್ತ, ಈಶ್ವರ ದೇವಸ್ಥಾನದ ವೃತ್ತ , ವಿವಿ ಮೊಹಲ್ಲ, ಜವರೇಗೌಡ ಉದ್ಯಾನವನ, ಸರಸ್ವತಿಪುರಂ, ವಿವೇಕಾನಂದ ವೃತ್ತ, ವಿಜಯನಗರ ಡಿಸ್ಕೌಂಟ್ ವರ್ಲ್ಡ್ ವೃತ್ತ, ತಿಲಕ್ನಗರ ನಮಾಜ್ ಮೈದಾನ, ಹಿಲ್ಟಾಪ್ ಮೈದಾನ ಉದಯಗಿರಿ / ಉದಯಗಿರಿ ವೃತ್ತ ಪೋಲಿಸ್ ಸ್ಟೇಷನ್, ಜೋಗಿಸಿದ್ದಯ್ಯ ಉದ್ಯಾನವನ ಎನ್,ಆರ್.ಮೊಹಲ್ಲಾ, ಅಂಬೇಡ್ಕರ್ ಉದ್ಯಾನವನ, ಅಶೋಕಪುರಂ, ಶಿವಾಜಿ ರಸ್ತೆ ಉದ್ಯಾನವನ, ಎನ್.ಆರ್.ಮೊಹಲ್ಲಾ
ಅಲ್ಲದೇ ಕೇಬಲ್ ನೆಟ್ವರ್ಕ್ ಮೂಲಕ ಮೈಸೂರು ನಗರದ ಪ್ರಮುಖ ಸ್ಥಳೀಯ ಚಾನೆಲ್ಗಳಾದ ಅಮೋಘ, ಸಿ- ಚಾನಲ್ ಮತ್ತು ಯು.ಎಂ.ಎನ್ ಚಾನಲ್ಗಳಲ್ಲಿ ದಸರಾ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುಗು. ಇದರಿಂದ ಕಾರ್ಯಕ್ರಮದ ಸ್ಥಳಗಳಿಗೆ ಬರಲು ಸಾಧ್ಯವಾಗದ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಕಾರ್ಯಕ್ರಮಗಳನ್ನು ಆಸ್ವಾದಿಸಬಹುದಾಗಿದೆ.
(ದಟ್ಸ್ ಕನ್ನಡವಾರ್ತೆ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications