ಮೈಸೂರು ದಸರಾಕ್ಕೆ ಜಗಮಗಿಸುವ ದೀಪಾಲಂಕಾರ

ಪ್ರತಿವರ್ಷವೂ ಅಲಂಕೃತಗೊಳ್ಳುವ ಹೊಸ ಸಯ್ಯಾಜಿರಾವ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ಚೌಕ, ಆಯಕಟ್ಟಿನ ವೃತ್ತಗಳು, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ಬೆಟ್ಟದ ಮೇಲೆ ಪ್ರವಾಸಿಗರನ್ನು ಆಕರ್ಷಿಸುವ 'ಸುಸ್ವಾಗತ', ನಂಜನಗೂಡು ರಸ್ತೆ, ಬೆಂಗಳೂರು ರಸ್ತೆ, ಹರ್ಷ ರಸ್ತೆಯಲ್ಲಿನ ಕರ್ಜನ್ ಪಾರ್ಕ್-3, ಕೆ.ಆರ್.ವೃತ್ತದಿಂದ ಬಸವೇಶ್ವರ ವೃತ್ತದವರೆರೆಗಿನ ರಸ್ತೆ, ಮಹದೇಶ್ವರ ರಸ್ತೆ (ಹಾರ್ಡಿಂಜ್ ವೃತ್ತದಿಂದ ಟೆರಿಷಿಯನ್ ಕಾಲೇಜ್ವರೆವಿಗೆ).
ಹರ್ಷ ರಸ್ತೆ ಮತ್ತು ಹಳೇ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಹೊಂದಿರುವ ಅಶೋಕ ರಸ್ತೆ, ಅರಮನೆಯಿಂದ ಪೌಂಟೆನ್ ವೃತ್ತ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆ.ಎಲ್.ಬಿ.ರಸ್ತೆ, ನ್ಯೂ ಮೈಸೂರು ಬೆಂಗಳೂರು ರಸ್ತೆ, ಮೈಸೂರು ಮೃಗಾಲಯದ ಸುತ್ತಮುತ್ತ, ಎಸ್.ಪಿ.ಕಛೇರಿ ಸುತ್ತ ಮುತ್ತ, ಉತ್ತನಹಳ್ಳಿ, ದೇವಸ್ತಾನ, ಚೆಲುವಾಂಬ ಉದ್ಯಾನವನ, ಸ್ವಾತಂತ್ಯ್ರ ಹೋರಾಟಗಾಋಆರ ಉದ್ಯಾನವನ (ಸುಬ್ಬರಾಯನ ಕೆರೆ ಉದ್ಯಾನವನ), ಜಗನ್ಮೋಹನ ಅರಮನೆ, ಶಿವರಾಂಪೇಟೆ, ವಿನೋಬಾ ರಸ್ತೆ, ಪೂರ್ವ, ಪಶ್ಚಿಮ ಕಾಂತರಾಜೇ ಅರಸ್ ರಸ್ತೆ, ಅಗ್ರಹಾರ ವೃತ್ತ, ಮಿಲಾದ್ ಉದ್ಯಾನವನ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಾಮಲಿಂಗೇಶ್ವರ ಉದ್ಯಾನವನ (ವಿದ್ಯಾರಣ್ಯಪುರಂ), ಮಹಾತ್ಮಗಾಂಧಿ ರಸ್ತೆ, ಅಂಬೇಡ್ಕರ್ ಉದ್ಯಾನವನ, ನಟನಾ ರಂಗಮಂಟಪ, ಇವುಗಳೆಲ್ಲವೂ ದೀಪಾಲಂಕಾರಗೊಳ್ಳಲಿವೆ.
ವಿಶೇಷವಾಗಿ ದಿವಂಗತ ಜಯಚಾಮರಾಜೇಂದ್ರ ಒಡೆಯರ್ರವರ ಆಕೃತಿಯನ್ನು ವಿದ್ಯತ್ ದೀಪಗಳೊಂದಿಗೆ ಬಿಂಬಿಸಲಾಗುತ್ತಿದೆ. ನಗರದ ರೈಲು ನಿಲ್ದಾನದಿಂದ ಇರ್ವಿನ್ ರಸ್ತೆ ಮೂಲಕ ಹಾರ್ಡಿಂಜ್ ವೃತ್ತದವರೆಗಿನ ರಸ್ತೆ, ಮಿಲೇನಿಯಮ್ ವೃತ್ತದಿಂದ ಜೆ.ಎಸ್.ಎಸ್. ದಂತ ಕಾಲೇಜು ಮೂಲಕ ಬೆಂಗಳೂರು ರಸ್ತೆಯ ಟೋಲ್ಗೆಟ್ವರೆಗಿನ ರಸ್ತೆ, ಬಿ,ಎನ್.ರಸ್ತೆಯ ಫೈವ್ ಲೈಟ್ ವೃತ್ತದಿಂದ ನಗರ ಬಸ್ ನಿಲ್ದಾಣದವರೆಗಿನ ರಸ್ತೆ, ರಾಮಸ್ವಾಮಿ ವೃತ್ತದಿಂದ ಚಾiರಾಜ ಜೋಡಿರಸ್ತೆಯ ಮೂಲಕ ಜೆ.ಎಸ್.ಎಸ್. ವೃತ್ತದ ವರೆಗಿನ ರಸ್ತೆ, ಜಿಲ್ಲಾ ಪಂಚಾಯತ್ ಕಛೇರಿಯಿಂದ ಕೃಷ್ಣರಾಜೇಂದ್ರ ಬೂಲ್ವಾರ್ಡ ಮೂಲಕ ವಿನೋಬಾ ರಸ್ತೆಯಲ್ಲಿರುವ ಕಮಾನಿನವರೆಗಿನ ರಸ್ತೆಗಳು ಅಲಂಕಾರಗೊಳ್ಳಲಿವೆ.
ವಿಶೇಷತೆಗಳು
ಮಾತೃಮಂಡಳಿ ವೃತ್ತ, ಸುಭಾಷ್ನಗರ ಪಾರ್ಕ್, ಸಿದ್ಧಿಕ್ ನಗರ ಪಾರ್ಕ್, ವಿಶ್ವಮಾನವ ಪಾರ್ಕ್, ಮಾರುತಿ ವೃತ್ತ, ನ್ಯೂ ಕಾಂತರಾಜ್ ಅರಸ್ ರಸ್ತೆ, ಕೆ.ಜಿ.ಕೊಪ್ಪಲ್, ವಿಶ್ವಮಾನವ ಜೋಡಿ ರಸ್ತೆ, ಕುಕ್ಕರಹಳ್ಳಿ ಟ್ಯಾಂಕ್ ರಸ್ತೆಯ ಮರಗಳಿಗೆ ದೀಪಾಲಂಕಾರ, ನೆಹರು ಪಾರ್ಕ್ ಉದಯಗಿರಿ, ಕೆ.ಆರ್.ಪಾರ್ಕ್ ಮಂಡಿಮೊಹಲ್ಲಾ, ದಸರಾ ದೀಪಾಲಂಕಾರ ಇತಿಹಾಸದಲ್ಲೇ ಕಳೆದ ವರ್ಷದಲ್ಲೇ ಬನ್ನಿಮಂಟಪ ಹಾಗೂ ಜಂಬೂ ಸವಾರಿ ಮಾರ್ಗದ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಚಾಮುಂಡಿ ಬೆಟ್ಟದ ದೇಗುಲದ ಬಳಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ, 14 ಸಂಖ್ಯೆ ವಿದ್ಯುತ್ ಜನರೇಟರ್ಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚಿನ ಸೊಬಗು ಮೂಡಿಸುವ ಸಲುವಾಗಿ, ಸಾಲುಮರಗಳು ಬಹುವರ್ಣಗಳ, ಹೆಚ್ಚಿನ ಮೆಟಲ್ ಹ್ಯಾಲೈಡ್ ದೀಪಗಳೊಂದಿಗೆ ಮತ್ತು ದೀಪಗಳ ಸರಮಾಲೆಗಳೊಂದಿಗೆ ಆಕರ್ಷಣೀಯವಾಗಲಿವೆ. ದಸರಾ ದೀಪಾಲಂಕಾರ ಉಪಸಮಿತಿ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳ ಸಹಯೋಗದಲ್ಲಿನ ಈ ಬಾರಿಯ ಪ್ರಯತ್ನ, ಪ್ರವಾಸಿಗರು ಮತ್ತು ಮೈಸೂರು ಜನತೆಯ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ. ಈ ಬಾರಿ ಒಟ್ಟು 1,63,000 ಬಲ್ಬ್ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ಸ್, ಮತ್ತು 12 ವಿಶೇಷ ಬೆಳಕಿನ ಗಣಕೀಕೃತ ದೀಪಗಳನ್ನು ಉಪಯೋಗಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications