ಈ ದಸರೆಯಲ್ಲಿ 35 ಸ್ತಬ್ದ ಚಿತ್ರ ಮೆರವಣಿಗೆ

Shobha Karandlaje
ಮೈಸೂರು, ಸೆ. 9 : ದಸರಾ ಸ್ಥಬ್ದಚಿತ್ರ ಉಪಸಮಿತಿ ಸಭೆಯನ್ನು ದಸರಾ ಸ್ತಬ್ದಚಿತ್ರ ಉಪಸಮಿತಿ ಅದ್ಯಕ್ಷರಾದ ಎಂ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಮಣಿವಣ್ಣನ್ ಹಾಗೂ ದಸರಾ ಉಪವಿಶೇಷಾಧಿಕಾರಿಗಳು ಹಾಗೂ ಪೋಲೀಸ್ ಆಯುಕ್ತರಾದ ಸುನಿಲ್ ಅಗರವಾಲ್ ನೇತೃತ್ವದಲ್ಲಿ ಸಭೆ ನಡೆಯಿತು.

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು, ಇತರೆ ಇಲಾಖಾ ಅಧಿಕಾರಿಗಳ ಸಭೆಯನ್ನು ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಸದರಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಗಳು ಹಾಗೂ ವಿವಿಧ ಇಲಾಖೆಗಳಿಂದ ನಿರ್ಮಾಣ ಮಾಡುತ್ತಿರುವ ಸ್ಥಬ್ದಚಿತ್ರಗಳ ರೇಖಾ ಚಿತ್ರಗಳ ಮಾದರಿಯನ್ನು ಪರಿಶೀಲಿಸಿ ಒಟ್ಟು 35 ಸ್ಥಬ್ದಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಸದರಿ ಸ್ತಬ್ದಚಿತ್ರಗಳಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ನಿಂದ ಪಂಚಲಿಂಗದರ್ಶನ, ಕಾವೇರಿ ನೀರಾವರಿ ನಿಗಮದಿಂದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕೆ ಆರ್ ಎಸ್ ಅಣೆಕಟ್ಟೆ, ಮಂಡ್ಯ ಜಿಲ್ಲಾ ಪಂಚಾಯತ್ ನಿಂದ 100 ವರ್ಷಗಳು ತುಂಬಿರುವ ಬಗ್ಗೆ ಶಿವನಸಮುದ್ರ ಜಲವಿದ್ಯುತ್ ಘಟಕ, ಕೊಡಗು ಜಿಲ್ಲಾ ಪಂಚಾಯತ್‌ನಿಂದ ಕಾರ್ಗಿಲ್ ವಿಜಯ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣಾರ್ಥಗಳ ಬಗ್ಗೆ ಸ್ತಬ್ದಚಿತ್ರಗಳನ್ನು ನಿರ್ಮಿಸುತ್ತಿದ್ದು, ಸದರಿ ಸ್ತಬ್ದಚಿತ್ರಗಳನ್ನು ನಿರ್ಮಿಸಲು ಎ ಪಿ ಎಂ ಸಿ ಆವರಣದಲ್ಲಿ ಸ್ಥಳಾವಕಾಶ ನೀಡಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+